Sunday, March 26, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಗಣಿಬಾಧಿತ ಪ್ರದೇಶದ ಮಹಿಳೆಯರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸಿದ ಮಹತಾಯಿ ಇನ್ನು ನೆನಪು ಮಾತ್ರ:

Shwetha by Shwetha
June 12, 2021
in Marjala Manthana, Newsbeat, ನ್ಯೂಸ್ ಬೀಟ್, ಮಾರ್ಜಲ ಮಂಥನ
Nagarathna kondli
Share on FacebookShare on TwitterShare on WhatsappShare on Telegram

ಗಣಿಬಾಧಿತ ಪ್ರದೇಶದ ಮಹಿಳೆಯರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸಿದ ಮಹತಾಯಿ ಇನ್ನು ನೆನಪು ಮಾತ್ರ: Nagarathna kondli

ಇವರು ನಾಗರತ್ನಾ ಕೊಂಡ್ಲಿ. 2018ರಲ್ಲಿ ಆತ್ಮೀಯ ಗೆಳೆಯರೊಬ್ಬರ ಮುಖಾಂತರ ಪರಿಚಯವಾದವರು. ಇವರು ನಿವೃತ್ತ ಸರ್ಕಾರಿ ನೌಕರರಂತೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ನಿಟ್ಟೂರು ಹೋಬಳಿಯ ಕೆಬಿ ಕ್ರಾಸ್ ಸಮೀಪದ ಕೊಂಡ್ಲಿ ಎಂಬ ಗ್ರಾಮದವರು ಮೂಲತಃ. ಎಲ್ಲರಂತೆ ಸಾಮಾನ್ಯವಾಗಿ ಇವರು ಬದುಕಬಹುದಿತ್ತು. ಆದರೆ ಯತ್ಕಿಂಚಿತ್ ಸಮಾಜದ ಋಣ ಸಂದಾಯ ಮಾಡಬೇಕೆನ್ನುವ ಅಪಾರ ಅಭಿಲಾಷೆ ಇವರದ್ದು. Nagarathna kondli
Nagarathna kondli

Related posts

Parrot's testimony

Parrot’s testimony : ಗಿಳಿ ಹೇಳಿದ ಸಾಕ್ಷಿಯಿಂದ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ…. 

March 26, 2023
Gubbi MLA S R Srinivas

S R Srinivas : ಶಾಸಕ ಸ್ಥಾನಕ್ಕೆ ಗುಬ್ಬಿ ಶಾಸಕ ರಾಜೀನಾಮೆ ; ಜೆಡಿಎಸ್ ಪಕ್ಷ ತೊರೆಯಲು ಮುಂದಾದ ಕಾರ್ಯಕರ್ತರು….

March 26, 2023

ತಮ್ಮ ನಿವೃತ್ತಿಯ ಹಣವನ್ನು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಶಿರಾ ಮತ್ತು ಗುಬ್ಬಿ ತಾಲೂಕಿನ ಗಣಿಬಾಧಿತ ಪ್ರದೇಶಗಳ ಮಹಿಳೆಯರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದೇನೆ ಅಂತಿದ್ದರು. ಈ ಮಹಿಳೆಯರ ಪ್ರಗತಿಗಾಗಿ ಒಂದು ಟ್ರಸ್ಟ್ ನಿರ್ಮಿಸಿಕೊಂಡಿದ್ದರು “ಸಾಯಿ ನಾರಾಯಣ ಗ್ರಾಮ ಸೇವಾ ಟ್ರಸ್ಟ್” ಮಾಡಿಕೊಂಡು ಸಮಾಜದ ಕಟ್ಟಕಡೆಯ ವರ್ಗದ ಹೆಣ್ಣುಮಕ್ಕಳ ಕಣ್ಣೀರು ಒರೆಸಲು ಓಡಾಡುತ್ತಿದ್ದರು. “ಮಾತೃ ದೇಸಿ ಫುಡ್” ಎಂಬ ಸಂಸ್ಥೆ ನಿರ್ಮಿಸಿ ಸಿರಿಧಾನ್ಯ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವುದು, ಮತ್ತದರಿಂದ ಬಂದ ಹಣವನ್ನು ಮಹಿಳೆಯರ ಕಲ್ಯಾಣಕ್ಕೆ ವಿನಿಯೋಗಿಸುವುದು. ಹೀಗೆ ಅವರಿಗಿದ್ದ ಒಂದೇ ಚಿಂತೆ ಗಣಿಬಾಧಿತ ಪ್ರದೇಶದ ಮಹಿಳೆಯರಿಗಾಗಿ ಏನಾದರೂ ಮಾಡಬೇಕು ಅನ್ನುವುದಷ್ಟೆ. ಹೀಗಾಗಿ ಸಂಬಳ ಕೊಟ್ಟು ನರ್ಸ್ ಇಟ್ಟು ಅನಾರೋಗ್ಯ ಪೀಡಿತ ಮಹಿಳೆಯರ ಆರೈಕೆ ಮಾಡುತ್ತಿದ್ದರು. ಅಲ್ಲಿನ ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡಬೇಕು ಎಂದು ಸದಾ ಚಿಂತಿಸುತ್ತಿದ್ದರು.

