ಭಾರತ-ನೇಪಾಳ ಗಡಿ ಪ್ರದೇಶದ ಮೂರು ಹಳ್ಳಿಗಳಲ್ಲಿ ವಾಸಿಸುವ ಜನರನ್ನು ಖರೀದಿಸಲು ಮುಂದಾದ ನೇಪಾಳ
ಪಿಥೋರಗರ್, ಸೆಪ್ಟೆಂಬರ್15: ನಿಯಂತ್ರಣ ರೇಖೆ (ಎಲ್ಎಸಿ)ಯಲ್ಲಿ ಭಾರತವು ಚೀನಾದೊಂದಿಗೆ ಭಿನ್ನಾಭಿಪ್ರಾಯವನ್ನು ಹೊಂದಿರುವುದರಿಂದ, ನೇಪಾಳವು ತನ್ನ ಹೊಸ ವರಸೆಯನ್ನು ಪ್ರಾರಂಭಿಸಿದೆ. ನೇಪಾಲ ಪ್ರಧಾನಿ ಕೆ. ಪಿ. ಓಲಿ ಭಾರತದ ಆಡಳಿತದಲ್ಲಿರುವ ಹಳ್ಳಿಗಳ ಮೇಲೆ ಹಕ್ಕು ಸಾಧಿಸುವ ಸಲುವಾಗಿ ಉತ್ತರಾಖಂಡದ ಪಿಥೋರಗರ್ ಜಿಲ್ಲೆಯ ಮೂರು ಹಳ್ಳಿಗಳಲ್ಲಿ ವಾಸಿಸುವ ಜನರನ್ನು ತನ್ನೆಡೆಗೆ ಎಳೆಯುವ ಪ್ರಯತ್ನಕ್ಕೆ ಕೈಹಾಕಿದೆ.
ನೇಪಾಳಕ್ಕೆ ತಮ್ಮ ನಿಷ್ಠೆಯನ್ನು ಬದಲಿಸಲು ಉತ್ತರಾಖಂಡದ ಪಿಥೋರಗರ್ ಜಿಲ್ಲೆಯ ಕಲಾಪಣಿ ಪ್ರದೇಶದ ಪಕ್ಕದ ಮೂರು ಹಳ್ಳಿಗಳಲ್ಲಿ ವಾಸಿಸುವ ಜನರಿಗೆ ನೇಪಾಳ ಸರ್ಕಾರ ಹಣ, ಭೂಮಿ ಮತ್ತು ಮನೆಗಳನ್ನು ಕಟ್ಟಿಸಿಕೊಡುವುದರ ಜೊತೆಗೆ ನೇಪಾಳದ ಪೌರತ್ವವನ್ನು ನೀಡುವ ಅಮಿಷವನ್ನು ಒಡ್ಡುತ್ತಿದೆ.
ಕೈಲಾಶ್ ಪರ್ವತದ ಸಮೀಪ ಚೀನಾ ತನ್ನ ಮಿಲಿಟರಿ ನೆಲೆಗಳನ್ನು ವಿಸ್ತರಿಸಲು ನೇಪಾಳ ಸೇನೆಯು ನೆರವಾಗುತ್ತಿದೆ ಎಂದು ನಂಬಿರುವ ಸಮಯದಲ್ಲಿ, ನೇಪಾಳದ ಇತ್ತೀಚಿನ ನಡೆಯ ಹಿಂದೆ ಚೀನಾ ಇದೆ ಎನ್ನುವ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಚೀನಾದಿಂದ ಧನಸಹಾಯವನ್ನು ಪಡೆದು, ಡ್ರ್ಯಾಗನ್ ದೇಶದ ಅಣತಿಯಂತೆ ನೇಪಾಳ ಸರ್ಕಾರವು ಹಣ, ಭೂಮಿ ಮತ್ತು ಮನೆಗಳ ಜೊತೆಗೆ ನೇಪಾಳದ ಪೌರತ್ವವನ್ನು ಭರವಸೆ ನೀಡುತ್ತಿದೆ ಎಂದು ನಂಬಲಾಗಿದೆ.
ಕಳೆದ ಕೆಲವು ದಿನಗಳಿಂದ, ನೇಪಾಳ ಸರ್ಕಾರಕ್ಕಾಗಿ ಕೆಲಸ ಮಾಡುವ ಏಜೆಂಟರು ಕುಟಿ, ನಭಿ ಮತ್ತು ಗುಂಜಿ ಗ್ರಾಮಗಳಲ್ಲಿ ವಾಸಿಸುವ ಜನರೊಂದಿಗೆ ಸಂಪರ್ಕದಲ್ಲಿದ್ದಾರೆ. ಇದು ಕಲಾಪಣಿ ಪ್ರದೇಶದಿಂದ ಕೆಲವು ಕಿಲೋಮೀಟರ್ ದೂರದಲ್ಲಿದೆ ಎಂದು ನೇಪಾಳದ ಕಾರ್ಯಾಚರಣೆಯ ಮೂಲಗಳು ತಿಳಿಸಿವೆ