Narendra Modi : ಹನುಮ ಇಲ್ಲದೆ ರಾಮನಿಲ್ಲ – ಕರ್ನಾಟಕ ಇಲ್ಲದೇ ಭಾರತ ವ್ಯಾಖ್ಯಾನಿಸಲು ಸಾಧ್ಯವಿಲ್ಲ – ಮೋದಿ….
ಕರ್ನಾಟಕ ಇಲ್ಲದೇ ಭಾರತ ಎಂದು ಕರೆಯಲು ಸಾಧ್ಯವಿಲ್ಲ. ಕರ್ನಾಟಕ ಹನುಮನ ಜನ್ಮಸ್ಥಳ. ಹನುಮ ಇಲ್ಲದೆ ರಾಮ ಇಲ್ಲ, ರಾಮ ಇಲ್ಲದೇ `ರಾಮಯಣ’ ಇಲ್ಲ ಎಂದು ಪ್ರಧಾನಿ ಮೋದಿ ನಿನ್ನೆ ಕನ್ನಡ ಮತ್ತು ಕರ್ನಾಟಕವನ್ನ ಹಾಡಿಹೊಗಳಿದ್ದಾರೆ.
ಕರ್ನಾಟಕ ಸಂಘದ ಅಮೃತ ಮಹೋತ್ಸವದಲ್ಲಿ ಏಕ್ ಭಾರತ್ ಶ್ರೇಷ್ಠ ಭಾರತ್ ಅನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ, ರಾಷ್ಟ್ರಕವಿ ಕುವೆಂಪು ಅವರ ಎಲ್ಲಾದರು ಇರು, ಎಂತಾದರು ಇರು, ನೀನು ಕನ್ನಡವಾಗಿರು’ ಅಮರ ವಾಣಿಯೊಂದಿಗೆ ಮಾತು ಆರಂಭಿಸಿದರು.
ಈ ಸಂಘದ ಕನಸು ಕಂಡು ಅದನ್ನು ಸಹಕಾರಗೊಳಿಸಿದ ಗಣ್ಯರಿಗೆ ನಾನು ಗೌರವ ಸಲ್ಲಿಸುತ್ತೇನೆ. 75 ವರ್ಷ ಸುಮ್ಮನೆ ಆಗುವುದಿಲ್ಲ, ಸಾಕಷ್ಟು ಏಳುಬೀಳು ಕಂಡಿರುತ್ತದೆ. ಎಲ್ಲ ಹಂತದಲ್ಲಿ ಸಂಘದ ಅಭಿವೃದ್ಧಿಗೆ ಕೈ ಜೋಡಿಸಿದವರಿಗೂ ಅಭಿನಂದನೆ ಸಲ್ಲಿಸುತ್ತೇನೆ.
ದೇವರ ದಾಸಿಮಯ್ಯರಂತಹ ಸಂತರು ದೇಶವನ್ನು ಜೋಡಿಸುವ ಕೆಲಸ ಮಾಡಿದ್ದಾರೆ. ಇಷ್ಟ ಲಿಂಗದ ಮೂಲಕ ದೇಶವನ್ನ ಬಸವಣ್ಣ ಜೋಡಿಸಿದ್ದಾರೆ. ರಾಣಿ ಅಬ್ಬಕ್ಕ, ಓಬವ್ವ, ಸಂಗೊಳ್ಳಿ ರಾಯಣ್ಣನಂತಹ ವೀರ ವಿರೋಧಿಗಳ ಮುಂದೆ ಗೋಡೆಯಂತೆ ನಿಲ್ಲುತ್ತಾರೆ. ಈ ಮೂಲಕ ಕರ್ನಾಟಕ ಭಾರತವನ್ನು ಪ್ರೇರೇಪಣೆಗೊಳಿಸಿದೆ. ಆದ್ರೆ ಕೆಲವರು ದೇಶವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
Narendra Modi : No Rama without Hanuman – India cannot be defined without Karnataka – Modi…