ಐದಾರು ದಿನ ಲಾಕ್ ಡೌನ್ ಗೆ ಕೊರೊನಾ ಕಂಟ್ರೋಲ್ ಆಗಲ್ಲ : ಸುಧಾಕರ್
ಕಲಬುರಗಿ : ಐದಾರು ದಿನ ಲಾಕ್ ಡೌನ್ ಗೆ ಕಂಟ್ರೋಲ್ ಬರೋದಿಲ್ಲ. ಸಂಪೂರ್ಣ ಲಾಕ್ ಡೌನ್ ಮಾಡುವ ವಿಚಾರ ಸರ್ಕಾರದ ಮುಂದೆ ಇಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಚಿಕ್ಕಪಬಳ್ಳಾಪುರದವರಿಗೆ ಬೆಂಗಳೂರಿನ ಮೂರು ಆಸ್ಪತ್ರೆಗಳಲ್ಲಿ ಶೇಕಡಾ 15 ರಷ್ಟು ಬೆಡ್ ಮೀಸಲು ಸಂಬಂಧ ಪ್ರತಿಕ್ರಿಯೆ ನೀಡಿದ ಡಾ.ಕೆ.ಸುಧಾಕರ್, ರಾಜ್ಯದ ಯಾವ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಇಲ್ಲ, ಅಂತಹ ಜಿಲ್ಲೆಗಳಿಗೆ ಪಕ್ಕದ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ.
ಈ ಹಿಂದೆ ಕೊರೊನಾ ಸಮಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಈ ಆರ್ಡರ್ ಆಗಿರಲಿಲ್ಲ. ಹೀಗಾಗಿ ನಾನು ಈಗ ಆರ್ಡರ್ ಮಾಡಿದ್ದೇನೆ. ಈ ಆದೇಶಕ್ಕೆ ಯಾವ ಸಚಿವರ ಬೇಸರ ಸಹ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಎಂಬತ್ತರಷ್ಟು ಜನರು ಯಾವುದೇ ರೋಗದ ಲಕ್ಷಣ ಹೊಂದಿಲ್ಲ. ತೀವ್ರ ಸೋಂಕಿತ ಐದು ರಷ್ಟು ಜನರಿಗೆ ಬೆಡ್ ಅವಶ್ಯಕತೆ ಇದೆ.
ಆದರೆ ಸೋಂಕು ಬಂದ ತಕ್ಷಣ ಬಹಳ ಜನರು ಆಸ್ಪತ್ರೆಗೆ ಹೋಗ್ತಿದ್ದಾರೆ. ಕೆಲವರು ಆಕ್ಸಿಜನ್ ಸಿಲಿಂಡರ್ ಮನೆಗೆ ತೆಗೆದುಕೊಂಡು ಹೋಗಿ ದಾಸ್ತಾನು ಮಾಡಿಕೊಳ್ತಿದ್ದಾರೆ ಅದು ಸರಿಯಲ್ಲಾ ಎಂದು ಬೇಸರ ವ್ಯಕ್ತಪಡಿಸಿದರು.