Namma Metro pillar Collapase : ಡಿಸಿಪಿ ಭೀಮಾಶಂಕರ್ ಗುಳೇದ್ ಪ್ರತಿಕ್ರಿಯೆ
ಬೆಂಗಳೂರು : ಮತ್ತೊಮ್ಮೆ ನಮ್ಮ ಮೆಟ್ರೋ ಕಾಮಗಾರಿಯ ಬಗ್ಗೆ ಪ್ರಶ್ನೆಗಳು ಉದ್ಭವಾಗಿದೆ.. ಕಳಪೆ ಕಾಮಗಾರಿ ಬಗ್ಗೆ ಚರ್ಚೆಗಳಾರಂಭವಾಗಿದೆ..
ನಾಗಾವಾರದ ಬಳಿ ನಿರ್ಮಾಣ ಹಂತದ ನಮ್ಮ ಮೆಟ್ರೋ ಪಿಲ್ಲರ್ ಕುಸಿದು ಮಹಿಳೆ ಹಾಗೂ ಮಗು ಸಾವನಪ್ಪಿರುವ ಘಟನೆ ನಡೆದಿದೆ..
ಈ ಘಟನೆ ಸಂಬಂಧ ಡಿಸಿಪಿ ಭೀಮಾಶಂಕರ್ ಗುಳೇದ್ ಪ್ರತಿಕ್ರಿಯೆ ನೀಡಿದ್ದಾರೆ..
ಬೆಳಿಗ್ಗೆ ದುರ್ಘಟನೆ ನಡೆದಿದೆ.. ಸ್ಟೀಲ್ ರಾಡ್ ಸೆಂಟ್ರಿಂಗ್ ಕುಸಿದಿದೆ.. ಆಗ ಟೂ ವೀಲರ್ ನಲ್ಲಿದ್ದ ಕುಟುಂಬದ ಮೇಲೆ ಬಿದ್ದಿದೆ.. ತಾಯಿ ಮಗು ಗಂಭೀರ ಗಾಯ ಆಗಿತ್ತು.. ಕೂಡಲೇ ಆಲ್ಟಿಯಸ್ ಆಸ್ಪತ್ರೆಗೆ ದಾಖಲು ಮಾಡಲಾಯ್ತು.. ಆದರೆ ಅವರು ಅಷ್ಟ್ರಲ್ಲೇ ಮೃತಪಟ್ಟಿದ್ದರು.. ಮುಂದಿನ ಪ್ರಕ್ರಿಯೆಗೆ ಮೃತದೇಹಗಳನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ..
ಪತಿ ಲೋಹಿತ್ ದೂರು ನೀಡಲಿದ್ದಾರೆ.. ಅದರ ಅನ್ವಯ ತನಿಖೆ ನಡೆಸಲಿದ್ದೇವೆ. ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಬರಲಿದೆ.. ಮಹಜರು ಹಾಗು ಸ್ಯಾಂಪಲ್ ಕಲೆಕ್ಟ್ ಮಾಡುತ್ತೇವೆ.. ಕಂಟ್ಕಾಕ್ಟರ್ ಮೇಲೆ ಕೇಸ್ ದಾಖಲಿಸಿ ತನಿಖೆ ಮುಂದುವರೆಸುತ್ತೇವೆ ಎಂದಿದ್ದಾರೆ..
ಪ್ರಕರಣದ ಹಿನ್ನೆಲೆ :
ಮೆಟ್ರೋ ಪಿಲ್ಲರ್ ಕುಸಿದು 35 ವರ್ಷದ ತೇಜಸ್ವಿನಿ ಎಂಬುವರು ಸಾವನಪ್ಪಿದ್ದಾರೆ..
ದ್ವಿಚಕ್ರದಲ್ಲಿ ಹೋಗುವಾಗ ಮೆಟ್ರೋ ಪಿಲ್ಲರ್ ಇದ್ದಕ್ಕಿದ್ದ ಹಾಗೆ ಕುಸಿದಿದೆ..
ತಾಯಿ ಹಾಗೂ ಮಗು ಮೃತಪಟ್ಟಿದ್ದು , ಪತಿ ಹಾಗೂ ಮತ್ತೋರ್ವ ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ..
ಪತಿ ಲೋಹಿತ್ ಕುಮಾರ್ ಸಿವಿಲ್ ಎಂಜಿನಿಯರ್.. ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ವೃತ್ತಿ ಹೊಂದಿದ್ದ ತೇಜಸ್ವಿನಿ..
ದಂಪತಿಗಳು ನಾಗವಾರ ನಿವಾಸಿಯಾಗಿದ್ದರು..
ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಮೆಟ್ರೋ ಪಿಲ್ಲರ್ ಬಿದ್ದಿದೆ ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.. ಘಟನೆಯಲ್ಲಿ 2 ವರೆ ವರ್ಷದ ಮಗು ವಿಹಾನ್ ಕೂಡ ಮೃತಪಟ್ಟಿದ್ದಾನೆ..