ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಬಾಕಿಯಾದ ಉತ್ತರ ಕರ್ನಾಟಕ ಮೂಲದ. ವಲಸೆ ಕೂಲಿ ಕಾರ್ಮಿಕರನ್ನು. ಮಂಗಳೂರು ಪುರಭವನದಿಂದ ತಮ್ಮ ಸ್ವಗ್ರಾಮಕ್ಕೆ ಕಳಿಸಿಕೊಡಲಾಯಿತು. ದಕ್ಷಿಣ ಕನ್ನಡ ಜಿಲ್ಲಾಡಳಿತ ಕಾರ್ಮಿಕರನ್ನು ಕಳಿಸಲು ಸರಕಾರಿ ಹಾಗೂ ಖಾಸಗಿ ಬಸ್ ವ್ಯವಸ್ಥೆ ಮಾಡಲಾಯಿತು. ಉತ್ತರ ಕರ್ನಾಟಕ ಮೂಲದ ಸಾವಿರಕ್ಕೂ ಅಧಿಕ ಕೂಲಿ. ಕಾರ್ಮಿಕರ ದಂಡು ಏಕಾಏಕಿ ಟಾನ್ ಹೌಲ್ . ಮುಂಭಾಗಕ್ಕೆ ಜಮಾಯಿಸಿದ್ರು ಸಾಮಾಜಿಕ ಅಂತರವಿಲ್ಲದೆ ಗುಂಪು ಗುಂಪಾಗಿ. ಸೇರಿದ್ರು ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿದ್ದು. ಕೂಡಲೇ ಎಚ್ಚೆತ್ತ ದಕ್ಷಿಣ ಕನ್ನಡ ಜಿಲ್ಲಾಡಳಿತ ರಾತ್ರಿ. 50 ಕ್ಕಿಂತ ಅಧಿಕ ಬಸ್ಸಿನ ವ್ಯವಸ್ಥೆ ಮಾಡಿ ಹಾವೇರಿ ,ಶಿವಮೊಗ್ಗ, ದಾವಣಗೆರೆ, ಬಿಜಾಪುರ ,ಬಾಗಲಕೋಟೆ, ಮೂಲದ ಸುಮಾರು ಸಾವಿರಕ್ಕೂ ಅಧಿಕ ವಲಸೆ ಕೂಲಿ ಕಾರ್ಮಿಕರನ್ನು ತಮ್ಮ ತಮ್ಮ ಊರಿಗೆ ಕಳಿಸಿಕೊಡಲಾಯಿತು.
ಬಿಡದಿ ವಿಚಾರದಲ್ಲಿ ಚರ್ಚೆಗೆ ಈಗಲೂ ಸಿದ್ಧ: ಹೆಚ್.ಡಿ. ಕುಮಾರಸ್ವಾಮಿ
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಡದಿ ಟೌನ್ಶಿಪ್ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಮತ್ತೊಮ್ಮೆ ಬಹಿರಂಗ ಚರ್ಚೆಯ ಆಹ್ವಾನ ನೀಡಿದ್ದಾರೆ. ಈ...








