ನೈಟ್ ನ್ಯೂಸ್ ಅಪ್ಡೇಟ್
1.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು :
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಗುರುವಾರ ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
2.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮಾರ್ಗಸೂಚಿಗಳ ಬಿಡುಗಡೆ; ರಚನಾತ್ಮಕ ಶಿಕ್ಷಣ ಕಲಿಕೆಗೆ ಕೇಂದ್ರ ಸೂಚಿಸಿರುವ ಮಾನದಂಡಗಳಿವು ! ಸರಿ ಸುಮಾರು ಮೂರು ದಶಕಗಳ ನಂತರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಅಂತಿಮವಾಗಿ ಕ್ಯಾಬಿನೆಟ್ ಅನುಮೋದಿಸಿದೆ. “ಮಾನವ ಸಂಪನ್ಮೂಲ ಅಭಿವೃದ್ಧಿ” ಸಚಿವಾಲಯವನ್ನು “ಶಿಕ್ಷಣ ಸಚಿವಾಲಯ” ಎಂದು ಮರುನಾಮಕರಣ ಮಾಡಲಾಗಿದೆ.
3.
ನಾನು ವಿಧಿಯಾಟವನ್ನು ನಂಬುತ್ತೇನೆ. ಹಣೆಬರೆಹದಲ್ಲಿ ಏನಾಗುತ್ತೋ ಅದೇ ಆಗುತ್ತೆ -ಮಹಮ್ಮದ್ ಅಜರುದ್ದೀನ್ : .ಮಹಮ್ಮದ್ ಅಜರುದ್ದೀನ್.. ಭಾರತ ಕ್ರಿಕೆಟ್ ತಂಡವನ್ನು ಸುಮಾರು ಒಂದು ದಶಕಗಳ ಕಾಲ ಮುನ್ನಡೆಸಿದ್ದ ನಾಯಕ. ಅಷ್ಟೇ ಅಲ್ಲ, ಮೂರು ವಿಶ್ವಕಪ್ ಟೂರ್ನಿಗಳಿಗೆ ಭಾರತ ಕ್ರಿಕೆಟ್ ತಂಡದ ಸಾರಥಿಯಾಗಿದ್ದರು. ಸ್ಟೈಲೀಶ್ ಆಟದ ಮೂಲಕ ಗಮನ ಸೆಳೆದಿರುವ ಮಹಮ್ಮದ್ ಅಜರುದ್ದೀನ್ ಅದ್ಭುತ ಬ್ಯಾಟ್ಸ್ ಮೆನ್ ಹಾಗೂ ಚುರುಕಿನ ಫೀಲ್ಡರ್ ಕೂಡ ಹೌದು.
4.
ಕೋವಿಡ್ ಹೋರಾಟಕ್ಕೆ ಸಹಕರಿಸದ ಖಾಸಗಿ ಆಸ್ಪತ್ರೆಗಳ ವಿರುದ್ಧ ಖಡಕ್ ಕ್ರಮಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೂಚನೆ : ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಜರುಗಿಸುವ ಬಗ್ಗೆ ಸಿಎಂ ಜೊತೆ ಚರ್ಚೆ. ಬಿಬಿಎಂಪಿಯ ಪ್ರತಿ ವಲಯದಲ್ಲಿ ಕೊರೊನಾ ಪರೀಕ್ಷೆ ಸಂಖ್ಯೆ ಹೆಚ್ಚಿಸಲು ಸೂಚನೆ
5.
ತನ್ನ ಗಡಿಪ್ರದೇಶಗಳಿಗೆ ನೇಪಾಳಿಗರ ಅಕ್ರಮ ಪ್ರವೇಶ ತಡೆಯಲು ನೇಪಾಳ ಸರ್ಕಾರವನ್ನು ಕೋರಿದ ಭಾರತ : ಸ್ಥಳೀಯ ಪ್ರಾಂತ್ಯಗಳಾದ ಕಲಾಪಣಿ, ಲಿಂಪಿಯಾಧುರಾ, ಲಿಪುಲೆಖ್ ಮತ್ತು ಗುಂಜಿಗಳಿಗೆ ನೇಪಾಳಿ ನಾಗರಿಕರು ಅಕ್ರಮವಾಗಿ ಭೇಟಿ ನೀಡುವುದನ್ನು ತಡೆಯಲು ಭಾರತ ನೇಪಾಳವನ್ನು ಕೇಳಿದೆ