ಮೈಸೂರು: ಸುಡಾನ್ ನಲ್ಲಿ ಮೈಸೂರು ಮೂಲದ ಮಹಿಳೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹುಣಸೂರು ತಾಲೂಕಿನ ಪಕ್ಷಿರಾಜಪುರದ ನಿವಾಸಿಯಾಗಿರುವ ನಂದಿನಿ ಈ ರೀತಿ ಸಾವನ್ನಪ್ಪಿರುವ ಮಹಿಳೆ. ಇವರು ಸುಡಾನ್ ಗೆ ವ್ಯಾಪಾರಕ್ಕೆಂದು ತೆರಳಿದ್ದರು. ಆದರೆ, ಅವರ ಸಾವಿಕೆ ನಿಖರ ಕಾರಣ ತಿಳಿದು ಬಂದಿಲ್ಲ. ಪತಿ ಹಾಗೂ ಮಕ್ಕಳು ಪಕ್ಷಿರಾಜಪುರದಲ್ಲಿ ವಾಸಿಸುತ್ತಿದ್ದಾರೆ. ಸದ್ಯ ನಂದಿನಿ ಮೃತದೇಹ ತರಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಈ ನಿಟ್ಟಿನಲ್ಲಿ ಸುಡಾನ್ ನಲ್ಲಿರುವ ಭಾರತದ ರಾಯಭಾರಿ ಜೊತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಮಾತನಾಡಿದ್ದು, ಏ. 17ಕ್ಕೆ ಶವ ಹುಣಸೂರಿಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.