ಸ್ವಾಮೀಜಿಯೊಬ್ಬರು ಮುಳ್ಳಿನ ಗದ್ದುಗೆ ಮೇಲೆ ಕುಣಿದು ಪವಾಡ ಮೆರೆದಿದ್ದಾರೆ.
ಶಿವರಾತ್ರಿ ಹಿನ್ನಲೆಯಲ್ಲಿ ರಾಮಲಿಂಗೇಶ್ವರ 48ನೇ ಮುಳ್ಳು ಗದ್ದುಗೆ ಉತ್ಸವವು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆಂಗಾಪುರ ಗ್ರಾಮದಲ್ಲಿ ನಡೆಯಿತು.
ಗ್ರಾಮದಲ್ಲಿನ ರಾಮಲಿಂಗೇಶ್ವರ ಮಠದ ರಾಮಲಿಂಗೇಶ್ವರ ಮಹಾಸ್ವಾಮಿಗಳಿಂದ ಈ ಪವಾಡ ನಡೆಯಿತು. ಮುಳ್ಳು ಗದ್ದುಗೆ ಉತ್ಸವಕ್ಕೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಚಾಲನೆ ನೀಡಿದರು. ಈ ಪವಾಡ ಉತ್ಸವವು ಪ್ರತಿ ವರ್ಷ ಶಿವರಾತ್ರಿಯಂದು ನಡೆಯುತ್ತದೆ. ರಾಮಲಿಗೇಶ್ವರ ಶ್ರೀ ಮುಳ್ಳಿನ ಪಲ್ಲಕ್ಕಿ ಮೇಲೆ ಕುಳಿತು ಕುಣಿಯುತ್ತಾರೆ. ನಂತರ ಮುಳ್ಳು ಗದ್ದುಗೆ ಮೆರವಣಿಗೆ ನಡೆಯುತ್ತದೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.