murder ಇತ್ತಿಚಿನ ದಿನಮಾನದಲ್ಲಿ ಘಟಿಸಿತ್ತಿರುವ ಅಪರಾಧಗಳಲ್ಲಿ ಆಘಾತ ಕಾರಿ ಎನ್ನಿಸುವಂತೆ ಎಲ್ಲಾ ಪ್ರಕರಣಗಳ ಹುತ್ತ ಶವದ ತುಂಡುಗಳತ್ತ ಎನ್ನುವಂತಗಿದೆ. ಯಾಕೆಂದರೆ ಇತ್ತಿಚಿನ ದಿನಗಳಲ್ಲಿ ಅಪರಾಧಗಳಲ್ಲಿ ಶವಗಳು ಪತ್ತೆಯಾಗುವ ಬದಲು ಶವದ ತುಂಡುಗಳೆ ಹೆಚ್ಚಾಗಿ ಪತ್ತೆಯಾಗುತ್ತಿವೆ.
ಈ ತುಂಡುಗಳ ಸಾಲಿಗೆ ಈಗ ಇನ್ನೂಂದು ಪ್ರಕರಣ ಸೇರಿ ಕೊಂಡಿದೆ
ಪತಿಯೊಬ್ಬ ತನ್ನ ಪತ್ನಿಯ ಶವವನ್ನು ತುಂಡರಿಸಿ ಬೇರೆ ಸ್ಥಳಕ್ಕೆ ವಿಲೇವಾರಿ ಮಾಡಿರುವ ಗಟನೆ ಉತ್ತರಪ್ರದೇಶದ ಸೀತಾಪುರದಲ್ಲಿ ನಡೆದಿದೆ.
ಪತಿ ಪಂಕಜ್ ಮೌರ್ಯ ಹಾಗೂ ಆತನ ಸ್ನೇಹಿತ ದುರ್ಜನ್ ಪಾಸಿ ಎಂಬುವವರು ಉತ್ತರಪ್ರದೇಶದ ಸೀತಾಪುರ ಜಿಲ್ಲೆಯ ರಾಮ್ಪುರ ಕಲಾನ್ ಪ್ರದೇಶದ ನಿವಾಸಿ ಜ್ಯೋತಿ ಅಲಿಯಾಸ್ ಸ್ನೇಹಾ ಎಂಬಾಕೆಯನ್ನು ಹತ್ಯೆಮಾಡಿದ್ದಾರೆ .ಇಬ್ಬರು ಆರೋಪಿಗಳನ್ನು ಪೊಳಿಸರು ಬಂಧಿಸಿದ್ದಾರೆ.
ಸ್ನೇಹಾಳನ್ನು ಪಂಕಜ್ ಹತ್ತು ವರ್ಷದ ಹಿಂದೆ ಮದುವೆಯಾಗಿದ್ದ. ಪ್ರತಿನಿತ್ಯ ಮದ್ಯ ಸೇವನೆ ಮಾಡುತ್ತಿ ಸ್ನೇಹಾ ಬೇರೆಯವರ ಜೊತೆಗೂ ಸಂಬಂಧ ಹೊಂದಿದ್ದು ಅಷ್ಟೇ ಅಲ್ಲದೇ ಹಲವು ದಿನಗಳಿಂದ ಆಕೆ ಯಾರದ್ದೋ ಮನೆಯಲ್ಲಿ ವಾಸಿಸುತ್ತಿದ್ದಳು.
ಈ ಕಾರಣಕ್ಕಾಗಿ ಪ್ರತಿನಿತ್ಯ ಸ್ನೇಹಾ ಹಾಗೂ ಪಂಕಜ್ ಮಧ್ಯೆ ಜಗಳವಾಗುತ್ತಿತ್ತು. ಇದರೀಂದ ಬೇಸತ್ತ ಪಂಕಜ್ ಸ್ನೇಹಾಳನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ.
ಇದಾದ ಬಳಿಕ ಯೋಜನೆಯನ್ನು ರೂಪಿಸಿ ತನ್ನ ಸ್ನೇಹಿತ ದುರ್ಜನ್ ಸಹಾಯದಿಂದ ಪತ್ನಿ ಸ್ನೇಹಾಳನ್ನು ಕೊಲೆ ಮಾಡಿದ್ದಾನೆ. ಅದಾದ ಬಳಿಕ ಯಾರಿಗೂ ಗೊತ್ತಾಗದಂತೆ ಸ್ನೇಹಾಳ ದೇಹವನ್ನು ತುಂಡರಿಸಿ ವಿಲೇವಾರಿ ಮಾಡಿದ್ದಾನೆ.
ಸೀತಾಪುರ ಪೊಲೀಸರು ನವೆಂಬರ್ 8 ರಂದು ಗುಲಾರಿಹಾ ಪ್ರದೇಶದಿಂದ ಸ್ನೇಹಾಳ ದೇಹದ ಭಾಗಗಳನ್ನು ವಶಪಡಿಸಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.