ಅವರಿಗೆ ಟ್ರಸ್ಟ್ ಮಾಡಿಸಿಕೊಡಲು ನಾನು ಆತ್ಮೀಯ ಗೆಳೆಯರೂ, ಚಾರ್ಟೆಡ್ ಅಕೌಂಟೆಂಟ್ ಸಹ ಆಗಿರುವ ನಾಗರಬಾವಿಯ ದಿನೇಶ್ ಜೋಶಿಯವರ ಕಚೇರಿಯಿಂದ ತುಮಕೂರಿನ ಸಬ್ ರಿಜಿಸ್ಟ್ರಾರ್ ಕಚೇರಿಯತನಕ ಜೊತೆಯಿದ್ದೆ. ಈ ಟ್ರಸ್ಟ್ ನ ಓರ್ವ ಟ್ರಸ್ಟಿ ಸಹ ಆಗಿದ್ದೆ. ಅವರು ಕರೆ ಮಾಡಿದಾಗಲೆಲ್ಲಾ ಮಹಿಳೆಯರಿಗಾಗಿ ರೂಪಿಸಿದ ಕಾರ್ಯಕ್ರಮಗಳು ಯೋಜನೆಗಳ ಬಗ್ಗೆಯೇ ಮಾತಾಡುತ್ತಿದ್ದರು. ವ್ಯಸನ ಮುಕ್ತ ಸಮಾಜದ ಕನಸು ಕಾಣುತ್ತಿದ್ದರು. ಮದ್ಯಪಾನ ನಿರೋಧ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದರು. ಸಾವಯವ ಸಿರಿಧಾನ್ಯ ಅಭಿಯಾನದ ಭಾಗವಾಗಿದ್ದರು. ಸುಸ್ಥಿರ ಮತ್ತು ಆರೋಗ್ಯವಂತ ಸಮಾಜದ ನಿರ್ಮಾಣ ಇವರ ಅಧಮ್ಯ ಬಯಕೆಯಾಗಿತ್ತು.

ಇತ್ತೀಚೆಗೆ ಸಹ ಕರೆ ಮಾಡಿದ್ದರು ಆದರೆ ನಾನು ಫೋನ್ ರಿಸೀವ್ ಮಾಡಿರಲಿಲ್ಲ ಮತ್ತೆ ಕಾಲ್ ಮಾಡಿದಾಗ ನಾಟ್ ರೀಚಬಲ್ ಆಗಿದ್ದರು. ಈಗ ಬರಸಿಡಿಲಿನಂತೆ ಈ ಸುದ್ದಿ ಬಂದಿದೆ. ಅನವರತ ಮಹಿಳೆಯರ ಕಷ್ಟಕಾರ್ಪಣ್ಯಗಳಿಗೆ ಮರುಗುತ್ತಿದ್ದ ಮಹಿಳೆಯರ ಕಲ್ಯಾಣಕ್ಕಾಗಿ ಹಾತೊರೆಯುತ್ತಿದ್ದ ನಿಸ್ವಾರ್ಥ ಜೀವನವೊಂದು ಕೊನೆಯಾಗಿದೆ. ಇಂದು ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ತೀವ್ರ ಅನಾರೋಗ್ಯದ ಕಾರಣ ನಾಗರತ್ನ ಕೊಂಡ್ಲಿ ಮೇಡಂ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಕೊಂಡ್ಲಿ ನಾಗರತ್ನಮ್ಮ ತಮ್ಮ ದೇಹದ ಅಂಗಾಂಗಗಳನ್ನು ದಾನ ಮಾಡಿದ್ದಾರೆ. ಇದಲ್ಲವೇ ಸಾರ್ಥಕ ಬದುಕು.
Nagarathna kondli

ನನಗೆ ತೀವ್ರ ಅನಾರೋಗ್ಯ ಕಾಡಿದ್ದ ಸಂದರ್ಭದಲ್ಲಿ, ಆಸ್ಪತ್ರೆಯಿಂದ ಚೇತರಿಸಿಕೊಂಡು ಮನೆಗೆ ಬಂದಾಗ ಅವರು ಕಾಲ್ ಮಾಡಿ, ನಮ್ಮ ಹಳ್ಳಿಗೆ ಬಂದು ಎರಡು ತಿಂಗಳು ರೆಸ್ಟ್ ಮಾಡಿ. ವಾತಾವರಣ ಬದಲಾದರೇ ದೇಹಕ್ಕೂ ಮನಸಿಗೂ ಉತ್ತಮ ಎಂದಿದ್ದು ನೆನಪಾಗುತ್ತಿದೆ. ಈ ಕಾಲ ಅದೆಷ್ಟು ಕ್ರೂರ. ಮಾತುಗಳೇ ಹೊರಡುತ್ತಿಲ್ಲ. ಮಿಸ್ ಯೂ ಮೇಡಂ. ನಿಮ್ಮ ಆದರ್ಶಯುತ ಜೀವನ ಸದಾ ಕಾಲ ನಮ್ಮ ಸ್ಮರಣೆಯಲ್ಲಿರುತ್ತದೆ. ಆ ಸರ್ವಶಕ್ತ ಜಗನ್ಮಾತೆ ನಿಮ್ಮ ಪವಿತ್ರಾತ್ಮಕ್ಕೆ ಚಿರಶಾಂತಿ ಕರುಣಿಸಲಿ. ಓಂ ಶಾಂತಿ.

-ವಿಭಾ
***

Tags: Nagarathna kondliನಾಗರತ್ನಾ ಕೊಂಡ್ಲಿ.
ShareTweetSendShare
Join us on:

Related Posts

Parrot's testimony

Parrot’s testimony : ಗಿಳಿ ಹೇಳಿದ ಸಾಕ್ಷಿಯಿಂದ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ…. 

by Naveen Kumar B C
March 26, 2023
0

parrot's testimony : ಗಿಳಿ ಹೇಳಿದ ಸಾಕ್ಷಿಯಿಂದ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ…. ಆಗ್ರಾ: ಒಂಬತ್ತು ವರ್ಷಗಳ ಹಿಂದಿನ ಕೊಲೆ ಪ್ರಕರಣದ ಸಾಕ್ಷಿಯೊಬ್ಬರು ನೀಡಿದ ಹೇಳಿಕೆಯನ್ನ ಆಧರಿಸಿ...

