ವ್ಯಾಪಾರಿಗಳಿಂದ ಪ್ರತಿಭಟನೆ : ಸ್ಥಳದಿಂದ ಕಾಲ್ಕಿತ್ತ ಶಾಸಕಿ ಖನೀಜ್ ಪಾತೀಮಾ
ಕಲಬುರಗಿ : ತೊಗರಿ ನಾಡು ಕಲಬುರಗಿಯಲ್ಲಿ ತರಕಾರಿ ವ್ಯಾಪಾರಕ್ಕೆ ಅವಕಾಶ ಕೊಡದ ಕಾರಣಕ್ಕೆ ನಗರದ ಸೂಪರ್ ಮಾರ್ಕೇಟ್ ನಲ್ಲಿ ವ್ಯಾಪಾರಸ್ಥರು ದಿಡೀರನೆ ಪ್ರತಿಭಟನೆ ನಡೆಸಿದ್ದಾರೆ.
ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡಲಾಗಿತ್ತು. ಲಾಕ್ ಡೌನ್ ಆದ ದಿನದಿಂದ ವ್ಯಾಪಾರ ಮಾಡುವುದನ್ನು ನಿಲ್ಲಿಸಿದ್ದರು. ಲಾಕ್ ಡೌನ್ ಸಡಿಲಗೊಂಡ ಬಳಿಕ ವ್ಯಾಪಾರ ಮಾಡಲು ಪೊಲೀಸರು ಮೌಖಿಕ ಒಪ್ಪಿಗೆ ನೀಡಿದ್ದರು. ಹಾಗಾಗಿ ವ್ಯಾಪಾರಿಗಳು ವ್ಯಾಪಾರ ಶುರು ಮಾಡಿದ್ದರು. ಆದರೆ ಸಂಜೆ ವೇಳೆಯಲ್ಲಿ ವ್ಯಾಪಾರ ಸ್ಥಗಿತಗೊಳಿಸುವಂತೆ ಪೊಲೀಸರು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ವ್ಯಾಪಾರಸ್ಥರು ಸ್ಥಳಕ್ಕೆ ಶಾಸಕಿ ಖನೀಜ್ ಪಾತೀಮಾ ಆಗಮಿಸಿದ್ದರು.
ಈ ವೇಳೆ ಶಾಸಕಿ ಖನೀಜ್ ಪಾತೀಮಾ ಮತ್ತು ಅವರ ಪುತ್ರನ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಸಮಸ್ಯೆಗೆ ಶಾಸಕಿ ಖನೀಜ್ ಪಾತೀಮಾ ಸ್ಪಂದಿಸಿಲ್ಲ ಎಂದು ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕ್ರೋಶ ಹೆಚ್ಚಾಗುತ್ತಿದ್ದಂತೆ ಸ್ಥಳದಿಂದ ಶಾಸಕ ಖನೀಜ್ ಪಾತೀಮಾ ತೆರಳಿದರು