Mangalore | ಸುರತ್ಕಲ್ ಟೋಲ್ ಗೇಟ್ ಪ್ರತಿಭಟನೆ : ಪ್ರತಿಭಟನಾಕಾರರ ವಿರುದ್ಧ ಕೇಸ್
ಮಂಗಳೂರು : ಸುರತ್ಕಲ್ ಟೋಲ್ ಗೇಟ್ ವಿವಾದ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ.
ಅಕ್ಟೋಬರ್ 18 ರಂದು ಟೋಲ್ ಗೇಟ್ ತೆರವಿಗಾಗಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಪ್ರತಿಭಟನೆ ನಡೆಸಿತ್ತು.
ಈ ಸಂಬಂಧ ಇದೀಗ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.
ಪ್ರತಿಭಟನೆ ಸಂಬಂಧ ಎನ್ ಎಂಪಿಆರ್ ಸಿಎಲ್ ನ ಪ್ರಾಜೆಕ್ಟ್ ಡೈರಕ್ಟರ್ ಆಗಿರುವ ಲಿಂಗೇಗೌಡ ಒಂದು ದೂರು, ಎನ್ ಎಂ ಪಿ ರೋಡ್ ಕಂಪನಿ ಲಿಮಿಟೆಡ್ ನ ಫೀಸ್ ಕಲೆಕ್ಷನ್ ಏಜೆನ್ಸಿಯ ನೂರ್ ಮುಹ್ಮದ್ ಸಂಸ್ಥೆಯ ಎನ್ ಐಟಿಆರ್ ಟೋಲ್ ವಿಭಾಗದ ಮ್ಯಾನೇಜರ್ ಶಸುಕುಮಾರ್ ಮತ್ತೊಂದು ದೂರು ನೀಡಿದ್ದಾರೆ.
ಇದಕ್ಕೆ ಸುರತ್ಕಲ್ ಟೋಲ್ ಗೇಟ್ ಹೋರಾಟಗಾರರ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.