ನಾನು ಚಡ್ಡಿ ಹಾಕೋವಾಗ ಪೆಟ್ರೋಲ್ ಬೆಲೆ ಕಡಿಮೆ ಇತ್ತು, ಈಗ ಪ್ಯಾಂಟ್ ಹಾಕ್ತಿದ್ದೀನಿ ಬೆಲೆ ಜಾಸ್ತಿ ಆಗಿದೆ : ಸಂಸದ mp-g-siddheshwar saaksha tv
ದಾವಣಗೆರೆ : ಕೃಷಿ ಕಾನೂನು, ಬೆಲೆ ಏರಿಕೆ ಖಂಡಿಸಿ ಒಂದು ಕಡೆ ರೈತ ಸಂಘಟನೆಗಳು ದೇಶದಾದ್ಯಂತ ಭಾರತ್ ಬಂದ್ ಗೆ ಕರೆಕೊಟ್ಟಿದ್ದರೇ ಇತ್ತ ಬೆಲೆ ಏರಿಕೆ ವಿಚಾರವಾಗಿ ಸಂಸದ ಸಿದ್ದೇಶ್ವರ್ ಅವರು ಉಡಾಫೆ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಸಂಸದರು, ನಾನು ಚಡ್ಡಿ ಹಾಕೋವಾಗ ಪೆಟ್ರೋಲ್ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಕಮ್ಮಿ ಇತ್ತು.
ಆದ್ರೆ ಈಗ ಪ್ಯಾಂಟ್ ಹಾಕ್ತಿದ್ದೀನಿ, ಎಲ್ಲ ವಸ್ತುಗಳ ಬೆಲೆ ಜಾಸ್ತಿಯಾಗಿದೆ. ಅದೆಲ್ಲಾ ವಾತಾವರಣ ಹೇಗಿರುತ್ತೋ ಹಾಗೆ ಹೋಗ್ತಾ ಇರುತ್ತೆ ಎಂದಿದ್ದಾರೆ.
ಇದೇ ವೇಳೆ ಬಂದ್ ಬಗ್ಗೆ ಮಾತನಾಡಿದ, ಕೇಂದ್ರ ಸರ್ಕಾರ ರೈತರಿಗೆ ಅನುಕೂಲವಾಗುವಂತಹ ಕಾಯ್ದೆಗಳನ್ನು ನೀಡಿದ್ದು, ಆ ಕಾಯ್ದೆಗಳನ್ನು ರೈತರು ವಿರೋಧಿಸುತ್ತಿಲ್ಲ.
ಬದಲಿಗೆ ಸಂಘಟನೆಯವರು ಮಾತ್ರ ವಿರೋಧ ಮಾಡುತ್ತಿದ್ದಾರೆ ಎಂದರು.