ಸಾಲಗಾರ ರಾಷ್ಟ್ರವಾಗಿದ್ದ ಭಾರತವನ್ನು ಮೋದಿ ಸಾಲಮುಕ್ತಗೊಳಿಸಿದ್ದಾರೆ : ರವಿಕುಮಾರ್
ಬೆಂಗಳೂರು : ಮೇ 30ಕ್ಕೆ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಎರಡನೆ ಇನ್ಮಿಂಗ್ಸ್ ಎರಡು ವರ್ಷ ಪೂರೈಸುತ್ತದೆ.
ಕೋರೊನಾ ಸೋಂಕಿನ ಹಿನ್ನೆಲೆಯಲ್ಲಿ ಯಾವುದೇ ವಿಜೃಂಭಣೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದೆ ಕೇವಲ ಸೇವಾ ಕಾರ್ಯಕ್ರಮಗಳನ್ನು ಮಾತ್ರ ಹಮ್ಮಿಕೊಳ್ಳಲು ರಾಜ್ಯ ಬಿಜೆಪಿ ನಿರ್ಧರಿಸಿದೆ ಎಂದು ಎಂಎಲ್ ಸಿ ರವಿಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಲಗಾರ ರಾಷ್ಟ್ರವಾಗಿದ್ದ ಭಾರತವನ್ನು ನರೇಂದ್ರಮೋದಿಯವರು ಸಾಲಮುಕ್ತ ಭಾರತ ಮಾಡಿದ್ದಾರೆ.
ಎಂಭತ್ತು ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ವಿತರಣೆ, 20ಕೋಟಿ ಬಡ ಮಹಿಳೆಯರಿಗೆ ತಲಾ 500ರೂ, ರೈತರಿಗೆ ಐದು ವರ್ಷಗಳಲ್ಲಿ ತಲಾ 50,000ರೂ ಸಿಗುವಂತೆ ಮಾಡಿರೋದು ಕೇಂದ್ರ ಸರ್ಕಾರದ ಸಾಧನೆಯಾಗಿದೆ.
ಕೇಂದ್ರ ಸರ್ಕಾರ ಒಂದೇ ವರ್ಷದಲ್ಲಿ 900 ಕೋಟಿ ಖರ್ಚು ಮಾಡಿ 2 ಕೋವಿಡ್ ಲಸಿಕೆ ಸಂಶೋಧನೆ ಮಾಡಲು ನೆರವಾಗಿದೆ. ಕೋಟಿಗಟ್ಟಲೆ ಪಿಪಿಇ ಕಿಟ್, ಸ್ಯಾನಿಟೈಸರ್, ಮಾಸ್ಕ್ ಗಳನ್ನು ಉತ್ಪಾದಿಸಿ ರಫ್ತು ಮಾಡುತ್ತಿದ್ದೇವೆ.
ಕೈಗಾರಿಕೋದ್ಯಮಿಗಳಿಗೆ 20ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ನೀಡಲಾಗಿದೆ. ಡಿಆರ್ ಡಿಓ ಸಂಶೋಧಿಸಿರುವ ಡಿಜಿ2ಪೌಡರ್ ವ್ಯಾಕ್ಸಿನ್ ಗೂ ಕೇಂದ್ರ ಸರ್ಕಾರ ಕಾರಣವಾಗಿದೆ.
2ನೇ ವಾರ್ಷಿಕೋತ್ಸವದ ಅಂಗವಾಗಿ ಕರ್ನಾಟಕದ 58ಸಾವಿರ ಬೂತ್ ಗಳಲ್ಲಿ ಸಾರ್ವಜನಿಕರಿಗೆ ಎನ್ 95 ಮಾಸ್ಕ್ ವಿತರಣೆ, ಸ್ಯಾನಿಟೈಸರ್ ,ರೇಷನ್ ಕಿಟ್ ವಿತರಣೆ, ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿ ಮಾಡುವುದು ಮಾಡಲಾಗುತ್ತದೆ.
ಸುಮಾರು ಒಂದು ಕೋಟಿ ಜನರಿಗೆ ಸಹಾಯ ಮಾಡಲು ಉದ್ದೇಶಿಸಲಾಗಿದೆ. ಇದಕ್ಕೆ ಸೇವೆಯೇ ಸಂಘಟನೆ ಎಂದು ಹೆಸರಿಡಲಾಗಿದೆ.
ಬೂತ್ ಅಧ್ಯಕ್ಷರಿಂದ ರಾಜ್ಯಾಧ್ಯಕ್ಷರ ವರಗೆ ಗ್ರಾ.ಪಂ ಸದಸ್ಯರಿಂದ ಹಿಡಿದು ಸಿಎಂ ವರೆಗೆ ಎಲ್ಲರೂ ಸೇವಯೇ ಸಂಘಟನೆಯಲ್ಲಿ ಪಾಲ್ಗೊಳ್ಳುತ್ತಾರೆ. ಎಲ್ಲೂ ಪ್ರಚಾರಕ್ಕಾಗಿ ನಾವು ಇದನ್ನು ಮಾಡುವುದಿಲ್ಲ ಎಂದು ತಿಳಿಸಿದರು.