ಹಣವನ್ನ ಡಬಲ್ ಮಾಡ್ತೇವೆಂದು ನಂಬಿಸಿ ವಂಚಿಸುತ್ತಿದ್ದ ಖದೀಮರ ಗ್ಯಾಂಗ್ ಇದೀಗ ಪೊಲೀಸರ ಅತಿಥಿಯಾಗಿದೆ.. ಜನರನ್ನ ಯಾಮಾರಿಸಿ ಹಣ ಲಪಟಾಯಿಸಿ ಪಾರಾರಿಯಾಗುತ್ತಿದ್ದ ಖದೀಮರನ್ನು ಬಂಧಿಸುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಗ್ಯಾಂಗ್ ಜನರ ಬಳಿ ನಿಮ್ಮ ಹಣವನ್ನು ದುಪ್ಪಟ್ಟು ಮಾಡಿಕೊಡುತ್ತೇವೆಂದು ನಂಬಿಸಿ ಲಕ್ಷಾಂತರ ರೂಪಾಯಿಗಳನ್ನ ಲಪಟಾಯಿಸಿಕೊಂಡು ಜನರಿಗೆ ಪಂಗನಾಮ ಹಾಕುತ್ತಿತ್ತು. ಇದೀಗ ಈ ಗ್ಯಾಂಗ್ ನಲ್ಲಿದ್ದ 8 ಮಂದಿ ಖದೀಮರನ್ನು ಮಂಡ್ಯ ಜಿಲ್ಲೆಯ ಮದ್ದೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ..
ಮೇ 3 ರಂದು ಮದ್ದೂರಿನ ಉಪ್ಲಿನಕೆರೆ ಗೇಟ್ ಬಳಿ ತುಮಕೂರು ಮೂಲದ ಕಿರಣ್ ಮತ್ತು ಪ್ರದೀಪ್ ಅವರಿಗೆ ನಿಮ್ಮ ಹಣವನ್ನು ಡಬಲ್ ಮಾಡಿಕೊಡುತ್ತೇವೆಂದು ಈ ಗ್ಯಾಂಗ್ ಕರೆಸಿತ್ತು. ನಂತರ ಸ್ಥಳಕ್ಕೆ 5.50 ಲಕ್ಷ ರೂ. ತೆಗೆದುಕೊಂಡು ಸ್ಥಳಕ್ಕೆ ಬಂದ ಕಿರಣ್ ಮತ್ತು ಪ್ರದೀಪ್ 5.50 ಲಕ್ಷ ಇರುವ ಬ್ಯಾಗ್ನ್ನು ಆ ಖದೀಮರ ಕೈಗೆ ನೀಡಿದ್ದಾರೆ. ನಂತರ, ಖದೀಮರು ಇವರಿಗೊಂದು ಬ್ಯಾಗ್ ನೀಡಿ 10 ಲಕ್ಷ ಇದೆ ಎಂದು ಪರಾರಿಯಾಗಿದ್ದರು.
ನಂತರ ಆ ಬ್ಯಾಗ್ ತೆಗೆದು ನೋಡಿದ ಮೇಲೆ ಆ ಬ್ಯಾಗ್ ನ ಮೇಲ್ಭಾಗದಲ್ಲಿ 500 ಮತ್ತು 200 ಮುಖ ಬೆಲೆಯ ನೋಟುಗಳು ಅಡಿಯಲ್ಲಿ ನೋಟ್ ಪುಸ್ತಕಗಳು ಮಾತ್ರ ಇದ್ದದ್ದನ್ನ ಕಂಡು ವಂಚನೆಗೊಳಗಾಗಿದ್ದನ್ನ ಅರಿತು ಮದ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆ ನಂತರ ಖದೀಮರಿಗಾಗಿ ಬಲೆ ಬೀಸಿದ ಪೊಲೀಸರು ಆ ಗ್ಯಾಂಗ್ ನವರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ಧಾರೆ.. ನಂಜುಂಡ ಆರಾಧ್ಯ, ಶ್ರೀನಿವಾಸ, ಸಲೀಂ ಉಲ್ಲಾಖಾನ್, ಕೆಂಪರಾಜು, ಸಾಜಿದ್ ಅಹಮದ್, ಮಂಜುನಾಥ್, ಶ್ರೀನಿವಾಸ್ರೆಡ್ಡಿ, ರಾಜು ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 4 ಲಕ್ಷದ 2 ರೂಪಾಯಿ ನಗದು , ಕತ್ಯಕ್ಕೆ 1 ಕಾರು, 1 ಬೈಕ್ ಹಾಗೂ 8 ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ಧಾರೆ ಪೊಲೀಸರು..