ಸೋಷಿಯಲ್ ಮೀಡಿಯಾದಲ್ಲಿ ಅಸಭ್ಯ ಕಮೆಂಟ್ ಮಾಡಿದವನ ಹತ್ಯೆ..!!
ಮೈಸೂರು : ಸೋಷಿಯಲ್ ಮೀಡಿಯಾ…. ಇದು ಇಡೀ ವಿಶ್ವದಲ್ಲಿ ಅದ್ರಲ್ಲೂ ಭಾರತದಲ್ಲಿ ಸೋಷಿಯಲ್ ಮೀಡಿಯಾಗೆ ಅಡಿಕ್ಟ್ ಆಗಿಲ್ಲದ ಯುವಕರು ತೀರಾ ಕಡಿಮೆ… ಮಕ್ಕಳು ಹಿರಿಯರೆಲ್ಲರೂ ಇನ್ಸ್ಟಾ , ಫೇಸ್ ಬುಕ್ , ವಾಟ್ಸಾಪ್ ಟ್ವಿಟ್ಟರ್ ನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ..
ಹಾಗೆ ನೋಡಿದ್ರೆ ಬುದ್ದಿಇವಂತಿಯಿಂದ ಬಳಸಿದ್ರೆ ಸೋಷಿಯಲ್ ಮೀಡಿಯಾದಿಂದ ಸಾಕಷ್ಟು ಪ್ರಯೋಜನಗಳಿವೆ.. ಆದ್ರೆ ಅಷ್ಟೇ ಡಿಸಡ್ವಾಂಟೇಜ್ ಗಳು ಇವೆ…. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಯುವಕನೊಬ್ಬ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ ಹಿನ್ನೆಲೆಯಲ್ಲಿ ಆತನನ್ನ ಹತ್ಯೆ ಮಾಡಲಾಗಿದೆ.. ಇಂತಹದೊಂದು ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ..
ನಿತಿನ್ ಮತ್ತು ಮನು ಎಂಬುವವರು ಸೇರಿ ಬೇರೇಶ್ ಎಂಬ 23 ವರ್ಷದ ಯುವಕನ ಹತ್ಯೆಗೈದಿದ್ದಾರೆ. ಮೈಸೂರು ಜಿಲ್ಲೆ ಹುಣಸೂರು ಪಟ್ಟಣದ ಸರಸ್ವತಿ ಪ್ಲಾಜ್ ಬಳಿ ಘಟನೆ ನಡೆದಿದೆ.
ಇನ್ಸ್ಟಾಗ್ರಾಮ್ನಲ್ಲಿ ನಿತಿನ್ ಬಗ್ಗೆ ಬೀರೇಶ್ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ ಎನ್ನಲಾಗಿದೆ… ಇದೇ ಕಾರಣಕ್ಕೆ ದ್ವೇಷದಿಂದ ಹತ್ಯೆ ಮಾಡಲಾಗಿದೆ ಎನ್ನಲಾಗ್ತಿದೆ…
ನಿತಿನ್ ಹಾಗೂ ಮನು ಇಬ್ಬರು ಸೇರಿ ಬೇರೆಶ್ ಗೆ ಚಾಕು ಇರಿದು ಹತ್ಯೆ ಮಾಡಿದ್ದಾರೆ. ಚಾಕು ಇರಿತದಿಂದ ಗಂಭೀರ ಗಾಯಗೊಂಡಿದ್ದ ಬೀರೇಶ್ನನ್ನು ಕೆ ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೀರೇಶ್ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.