ADVERTISEMENT
Saturday, May 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ದುಷ್ಟ ಶಕ್ತಿಗಳನ್ನ ಹಿಮ್ಮೆಟ್ಟಿಸುವ ಸಲುವಾಗಿ ಬರೆಯಲಾಗುವ ‘ನಾಳೆ ಬಾ’ ಹಿಂದಿನ ಕಥೆಯೇನು..? ಮೊದಲಿಗೆ ಶುರುವಾಗಿದ್ದು ಎಲ್ಲಿ..? 

Namratha Rao by Namratha Rao
September 11, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ದುಷ್ಟ ಶಕ್ತಿಗಳನ್ನ ಹಿಮ್ಮೆಟ್ಟಿಸುವ ಸಲುವಾಗಿ ಬರೆಯಲಾಗುವ ‘ನಾಳೆ ಬಾ’ ಹಿಂದಿನ ಕಥೆಯೇನು..? ಮೊದಲಿಗೆ ಶುರುವಾಗಿದ್ದು ಎಲ್ಲಿ..?

ಭಾರತವು ಅನೇಕ ವಿಚಿತ್ರ ರೀತಿಯ ನಂಬಿಕೆಗಳ ತವರೂರು. ಈ ದೇಶದ ಪ್ರತೀ ಪ್ರಾಂತ್ಯಗಳಲ್ಲು ಒಂದಿಲ್ಲೊಂದು ವಿಚಿತ್ರ ತರದ ನಂಬಿಕೆಗಳು ಹಾಸು ಹೊಕ್ಕಾಗಿವೆ. ಅಂಥಹ ನಂಬಿಕೆಗಳಲ್ಲಿ ಕಳೆದ ಮೂರು ದಶಕಗಳಿಂದ ಪ್ರಸಿದ್ಧಿ ಪಡೆದಿರುವ ‘ನಾಳೆ ಬಾ’ ಎಂಬ ಬಾಗಿಲು ಮತ್ತು ಗೋಡೆ ಬರಹದ ನಂಬಿಕೆಯೂ ಸಹ ಒಂದು!

Related posts

ಕಾಂಗ್ರೆಸ್ ಮೈತ್ರಿ ಮುರಿದ ಡಿಎಂಕೆ: ಸಂಸತ್ತಿನಲ್ಲಿ ಪ್ರತ್ಯೇಕ ಆಸನಕ್ಕೆ ಕನ್ನಿಮೋಳಿ ಪತ್ರ

ಕಾಂಗ್ರೆಸ್ ಮೈತ್ರಿ ಮುರಿದ ಡಿಎಂಕೆ: ಸಂಸತ್ತಿನಲ್ಲಿ ಪ್ರತ್ಯೇಕ ಆಸನಕ್ಕೆ ಕನ್ನಿಮೋಳಿ ಪತ್ರ

May 9, 2026
ಪಡಿತರ ಅಕ್ಕಿ ದಂಧೆ ಬಯಲು… ₹43 ಲಕ್ಷ ಮೌಲ್ಯದ ಸ್ವತ್ತು ಜಪ್ತಿ!

ಪಡಿತರ ಅಕ್ಕಿ ದಂಧೆ ಬಯಲು… ₹43 ಲಕ್ಷ ಮೌಲ್ಯದ ಸ್ವತ್ತು ಜಪ್ತಿ!

May 9, 2026

ಹಲವರ ಮನೆಯ ಬಾಗಿಲ ಮೇಲೆ ‘ನಾಳೆ ಬಾ’ ಎಂದು ಬರೆದಿರುವುದನ್ನ ನಾವು ನೀವು ಗಮನಿಸಿರುತ್ತೇವೆ. ಯಾಕೆ ಹೀಗೆ ಬರೆದಿರುತ್ತಾರೆ ? ಎಂಬ ಪ್ರಶ್ನೆಗುತ್ತರವಾಗಿ ಮನೆಗೆ ಬರುವ ದುಷ್ಟ ಶಕ್ತಿಗಳನ್ನ ಹಿಮ್ಮೆಟ್ಟಿಸುವ ಸಲುವಾಗಿ ಹೀಗೆ ಬರೆಯಲಾಗುತ್ತದೆ ಎಂದು ನಮ್ಮ ಹಿರಿಯರು ನಮಗೆ ಹೇಳುತ್ತಿದ್ದುದು ಸಾಮಾನ್ಯವಾಗಿತ್ತು. ಈ ‘ನಾಳೆ ಬಾ’ ಎಂಬ ಪರಂಪರೆ 1990 ರ ದಶಕದಲ್ಲಿ ಬೆಂಗಳೂರಿನ ಕೆಲವು ಜನಭರಿತ ಏರಿಯಾಗಳಲ್ಲಿ ಶುರುವಾಯ್ತು. ಬೆಂಗಳೂರಿನ ಅಂದಿನ ಇಂದಿರಾನಗರ, ಮಲ್ಲೇಶ್ವರಂ ಹಾಗೂ ರಾಜಾಜಿನಗರಗಳ ಕೆಲವಾರು ಮನೆಗಳ ಮೇಲೆ ಹೀಗೆ ಬರೆಯಲಾದ ಬೋರ್ಡ್ ಗಳು ಮೊಟ್ಟ ಮೊದಲು ಕಾಣಿಸಿಕೊಂಡವು.

ಇದು ತೊಂಭತ್ತರ ದಶಕದಲ್ಲಿ ಜನಪ್ರಿಯವಾಯ್ತಾದರೂ 60-70 ರ ದಶಕದಲ್ಲೇ ಕರ್ನಾಟಕದ ಕೆಲ ಹಳ್ಳಿಗಳಲ್ಲಿ ಈ ‘ನಾಳೆ ಬಾ’ ನಂಬಿಕೆಯು ಚಾಲ್ತಿಯಲ್ಲಿದ್ದುದರ ಬಗ್ಗೆ ಕೆಲ ಹಿರಿಯರು ಅಭಿಪ್ರಾಯ ಪಡುತ್ತಾರೆ. ಈ ‘ನಾಳೆ ಬಾ’ ನಂಬಿಕೆಯ ಹಿಂದಿರುವ ಹಿನ್ನೆಲೆ ಭಯಖಚಿತವಾದ ಒಂದು ಸಿದ್ಧಾಂತವನ್ನ ಹೊಂದಿದೆ. ಪ್ರೇತ, ಭೂತ ಪಿಶಾಚಿಗಳ ಪ್ರವೇಶವನ್ನ ತಡೆಯುವ ಸಲುವಾಗಿ ಈ ಕ್ರಮವನ್ನ ಅನುಸರಿಸಲು ಪ್ರಾರಂಭಿಸಿದರಾದರೂ ಇದರ ಹಿಂದಿರುವ ಕೆಲ ಕತೆಗಳು ಎದೆ ಕಂಪಿಸುವಂತೆ ಮಾಡುತ್ತವೆ.

ಜನಜನಿತವಾದ ಕತೆಯೊಂದರ ಪ್ರಕಾರ ಬೆಂಗಳೂರಿನ ಗ್ರಾಮಾಂತರ ಭಾಗದ ನಿವಾಸಿಯಾದ ಓರ್ವ ಮುದುಕಿಯ ಜಮೀನನ್ನು ಬಹಳ ಹಿಂದೆ ಒಬ್ಬ ದುರಾಸೆಯ ಸಿರಿವಂತ ಲಪಟಾಯಿಸಿ ಆಕೆಗೆ ವಂಚಿಸಿದ್ದ. ಆ ಜಾಗ‌ ಪಡೆದ ಆತನನ್ನ ಬಲಿ ತೆಗೆದುಕೊಂಡ ಆಕೆಯ ಪ್ರೇತವು ಅಲ್ಲಿಗೆ ಬರುವವರಿಗು ತೊಂದರೆ ಕೊಡಲಾರಂಭಿಸಿತು. ಅಲ್ಲಿಗೆ ಬರುವ ಅಥವಾ ಆ ಜಾಗದ ಮೇಲೆ ಹಾದು ಹೋಗುವ ಯಾರೇ ಆಗಲಿ ‘ನಾಳೆ ಬಾ’ ಎಂದರೆ ಮಾತ್ರವೇ ಅವರಿಗೆ ಉಳಿಗಾಲ. ಇಲ್ಲದಿದ್ದರೆ ಅವರಿಗೆ ಆ ಮುದುಕಿಯ ಪ್ರೇತದ ಕಾಟ ತಪ್ಪದು ಎಂಬ ನಂಬಿಕೆ ಹಳೆ ಬೆಂಗಳೂರಿನಲ್ಲಿ ಬಹಳ ಕಾಲದಿಂದಲು ಚಾಲ್ತಿಯಲ್ಲಿದೆ. ಈ ಘಟನೆ ಖಚಿತವಾಗಿ ನಡೆದ ಬಗ್ಗೆ ಯಾವ ಪುರಾವೆಯೂ ಇಲ್ಲವಾದರೂ ಈ ಕತೆ ಹಲವರ ಬಾಯಲ್ಲಿ ಹರಿದಾಡುತ್ತಿದೆ.

ಇನ್ನೊಂದು ಕತೆಯ ಪ್ರಕಾರ ಓರ್ವ ಮದುವೆ ಹೆಣ್ಣು ಕಾರಣಾಂತರಗಳಿಂದ ಮದುವೆಗೆ ಮುನ್ನವೇ ಸತ್ತು ಹೋಗಿ ಆಕೆಯ ಪ್ರೇತವು ಮನೆ ಮನೆಗೆ ರಾತ್ರಿ ವೇಳೆ ಸಂಚರಿಸಿ ಅವಿವಾಹಿತ ಪುರುಷರನ್ನೇ ಗುರಿ ಮಾಡಿ ಅಲೆಯುತ್ತದೆಯೆಂದೂ, ಇದು ಪ್ರತೀ ಮನೆಗು ಭೇಟಿ ಕೊಟ್ಟು ಬಾಗಿಲು ಬಡಿದು ಆ ಮನೆಯ ಸಂಬಂಧಿಗಳ ಹಾಗೆ ಧ್ವನಿ ಅನುಕರಿಸಿ ಮನೆಯವರಿಗೆ ಕೇಡು ತರುತ್ತದೆ ಎಂದೂ ನಂಬಿಕೆಯಿದೆ. ಇಂಥ ಭಯಾನಕ ಅನುಭವಕ್ಕು ಒಳಗಾದವರಿದ್ದಾರೆ ! ನಾಳೆ ಬಾ ಎಂಬ ಬರಹವನ್ನ‌ ಓದಿದ ಈ ಪ್ರೇತವು ಪುನಃ ಅಲ್ಲಿಗೆ ಭೇಟಿ ಕೊಡುವುದಿಲ್ಲ ಎಂದೂ ನಂಬುತ್ತಾರೆ.

ಈ ಪ್ರೇತವನ್ನ ಸಾಮಾನ್ಯವಾಗಿ ‘ಕೂಗು ಮಾರಿ’ ಎಂದೆ ಕರೆಯಲಾಗುತ್ತದೆ. ಕೆಲವೆಡೆ ‘ರಾತ್ರಿ ಮೋಹಿನಿ’ ಎಂದೂ ಸಹ ಕರೆಯುತ್ತಾರೆ. ನಮ್ಮ ಕೆಲವು ಗ್ರಾಮೀಣ ಭಾಗದಲ್ಲಿ ಮನೆಗಳ ಮೇಲೆ ‘ಕೂಗುಮಾರಿ ನಾಳೆ ಬಾ’ ಎನ್ನುವ ಬರಹ ನಿಮ್ಮ ಕಣ್ಣಿಗೆ ಇಂದಿಗೂ ಬೀಳಬಹುದು. ಬೆಂಗಳೂರಿನ ಎಷ್ಟೋ ಜನ ಹೀಗೆ ರಾತ್ರಿಯ ವೇಳೆ ಸತ್ತುಹೋದ ತಮ್ಮ ಸಂಬಂಧಿಗಳ ಹಾಗೆಯೇ ರಾತ್ರಿ ವೇಳೆ ಧ್ವನಿ ಅನುಕರಿಸಿ ಯಾರೊ ಬಾಗಿಲು ಬಡಿದ ಸದ್ದಾಯ್ತೆಂದೂ, ‘ನಾಳೆ ಬಾ’ ಎಂದು ಬರೆದ ಮೇಲೆ ಈ ಸದ್ದು ನಿಂತಿತೆಂದೂ ತಮ್ಮ‌ ಅನುಭವವನ್ನ ಹೇಳಿಕೊಂಡಿದ್ದಾರೆ.

ತೊಂಭತ್ತರ ದಶಕದಲ್ಲಿ ಪ್ಲೇಗ್ ರೋಗಕ್ಕೆ ಬೆಂಗಳೂರಿನ ಹಲವು ಜನ ತುತ್ತಾದಾಗ ಆ ರೋಗದ ಮಾರಿಯ ವಿರುದ್ಧ ಹೀಗೆ ಬರೆಯಲಾಯ್ತೆಂದೂ ಆದರೆ ಕ್ರಮೇಣ ಇದು ಭೂತ, ಪ್ರೇತ, ಪಿಶಾಚಿಗಳ ಅಂತೆ ಕಂತೆಯ ಕತೆಯಾಗಿ ಬದಲಾಯ್ತೆಂದೂ ಕೆಲವರು ಅಭಿಪ್ರಾಯ ಪಡುತ್ತಾರೆ.

ಇದು ಸಿಟಿ ಕತೆಯಾದರೆ, ಕರ್ನಾಟಕದ ಬಯಲುಸೀಮೆಯ ಹಳ್ಳಿಗಳಲ್ಲು ಸಹ ಈ ‘ನಾಳೆ ಬಾ’ ವಿಶಿಷ್ಟ ಸ್ಥಾನ ಪಡೆದ ನಂಬಿಕೆಯಾಗಿದೆ. ಹುಣಸೆ ಮರದ ತೋಪುಗಳಲ್ಲಿ ವಾಸವಿರುವ ಅಥವಾ ಕಾಣಿಸುವ ಭೂತಗಳ ಬಗ್ಗೆ ಈ ಭಾಗದ ಅನೇಕರು ನಂಬಿಕೆ ಇಡುತ್ತಾರೆ. ಇವುಗಳು ರಾತ್ರಿ ವೇಳೆ ಸಂಚರಿಸುತ್ತಾ ಮನೆಗಳ ಮುಂದೆ ಅಲೆಯುತ್ತವೆಂದೂ, ಸಾವು ಸಂಭವಿಸಿದ ಮನೆಗಳಲ್ಲಿ ರಾತ್ರಿ ವೇಳೆ ಸತ್ತವರ ಧ್ವನಿಯು ಕೇಳಿ ಬರುತ್ತದೆಂದೂ ಅದರ ನಿಯಂತ್ರಣಕ್ಕಾಗಿ ‘ನಾಳೆ ಬಾ’ ಎಂದು ಬರೆಯುವ ಪರಿಪಾಠ ಈ‌ ಭಾಗಗಳಲ್ಲಿ ರೂಢಿಗೆ ಬಂದಿದೆ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲು‌ ಸಹ ಇಂಥವೆ ಅಸಹಜ ನಂಬುಗೆಗಳು, ಕತೆಗಳು ಜಾರಿಯಲ್ಲಿವೆ. ಒಟ್ಟಾರೆ ಈ ‘ನಾಳೆ ಬಾ’ ಎನ್ನುವುದು ಕರ್ನಾಟಕದ ಭಯಾನಕ ನಂಬಿಕೆಗಳಲ್ಲಿ ಇಂದಿಗು ಸಹ ಅಗ್ರಸ್ಥಾನ ಪಡೆದಿದೆ.

ಮಾಹಿತಿ ಸಂಗ್ರಹ ಮತ್ತು ಲೇಖನ : ಇಂದೂದರ್ ಒಡೆಯರ್ ಚಿತ್ರದುರ್ಗ (ಡುಗ್ಗು)

Tags: #saakshatvdevilsgHOSTinteresting factsnale banegative energiesspirits
ShareTweetSendShare
Join us on:

Related Posts

ಕಾಂಗ್ರೆಸ್ ಮೈತ್ರಿ ಮುರಿದ ಡಿಎಂಕೆ: ಸಂಸತ್ತಿನಲ್ಲಿ ಪ್ರತ್ಯೇಕ ಆಸನಕ್ಕೆ ಕನ್ನಿಮೋಳಿ ಪತ್ರ

ಕಾಂಗ್ರೆಸ್ ಮೈತ್ರಿ ಮುರಿದ ಡಿಎಂಕೆ: ಸಂಸತ್ತಿನಲ್ಲಿ ಪ್ರತ್ಯೇಕ ಆಸನಕ್ಕೆ ಕನ್ನಿಮೋಳಿ ಪತ್ರ

by Shwetha
May 9, 2026
0

ದಕ್ಷಿಣ ಭಾರತದ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಲವಾದ ಹೊಡೆತ ಬಿದ್ದಿದೆ. ಕೇರಳದಲ್ಲಿ ಜಯಭೇರಿ ಬಾರಿಸಿ ಗೆಲುವಿನ ನಗೆ ಬೀರಿದ್ದ ಕಾಂಗ್ರೆಸ್‌ಗೆ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷವು ದೊಡ್ಡ...

ಪಡಿತರ ಅಕ್ಕಿ ದಂಧೆ ಬಯಲು… ₹43 ಲಕ್ಷ ಮೌಲ್ಯದ ಸ್ವತ್ತು ಜಪ್ತಿ!

ಪಡಿತರ ಅಕ್ಕಿ ದಂಧೆ ಬಯಲು… ₹43 ಲಕ್ಷ ಮೌಲ್ಯದ ಸ್ವತ್ತು ಜಪ್ತಿ!

by Shwetha
May 9, 2026
0

ಬಡವರ ಹೊಟ್ಟೆ ಸೇರಬೇಕಿದ್ದ ಅನ್ನ ಭಾಗ್ಯದ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದ ದೊಡ್ಡ ದಂಧೆ ಇದೀಗ ಬಯಲಾಗಿದೆ. ಗದಗ ಪೊಲೀಸ್ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಸಂಯುಕ್ತ ಕಾರ್ಯಾಚರಣೆ...

ಉಚಿತ ಘೋಷಣೆಗಳ ಹೆಸರಲ್ಲಿ ಜನರಿಗೆ ಮರುಳು ಮಾಡುತ್ತಿದ್ದಾರೆಯೇ :ವಿಜಯ್ ಅವರ ಈ ಸಾಹಸವನ್ನ ಆ ದೇವರೇ ಕಾಪಾಡಬೇಕು ತಮಿಳುನಾಡು ಗ್ಯಾರಂಟಿ ಘೋಷಣೆಗಳ ಬಗ್ಗೆ ಹೆಚ್ ಡಿ ಕೆ ಲೇವಡಿ

ಉಚಿತ ಘೋಷಣೆಗಳ ಹೆಸರಲ್ಲಿ ಜನರಿಗೆ ಮರುಳು ಮಾಡುತ್ತಿದ್ದಾರೆಯೇ :ವಿಜಯ್ ಅವರ ಈ ಸಾಹಸವನ್ನ ಆ ದೇವರೇ ಕಾಪಾಡಬೇಕು ತಮಿಳುನಾಡು ಗ್ಯಾರಂಟಿ ಘೋಷಣೆಗಳ ಬಗ್ಗೆ ಹೆಚ್ ಡಿ ಕೆ ಲೇವಡಿ

by Shwetha
May 9, 2026
0

ತಮಿಳುನಾಡು ರಾಜಕೀಯ ಅಖಾಡಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿರುವ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷದ ಉಚಿತ ಯೋಜನೆಗಳ ಭರವಸೆ ಈಗ ದೊಡ್ಡ ಮಟ್ಟದ ಚರ್ಚೆಗೆ...

ವಿಜಯ್‌ಗೆ ಮಹಾ ವಿಜಯ.. ಸಿಎಂ ಸ್ಥಾನ ಪಕ್ಕಾ?

ವಿಜಯ್‌ಗೆ ಮಹಾ ವಿಜಯ.. ಸಿಎಂ ಸ್ಥಾನ ಪಕ್ಕಾ?

by Shwetha
May 9, 2026
0

ತಮಿಳುನಾಡಿನ ರಾಜಕೀಯದಲ್ಲಿ ಹೊಸ ತಿರುವು ಕಾಣಿಸುತ್ತಿದೆ. ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ರಚನೆಗೆ ಸನ್ನದ್ಧವಾಗಿರುವ ಲಕ್ಷಣಗಳು ಗೋಚರಿಸುತ್ತಿವೆ. ವರದಿಗಳ ಪ್ರಕಾರ, ವಿಸಿಕೆ, ಸಿಪಿಐ ಮತ್ತು ಸಿಪಿಎಂ ಪಕ್ಷಗಳು...

ಸ್ಟಾಲಿನ್ ಮತ್ತು ಮಮತಾ ಬೆನ್ನಿಗೆ ನಿಂತ ಸಮಾಜವಾದಿ ನಾಯಕ : ಕಷ್ಟ ಕಾಲದಲ್ಲಿ ಜೊತೆಗಿದ್ದವರ ಕೈ ಬಿಡಲ್ಲ ಕಾಂಗ್ರೆಸ್ ನಡೆಯನ್ನು ಪರೋಕ್ಷವಾಗಿ ಟೀಕಿಸಿದ ಅಖಿಲೇಶ್ ಯಾದವ್

ಸ್ಟಾಲಿನ್ ಮತ್ತು ಮಮತಾ ಬೆನ್ನಿಗೆ ನಿಂತ ಸಮಾಜವಾದಿ ನಾಯಕ : ಕಷ್ಟ ಕಾಲದಲ್ಲಿ ಜೊತೆಗಿದ್ದವರ ಕೈ ಬಿಡಲ್ಲ ಕಾಂಗ್ರೆಸ್ ನಡೆಯನ್ನು ಪರೋಕ್ಷವಾಗಿ ಟೀಕಿಸಿದ ಅಖಿಲೇಶ್ ಯಾದವ್

by Shwetha
May 9, 2026
0

ರಾಷ್ಟ್ರ ರಾಜಕಾರಣದಲ್ಲಿ ಈಗ ಇಂಡಿಯಾ ಮೈತ್ರಿಕೂಟದ ಒಳಗಿನ ಒಳಜಗಳ ಬೀದಿಗೆ ಬಂದಿದೆ. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಕಾಂಗ್ರೆಸ್ ಪಕ್ಷದ ನಡೆಯ ವಿರುದ್ಧ ತೀವ್ರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram