ಹಾವು ಕಚ್ಚಿದರೂ ಪರೀಕ್ಷೆ ಬರೆಯಲು ಮುಂದಾದ ವಿದ್ಯಾರ್ಥಿನಿ ; ಪರೀಕ್ಷಾ ಕೇಂದ್ರದಲ್ಲಿ ಅಸ್ವಸ್ಥ…
ಹಾವು ಕಡಿತಕ್ಕೆ ಒಳಗಾದರೂ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾದ ಘಟನೆ ಒಡಿಶಾ ರಾಜ್ಯದ ಕಿಯೋಂಜಾರ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ದಾಧಿಬಾಬನ್ಪುರ ಗ್ರಾಮದ ನಿವಾಸಿ ಲಿಪ್ಸಾ ರಾಣಿ ಸಾಹೂ ಆನಂದಪುರ ಕಾಲೇಜಿನಲ್ಲಿ ಪಿಯುಸಿ ಪರೀಕ್ಷೆ ಬರೆಯುವಾಗ ತೀವ್ರ ಅಸ್ವಸ್ಥರಾಗಿದ್ದಾಳೆ. ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಿದ್ದರಿಂದ ನಂತರ ಶಾಲೆಯ ಸಿಬ್ಬಂದಿ ಆನಂದಪುರ ಉಪವಿಭಾಗೀಯ ಆಸ್ಪತ್ರೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆಗ ಹಾವು ಕಚ್ಚಿರುವ ವಿಷಯ ತಿಳಿದು ಬಂದಿದೆ.
ವಿದ್ಯಾರ್ಥಿನಿ ಪಿಯುಸಿ ಪರೀಕ್ಷೆಗೆ ಹಾಜರಾಗಲು ತಯಾರಾಗುವಾಗ ಮನ್ನ ಹಿತ್ತಲಿಗೆ ಹೋದಾಗ ಅಲ್ಲಿ ಕಪ್ಪು ಬಣ್ಣದ ಹಾವೊಂದು ಕಚ್ಚಿದೆ. ಆದರೂ ಆ ಹಡುಗಿ ಮನೆಯಲ್ಲಿ ವಿಷಯ ತಿಳಿಸದೇ ಪರೀಕ್ಷೆಗೆ ಹಾಜರಾಗಿದ್ದಾಳೆ. ನಂತರ ಪರೀಕ್ಷೆ ಬರೆಯುವಾಗ ಅಸ್ವಸ್ಥಗೊಂಡ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಂಬಂಧಿಕರು ಹೇಳಿದ್ದಾರೆ. ವಿದ್ಯಾರ್ಥಿನಿ ಸಧ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
Odisha: Student prepares to write exam despite being bitten by a snake; Sick in exam center…