Minister R. Ashok | ಕಾಂಗ್ರೆಸ್ ನಲ್ಲಿ ಲೀಡರ್ ಗಳನ್ನ ಬ್ಯಾಟರಿ ಹಾಕಿ ಹುಡುಕಬೇಕು
ಕಲಬುರಗಿ : ಕಾಂಗ್ರೆಸ್ ಪಕ್ಷದಲ್ಲಿ ಲೀಡರ್ ಗಳು ಎಲ್ಲಿದ್ದಾರೆ ಅಂತಾ ಬ್ಯಾಟರಿ ಹಾಕಿಕೊಂಡು ಹುಡುಕಬೇಕು ಎಂದು ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ವಿಶೇಷ ಸ್ಥಾನಮಾನ ನೀಡಿದೆ.
ಕೇಂದ್ರೀಯ ಬಿಜೆಪಿ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿಲ್ಲಿ ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್ ಸ್ಥಾನ ನೀಡಿದೆ.
![Minister R. Ashok Leaders in Congress should be searched with batteries saaksha tv](http://saakshatv.com/wp-content/uploads/2022/08/m-b-patil.jpg)
ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್, ಇದು ಮೂಗಿಗೆ ತುಪ್ಪ ಸವರುವ ತಂತ್ರ ಹೇಳಿದರು. ಇದಕ್ಕೆ ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಅವರಂತಹ ನಾಯಕರು ಕಾಂಗ್ರೆಸ್ ನಲ್ಲಿ ಎಲ್ಲಿದ್ದಾರೆ ? ಕಾಂಗ್ರೆಸ್ ನಲ್ಲಿ ನಾಯಕರು ಎಲ್ಲಿದ್ದಾರೆ ಅಂತಾ ಬ್ಯಾಟರಿ ಹಾಕಿಕೊಂಡು ಹುಡುಕಬೇಕು ಎಂದು ಆರ್.ಅಶೋಕ್ ವ್ಯಂಗ್ಯವಾಡಿದರು.
ದೆಹಲಿಯಲ್ಲಿ ಕಾಂಗ್ರೆಸ್ ಒಡೆದು 23 ಬಾಗಿಲುಗಳಾಗಿವೆ. ಎಂಬಿ ಪಾಟೀಲರು ಬಿಜೆಪಿಗೆ ಸೇರಿ ಆಮೇಲೆ ಏನಾದ್ರೂ ಸಲಹೆ ಕೊಡಲಿ ಎಂದು ಹೇಳಿದರು.