Gubbi MLA S R Srinivas

S R Srinivas : ಶಾಸಕ ಸ್ಥಾನಕ್ಕೆ ಗುಬ್ಬಿ ಶಾಸಕ ರಾಜೀನಾಮೆ ; ಜೆಡಿಎಸ್ ಪಕ್ಷ ತೊರೆಯಲು ಮುಂದಾದ ಕಾರ್ಯಕರ್ತರು….

by Naveen Kumar B C
March 26, 2023
0

S R Srinivas : ಶಾಸಕ ಸ್ಥಾನಕ್ಕೆ ಗುಬ್ಬಿ ಶಾಸಕ ರಾಜೀನಾಮೆ ; ಜೆಡಿಎಸ್ ಪಕ್ಷ ತೊರೆಯಲು ಮುಂದಾದ ಕಾರ್ಯಕರ್ತರು…. ಗುಬ್ಬಿ  ಕ್ಷೇತ್ರದ   ಶಾಸಕ  ಎಸ್.ಆರ್.ಶ್ರೀನಿವಾಸ್  ಜೆಡಿಎಸ್ ...

Transgender  salon

Transgender  salon :  ಮುಂಬೈನಲ್ಲಿ ಮಂಗಳಮುಖಿಯರ ಮೊದಲ ಸಲೂನ್ ಪ್ರಾರಂಭ… 

by Naveen Kumar B C
March 26, 2023
0

Transgender  salon :  ಮುಂಬೈನಲ್ಲಿ ಮಂಗಳಮುಖಿಯರ ಮೊದಲ ಸಲೂನ್ ಪ್ರಾರಂಭ… ಮಂಗಳಮುಖಿಯರು ಅಥವಾ ತೃತಿಯಲಿಂಗಿ  ಸಮುದಾಯದ ಜನರು ಇಂದಿಗೂ ಸಾಕಷ್ಟು ತಾರತಮ್ಯವನ್ನ ಸಮಾಜದಲ್ಲಿ ಎದುರಿಸುತ್ತಿದ್ದಾರೆ.ತಮ್ಮ ಅಸ್ತಿತ್ವ ಮತ್ತು...

MGNREGS

MGNREGS :  ನರೇಗಾ ಕೂಲಿ ಕಾರ್ಮಿಕರಿಗೆ ಸಿಹಿ ಸುದ್ದಿ ; ದಿನಗೂಲಿ ದರ ಹೆಚ್ಚಿಸಿದ ಸರ್ಕಾರ… 

by Naveen Kumar B C
March 26, 2023
0

MGNREGS :  ನರೇಗಾ ಕೂಲಿ ಕಾರ್ಮಿಕರಿಗೆ ಸಿಹಿ ಸುದ್ದಿ ; ದಿನಗೂಲಿ ದರ ಹೆಚ್ಚಿಸಿದ ಸರ್ಕಾರ… ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS) ನರೇಗಾ ಕೂಲಿಕಾರರಿಗೆ...

Munbai crime

Mumbai : ಚಾಕುವಿನಿಂದ ಇರಿದು ಮೂವರನ್ನ ಕೊಂದ ಮಾನಸಿಕ ಅಸ್ವಸ್ಥ; ಬೆಚ್ಚಿದ ಮುಂಬೈ… 

by Naveen Kumar B C
March 26, 2023
0

Mumbai : ಚಾಕುವಿನಿಂದ ಇರಿದು ಮೂವರನ್ನ ಕೊಂದ ಮಾನಸಿಕ ಅಸ್ವಸ್ಥ; ಬೆಚ್ಚಿದ ಮುಂಬೈ… 54 ವರ್ಷದ  ಮಾನಸಿಕ  ಅಸ್ವಸ್ಥ  ಹಿರಿಯ ನಾಗರಿಕ ದಂಪತಿಗಳು ಸೇರಿದಂತೆ ಮೂವರನ್ನ ಕೊಂದಿರುವ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Parrot's testimony

Parrot’s testimony : ಗಿಳಿ ಹೇಳಿದ ಸಾಕ್ಷಿಯಿಂದ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ…. 

March 26, 2023
Gubbi MLA S R Srinivas

S R Srinivas : ಶಾಸಕ ಸ್ಥಾನಕ್ಕೆ ಗುಬ್ಬಿ ಶಾಸಕ ರಾಜೀನಾಮೆ ; ಜೆಡಿಎಸ್ ಪಕ್ಷ ತೊರೆಯಲು ಮುಂದಾದ ಕಾರ್ಯಕರ್ತರು….

March 26, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram