ಕೊರೊನಾ ಕಫ್ರ್ಯೂವನ್ನೇ ಲಾಕ್ ಡೌನ್ ಅಂತಿದ್ದಾರೆ : ಪ್ರಜ್ವಲ್ ರೇವಣ್ಣ
ಹಾಸನ : ಈಗ ಇರುವ ಕೊರೊನಾ ಕಫ್ರ್ಯೂವನ್ನೇ ಸರ್ಕಾರ ಲಾಕ್ ಡೌನ್ ಎಂದು ಹೆಸರು ಬದಲಿಸಿದೆ. ಯಾವುದೇ ಕಠಿಣ ಕ್ರಮ ಕೈಗೊಳ್ಳಲಾಗಿಲ್ಲ.
ಈಗ ಇರುವ ಕೊರೊನಾ ಕಫ್ರ್ಯೂವನ್ನೇ ಲಾಕ್ ಡೌನ್ ಅಂತಿದ್ದಾರೆ. ಇಲ್ಲಿ ಹೆಸರು ಬದಲಾವಣೆ ಬಿಟ್ರೆ ಕಾರ್ಯ ರೀತಿ ಸೇಮ್ ಇದೆ. ಈ ಲಾಕ್ ಡೌನ್ ಫಲ ತರುವುದಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಲಾಕ್ ಡೌನ್ ಬಗ್ಗೆ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, 250 ರಿಂದ 300 ಜನ ಸಾಯುತ್ತಿದ್ದಾರೆ.
ಈ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರವನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು. ಅಲ್ಲೀಗ ಪ್ರತಿ ದಿನ ಸುಮಾರು 3,500 ಅಷ್ಟೇ ಪಾಸಿಟಿವ್ ಬರುತ್ತಿವೆ.
ಇದಕ್ಕೆ ಕಾರಣ ಅಲ್ಲಿ ವಾರದಲ್ಲಿ ಒಂದು ದಿನ ಮಾತ್ರ ಅಗತ್ಯವಸ್ತು ಕೊಳ್ಳಲು ಅವಕಾಶ ಮಾಡಿಕೊಟ್ಟು ಸಂಪೂರ್ಣ ಲಾಕ್ ಡೌನ್ ಮಾಡಿದ್ದರು. ಅದೇ ರೀತಿ ರಾಜ್ಯದಲ್ಲೂ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಇನ್ನು ದಿನ ನಿತ್ಯ 6 ರಿಂದ 12 ಗಂಟೆ ಜನ ಸಂಚಾರಕ್ಕೆ ಬಿಟ್ಟು ಸಂಜೆಯಿಂದ ಲಾಕ್ ಡೌನ್ ಮಾಡ್ತೀವಿ ಅಂತಿದ್ದಾರೆ. ಸದ್ಯ ರಾಜ್ಯದಲ್ಲಿರುವ ಕೊರೊನಾ ಕಫ್ರ್ಯೂವನ್ನೇ ಲಾಕ್ ಡೌನ್ ಅಂತಿದ್ದಾರೆ.
ಇಲ್ಲಿ ಹೆಸರು ಬದಲಾವಣೆ ಬಿಟ್ರೆ ಕಾರ್ಯ ರೀತಿ ಸೇಮ್ ಇದೆ. ಈ ಲಾಕ್ ಡೌನ್ ಫಲ ತರುವುದಿಲ್ಲ ಎಂದು ಸರ್ಕಾರ್ ಲಾಕ್ ಡೌನ್ ಬಗ್ಗೆ ಟೀಕೆ ಮಾಡಿದರು.
ಅಲ್ಲದೆ ಮುಂದಿನ ದಿನಗಳಲ್ಲಿ ರಾಜ್ಯದ ಜನರಿಗೆ ತೊಂದರೆ ಆದರೆ ಸರ್ಕಾರವೇ ಹೊಣೆ ಎಂದು ಸಂಸದರು, ಲಾಕ್ ಡೌನ್ ತಿದ್ದುಪಡಿ ಮಾಡಿ ವಾರದಲ್ಲಿ ಒಂದು ಅಥವಾ ಎರಡು ದಿನ ಅಗತ್ಯವಸ್ತು ಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.