PMO ಕೆಲಸಗಾರರ ಕುಟುಂಬದ ಮಕ್ಕಳೊಂದಿಗೆ ರಕ್ಷಾಬಂಧನ ಆಚರಿಸಿದ ಮೋದಿ..
ದೇಶದಲ್ಲಿ ರಕ್ಷಾಬಂಧನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೆಹಲಿಯ ತಮ್ಮ ನಿವಾಸದಲ್ಲಿ ಬಾಲಕಿಯರಿಂದ ರಕ್ಷಾ ಬಂಧನವನ್ನು ಆಚರಿಸಿದರು. ಈ ಸಂದರ್ಭದಲ್ಲಿ, ಪಿಎಂಒ ನಿವಾಸದಲ್ಲಿ ಕೆಲಸ ಮಾಡುವ ತೋಟಗಾರರು, ಪಿಯುನ್ಗಳು, ತೋಟಗಾರರು, ಚಾಲಕರ ಕುಟುಂಬದ ಹೆಣ್ಣುಮಕ್ಕಳು ಮೋದಿಗೆ ರಾಖಿ ಕಟ್ಟಿ ಸಂಭ್ರಮಿಸಿದರು.
ಪ್ರಧಾನಿ ಮೋದಿಗೆ ರಾಖಿ ಕಟ್ಟುತ್ತಿರುವ ವಿಡಿಯೋವನ್ನ ಅಧಿಕಾರಿಗಳು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ ಪ್ರಧಾನಿ ಮೋದಿ ಟ್ವೀಟ್ ಮಾಡಿ ಜನತೆಗೆ ರಕ್ಷಾಬಂಧನದ ಶುಭಾಶಯ ಕೋರಿದ್ದರು. ಅಲ್ಲದೆ ಬಾಲಕಿಯರಿಂದ ರಾಖಿ ಕಟ್ಟಿಸಿಕೊಂಡ ನಂತರ – ಈ ಹೆಣ್ಣುಮಕ್ಕಳೊಂದಿಗೆ ಬಹಳ ವಿಶೇಷವಾದ ರಕ್ಷಾಬಂಧನ ಆಚರಿಸಿಕೊಂಡಿದ್ದಾಗಿ ಬರೆದಿದ್ದಾರೆ.
Every Indian has a special bond with the Tiranga. Gave the Tiranga to my young friends earlier today. The smile on their faces says it all! pic.twitter.com/I7cKCJYeg6
— Narendra Modi (@narendramodi) August 11, 2022
ರಕ್ಷಾಬಂಧನದ ಶುಭಾಶಯ ಕೋರಿದ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ನಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. “ಸಹೋದರ ಮತ್ತು ಸಹೋದರಿಯರ ಪವಿತ್ರ ಸಂಬಂಧದ ಅತ್ಯಂತ ಸುಂದರವಾದ ದಿನ, ಇಂದು ರಾಖಿ ಹಬ್ಬವನ್ನು ದೇಶದಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ರಕ್ಷಾಬಂಧನದ ಶುಭ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಪ್ರತಿಯೊಬ್ಬ ಸಹೋದರ ಸಹೋದರಿಯರ ನಡುವಿನ ಪ್ರೀತಿ ಶಾಶ್ವತವಾಗಿ ಉಳಿಯಲಿ ಎಂದು ನಾನು ಬಯಸುತ್ತೇನೆ. ಇದರೊಂದಿಗೆ ಕೆಲ ಫೋಟೋಗಳನ್ನೂ ಶೇರ್ ಮಾಡಿದ್ದಾರೆ.
ಮುಕ್ತಾರ್ ಅಬ್ಬಾಸ್ ಅವರಿಗೆ ರಾಖಿ ಕಟ್ಟಿದ ಸಾಧ್ವಿ ನಿರಂಜನ್
ರಕ್ಷಾ ಬಂಧನದ ಸಂದರ್ಭದಲ್ಲಿ ಕೇಂದ್ರ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರು ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರ ನಿವಾಸದಲ್ಲಿ ರಾಖಿ ಕಟ್ಟಿದರು. ಇದಲ್ಲದೆ, ಪಂಜಾಬ್ನ ಅಟ್ಟಾರಿ-ವಾಘಾ ಗಡಿಯಲ್ಲಿ ಬಿಎಸ್ಎಫ್ ಯೋಧರೊಂದಿಗೆ ಮಹಿಳೆಯರು ರಾಖಿ ಹಬ್ಬವನ್ನು ಆಚರಿಸಿದರು ಮತ್ತು ಅವರಿಗೆ ರಾಖಿ ಕಟ್ಟಿದರು.
ಇದಕ್ಕೂ ಮುನ್ನ ಬುಧವಾರ ಸಂಜೆ ಉತ್ತರಾಖಂಡ ಮುಖ್ಯಮಂತ್ರಿ ಅವರ ನಿವಾಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿ ರಾಖಿ ಕಟ್ಟಿದರು. ಜೊತೆಗೆ ಅವರಿಗೆ ದೀರ್ಘಾಯುಷ್ಯ ಸಿಗಲಿ ಎಂದು ಹಾರೈಸಿದರು. ರಕ್ಷಾ ಬಂಧನದ ನಿಮಿತ್ತ ಗಾಂಧಿನಗರದ ಅವರ ನಿವಾಸದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಮಹಿಳೆಯರು ಮತ್ತು ಬಾಲಕಿಯರು ರಾಖಿ ಕಟ್ಟಿದರು.