Mysore : ಮದುವೆ ಆಗಿಲ್ಲ ಎಂದ ಸ್ನೇಹಿತನ ಕೊಲೆ
ಮೈಸೂರಿನ ಹುಣಸೂರಿನಲ್ಲಿ ಘಟನೆ
ಸಣ್ಣ ಸ್ವಾಮಿ (48) ಮೃತ ವ್ಯಕ್ತಿ
ಕುಮಾರ ನಾಯಕ (37 ) ಕೊಲೆ ಆರೋಪಿ
ಮದುವೆಯಾಗಿಲ್ಲ ಎಂದು ಲೇವಡಿ ಮಾಡಿದ್ದ ಸಣ್ಣ ಸ್ವಾಮಿ
ಮೈಸೂರು : ಸ್ನೇಹಿತನಿಗೆ 37 ವರ್ಷವಾದ್ರೂ ಇನ್ನೂ ಮದುವೆಯಾಗದಕ್ಕೆ ಲೇವಡಿ ಮಾಡಿದಾತನ ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ..
ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ.. ಈ ಘಟನೆ ಹುಣಸೂರು ತಾಲೂಕಿನಲ್ಲಿ ನಡೆದಿದೆ.
ಹುಣಸೂರು ತಾಲೂಕು ತಾಲೂಕಿನ ಹರವೆ ಗ್ರಾಮದ ಸಣ್ಣಸ್ವಾಮಿ ನಾಯಕ (48) ಮೃತ ವ್ಯಕ್ತಿ ಹಾಗೂ ಕುಮಾರ ನಾಯಕ (37) ಕೊಲೆ ಮಾಡಿದ ಆರೋಪಿ.
ನಿನಗೆ 37 ವರ್ಷವಾದರೂ ಮದುವೆಯಾಗಿಲ್ಲ , ನಿನಗೆ ಯಾರೂ ಹೆಣ್ಣು ಕೊಡುತ್ತಿಲ್ಲ ಎಂದು ಸಣ್ಣಸ್ವಾಮಿ ಕುಮಾರಸ್ವಾಮಿಗೆ ಟಾಂಟ್ ಮಾಡಿದ್ದಾನೆ.. ಇದರಿಂದಾಗಿ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆಯೂ ಜಗಳ ನಡೆದಿದೆ.
ಈ ಜಗಳವೇ ದೊಡ್ಡದಾಗಿ, ಈ ವೇಳೆ ಸಣ್ಣಸ್ವಾಮಿಗೆ ಕುಮಾರ ನಾಯಕ ಚಾಕು ಇರಿದು ಅಲ್ಲಿಂದ ಪರಾರಿಯಾಗಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಕುಮಾರ್ ನಾಯಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
Mysore , two friends fight and end up in murder