ಮತ್ತೆ ಕೋಮು ರಾಜಕೀಯಕ್ಕೆ ಬಿಜೆಪಿ ವಾಪಸ್ – ಮಾಯಾವತಿ
ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಯೋಗಿ ಆದಿತ್ಯನಾಥ್ ಅವರ ನೇತೃತ್ವದ ಆಡಳಿತ ರೂಢ ಪಕ್ಷ ಬಿಜೆಪಿ ಹಾಗೂ ಬಿಎಸ್ ಪಿ ಸೇರಿದಂತೆ ಎಲ್ಲಾ ಪಕ್ಷಗಳು ಭರ್ಜರಿ ಕಸರತ್ತು ನಡೆಸುತ್ತಿವೆ. ಈ ನಡುವೆ ವಾದ , ಪ್ರತಿವಾದ , ಆರೋಪ ಪ್ರತ್ಯಾರೋಪಗಳು ಜೋರಾಗಿದೆ.
ಚುನಾವಣೆಗೂ ಮುನ್ನ ಬಿಜೆಪಿಯು ತನ್ನ ಸಂಕುಚಿತ ಕೋಮು ಕಾರ್ಯಸೂಚಿಯೊಂದಿಗೆ ಮರಳಿದೆ. ಅವರ ಅಭಿವೃದ್ಧಿ ಯೋಜನೆಗಳು ಪೊಳ್ಳು ಎಂದು ಈಗಾಗಲೇ ಸಾಬೀತಾಗಿದೆ ಎಂದು ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಆರೋಪಿಸಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಬಿಜೆಪಿ ಪಕ್ಷವು ಈಗ ಧಾರ್ಮಿಕ ಭಾವನೆಗಳು, ಹಿಂದೂ–ಮುಸ್ಲಿಂ ವಿಭಜನೆ ಎಂಬ ರೀತಿಯ ವಿಚಾರಗಳಲ್ಲಿ ರಾಜಕೀಯ ಮಾಡಲು ಆರಂಭಿಸಿದೆ. ಆದ್ರೆ ಜನರು ಮತ್ತೆ ಮೋಸ ಹೋಗಲ್ಲ. ರಾಜ್ಯದ ಜನರ ತಲಾ ಆದಾಯ ಕುಂಠಿತವಾಗಿದೆ. ಬಡವರು ಹಾಗೂ ಹಿಂದುಳಿದವರಾಗಿ ಉಳಿದಿರುವುದನ್ನು ಇತ್ತೀಚಿನ ರಿಸರ್ವ್ ಬ್ಯಾಂಕಿನ ಅಂಕಿ ಅಂಶಗಳು ದೃಢೀಕರಿಸಿವೆ ಎಂದು ಟೀಕಿಸಿದ್ದಾರೆ.