Mandya : ಮೂಲ ಕಾಂಗ್ರೆಸಿಗರಿಗೆ ಟಿಕೆಟ್ ಕೈ ತಪ್ಪುವ ಭೀತಿ; ದೆಹಲಿಗೆ ವಿಸಿಟ್ ಮಾಡಿದ ಮಂಡ್ಯ ಆಕಾಂಕ್ಷಿಗಳು…..
ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲಾ ಕ್ಷೇತ್ರಗಳಲ್ಲೂ ಎಲೆಕ್ಷನ್ ಟಿಕೆಟ್ ಪಡೆಯಲು ಆಕಾಂಕ್ಷಿಗಳು ಕಸರತ್ತು ನಡೆಸುತ್ತಿದ್ದಾರೆ. ಮಂಡ್ಯ ಕ್ಷೇತ್ರದಲ್ಲೂ ಎಲೆಕ್ಷನ್ ಕಾವು ಜೋರಾಗಿದ್ದು, ಟಿಕೆಟ್ ಗಾಗಿ ಹಗ್ಗ ಜಗ್ಗಾಟ ಶುರುವಾಗಿದೆ.
ಮಂಡ್ಯ ಕ್ಷೇತ್ರದಲ್ಲಿ ಮೂಲ ಕಾಂಗ್ರೆಸಿಗರಿಗೆ ಟಿಕೆಟ್ ಕೈ ತಪ್ಪುವ ಹಿನ್ನಲೆಯಲ್ಲಿ ಮಂಡ್ಯ ಮೂಲ ಕಾಂಗ್ರೆಸಿಗರು ರಾಷ್ಟ್ರೀಯ ನಾಯಕರ ಮೊರೆ ಹೋಗಿದ್ದಾರೆ. ಈ ಕುರಿತು ಮಾಜಿ ಸಚಿವ ಆತ್ಮಾನಂದ ಅಂಡ್ ಟೀಂ ದೆಹಲಿ ಪ್ರವಾಸ ಕೈಗೊಂಡಿದೆ.
ಆತ್ಮಾನಂದ ಜೊತೆ ಟಿಕೆಟ್ ಗಾಗಿ ಕಸರತ್ತು ಆರಂಭಿಸಿರುವ ಅಮರಾವತಿ ಚಂದ್ರಶೇಖರ್, ಶಿವಾನಂದ, ಮಾಜಿ ಮೈಷುಗರ್ ಅಧ್ಯಕ್ಷ ರಾಮಲಿಂಗಯ್ಯ ಸೇರಿದಂತೆ ಹಲವರು ದೆಹಲಿಗೆ ಭೇಟಿ ನೀಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಭೇಟಿ ಮಾಡಿ ಮೂಲ ಕಾಂಗ್ರೇಸ್ಸಿಗರಿಗೆ ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದಾರೆ.
ಚೆಲುವರಾಸ್ವಾಮಿಯ ಮೇಲೆ ಹೈಕಮಾಂಡ್ ಗೆ ದೂರು ನೀಡಿದ್ದು ನಿನ್ನೆ ಮೊನ್ನೆ ಬಂದವರಿಗೆ ಟಿಕೆಟ್ ಕೊಡಿಸಲು ಮುಂದಾಗಿದ್ದಾರೆ, ಜಿಲ್ಲೆಯಲ್ಲಿ ಮೂಲಕ ಕಾಂಗ್ರೇಸ್ಸಿಗರಿಗೆ ಬೆಲೆ ಇಲ್ಲ ಒಬ್ಬರೇ ಎಲ್ಲಾ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಿ. ಇಲ್ಲವಾದಲ್ಲಿ ಪಕ್ಷದಲ್ಲಿ ಬಿರುಕು ಮೂಡುತ್ತೆ ಎಂದು ಹೈಕಮಾಂಡ್ ಗೆ ದೂರು ಸಲ್ಲಿಸಿದ್ದಾರೆ.
Mandya : Fear of losing ticket to original Congressman; Mandya aspirants who visited Delhi