ಇಡೀ ವಿಶ್ವವನ್ನೇ ಬೆಚ್ಚಿಬೀಳಿಸುತ್ತಿರುವ ಮಹಾಮಾರಿ ಕೊರೋನಾ ವೈರಸ್ ಗೆ ಗೋಮೂತ್ರ ಮದ್ದು ಎಂದು ಅವಧೂತರಾದ ವಿನಯ್ ಗುರೂಜಿ ಹೇಳಿದ್ದಾರೆ. ಅರಕಲಗೂಡು ತಾಲೂಕಿನ ಮಲ್ಲಪ್ಪನಹಳ್ಳಿಯಲ್ಲಿ ಸುಮಾರು ಆರು ಸಾವಿರ ವರ್ಷಗಳ ಹಿಂದೆ ದೊರೆತಿರುವ ತಾಳೆಗರಿಯಲ್ಲಿ ಈ ಬಗ್ಗೆ ಉಲ್ಲೇಖವಿದೆ. ಈಶಾನ್ಯ ಭಾಗದಲ್ಲಿ ವಿಷ ಗಾಳಿ ಬೀಸಲಿದೆ. ಜನ ರಸ್ತೆಗಳಲ್ಲಿ ಸಾಯುತ್ತಾರೆ ಎಂದು ಭವಿಷ್ಯವನ್ನು ಕಂಡಿದ್ದರು. ಕೊರೋನಾ ವೈರಸ್ ಗೆ ಔಷಧಿ ಇಲ್ಲ ಎನ್ನುವುದು ಮೂರ್ಖತನವಾಗುತ್ತದೆ. ಗೋಮೂತ್ರ ಕೊರೋನಾ ವೈರಸ್ ಗೆ ಪರಿಣಾಮಕಾರಿಯಾದ ಔಷಧವಾಗಬಲ್ಲದು. ಗೋಮೂತ್ರದೊಂದಿಗೆ 40 ಗಿಡಮೂಲಿಕೆ ಸೇರಿಸಿದರೆ ಕೊರೋನಾ ವೈರಸ್ ಗುಣಮುಖವಾಗುತ್ತದೆ. ಗೋಮೂತ್ರದಲ್ಲಿ ಎಲ್ಲದಕ್ಕೂ ಔಷಧವಿದೆ. ಪರಿಸರದ ಸಮಸ್ಯೆಗಳಿಗೆ ಪರಿಸರದಿಂದಲೇ ಉತ್ತರ ಸಿಗುತ್ತದೆ ಎಂದು ತಿಳಿಸಿದ್ದಾರೆ.
ಪೆನ್ ಡ್ರೈವ್ ಪ್ರಕರಣದಲ್ಲಿ ಎ. ಮಂಜು ಹೆಸರು!
ಹಾಸನ: ಸಂಸದ ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣಕ್ಕೆ (Prajwal Revanna Pendrive Case) ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೆನ್ಡ್ರೈವ್ ವೈರಲ್ ಮಾಡಿದ ಆರೋಪದ ಚೇತನ್, ಲಿಖಿತ್ ಹೆಸರಿನ...