ಧಾರವಾಡ ಗ್ರಾಮೀಣ ಶಾಸಕ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಮ್ಮ ಬೇಸರ ಹೊರ ಹಾಕಿದ್ದಾರೆ.
ಸಮಾಜಿಕ ಜಾಲತಾಣದಲ್ಲಿ ಹೊರ ಹಾಕಿದ್ದಾರೆ. ಸಮಾಜಿಕ ಜಾಲತಾಣದಲ್ಲಿ ವಿನಯ ಕುಲಕರ್ಣಿ ಬೆಂಬಲಿಗ ಸಚಿನ್ ಅಸುಂಡಿ ತಮ್ಮ ಕಾಂಗ್ರೆಸ್ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ನಡೆ ತುಂಬಾ ಬೇಸರ ಉಂಟು ಮಾಡಿದೆ. ನಾವು ಯಾಕೆ ಜೀವಂತವಿರಬೇಕು..?. ವಿನಯ ಕುಲಕರ್ಣಿಯವರು ಕ್ಷೇತ್ರದಿಂದ ಹೊರ ಇದ್ದರೂ ಅವರನ್ನು ಆರಿಸಿ ತಂದಿದ್ದೇವೆ. ಆದರೆ ಈಗ ಅಂತಹ ವ್ಯಕ್ತಿಗೆ ಸಚಿವ ಸ್ಥಾನ ನೀಡದೆ, ನೋವು ಉಂಟು ಮಾಡಿದೆ. ಕೋಪ ಬರುತ್ತಿದೆ ಎಂದು ಪೋಸ್ಟ್ ಹಾಕುವ ಮೂಲಕ ಬೇಸರ ಹೊರಹಾಕಿದ್ದಾರೆ.
ಈ ಪೋಸ್ಟ್ ಗೆ ಅನೇಕ ವಿನಯ ಅಭಿಮಾನಿಗಳು ಹಾಗೂ ಕೈ ಪಕ್ಷದ ಕಾರ್ಯಕರ್ತರು ಕಾಮೆಂಟ್ ಮಾಡಿ, ತಮ್ಮ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಹಲವರು ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತದೆ ಕಾಯ್ದು ನೋಡೋಣ ಎಂದು ಹೇಳಿದ್ದಾರೆ.