ಮಡಿಕೇರಿ: ಹೆಸರಾಂತ ಹಾಕಿ ಆಟಗಾರ ಬಿ.ಪಿ. ಕೃಷ್ಣ (68) ನಿಧನರಾಗಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ವಿಶ್ವೇಶ್ವರ ರಸ್ತೆ ನಿವಾಸದಲ್ಲಿ ನಿಧನರಾದ ಕೃಷ್ಣ, ಪತ್ನಿ, ಒಬ್ಬ ಪುತ್ರಿಯನ್ನು ಅಗಲಿದ್ದಾರೆ.
ಹಾಕಿ ಕ್ರೀಡೆಯಲ್ಲಿ ಮುನ್ನಡೆ ಆಟಗಾರರಾಗಿ ಛಾಪು ಮೂಡಿಸಿದ್ದ ಬಿ.ಪಿ ಕೃಷ್ಣ, ರಾಜ್ಯ ಹಾಕಿ ತಂಡವನ್ನು ಪ್ರತಿನಿದಿಸಿದ್ದರು. 6-7 ಭಾರಿ ಭಾರತ ಹಾಕಿ ತಂಡದ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿದ್ದರೂ ಸಹ ತಂಡದಲ್ಲಿ ಸ್ಥಾನ ಗಳಿಸುವಲ್ಲಿ ವಂಚಿತರಾಗಿದ್ದರು.
ಕೃಷ್ಣ ಅವರು ಅಂತಾರಾಷ್ಟ್ರೀಯ ಹಾಕಿ ಆಟಗಾರ, ಭಾರತ ತಂಡದ ಮಾಜಿ ನಾಯಕ ಬಿ.ಪಿ. ಗೋವಿಂದ್ ಅವರ ಸಹೋದರ. ಐಓಬಿ ಬ್ಯಾಂಕ್ ಉದ್ಯೋಗಿಯಾಗಿದ್ದ ಕೃಷ್ಣ, ರಾಜು ಎಂದೇ ಚಿರಪರಿಚಿತರಾಗಿದ್ರು.
ಮೃತರ ಅಂತ್ಯಕ್ರಿಯೆ ಇಂದು(ಮAಗಳವಾರ) ಸಂಜೆ ಸೋಮವಾರಪೇಟೆ ಸಮೀಪದ ಕರ್ಕಳ್ಳಿಯಲ್ಲಿರುವ ಕುರುಹಿನ ಶೆಟ್ಟಿ ಸ್ಮಶಾನದಲ್ಲಿ ನಡೆಯಲಿದೆ ಎಂದು ಕುಟುಂಬದವರು ಹೇಳಿದ್ದಾರೆ.
ಯಡಿಯೂರಪ್ಪ ನನಗೆ ಹಿರಿಯಣ್ಣನಿದ್ದಂತೆ: ಈಶ್ವರಪ್ಪ ಸ್ಪಷ್ಟನೆ, ರಾಜಕೀಯ ಜರ್ನಿಗೆ ಹೊಸ ತಿರುವು?
ಮಾಜಿ ಸಚಿವ ಹಾಗೂ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ತಮ್ಮ ಮಾತುಗಳಿಂದ ಮತ್ತೊಮ್ಮೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣರಾಗಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರು ನನಗೆ ಹಿರಿಯಣ್ಣನಂತೆ. ಅವರಿಗೂ...