ಯಡ್ರಾಮಿ: ತಾಲೂಕಿನ ಹಂಗರಗಾ(ಕೆ) ಗ್ರಾಮದ ಜನರು ಪ್ರತಿನಿತ್ಯ ನೀರಿಗಾಗಿ ಪರದಾಡುವಂತಾಗಿದೆ. ಗ್ರಾಮದಲ್ಲಿ ಎರಡು ಕೊಳವೆ ಬಾವಿಗಳಿದ್ದು ಅದರಲ್ಲಿ ಒಂದು ಕೆಟ್ಟು ನಿಂತಿದೇ. ಇನ್ನೊಂದು ಕೊಳವೆ ಬಾವಿಗೆ ಹೋಗಲು ಸೂಕ್ತ ರಸ್ತೆಯ ವ್ಯವಸ್ಥೆ ಇಲ್ಲ.
ಬರಿ ಕೇಸರೇ ತುಂಬಿರುವ ದಾರಿಯಲ್ಲಿ ಇಲ್ಲಿನ ಜನ ನೀರಿಗಾಗಿ ಓಡಾಡುತ್ತಿದ್ದಾರೆ. ಸುಮಾರು 35 ವರ್ಷಗಳಿಂದೆ ಈ ಕೊಳವೆಬಾವಿಯನ್ನು ಕೊರೆಸಲಾಗಿದೆ. ಆದ್ರೆ ಈವರೆಗೂ ಸುಸರ್ಜಿತ ರಸ್ತೆ ಕಲ್ಪಿಸಿಲ್ಲ. ಹೀಗಾಗಿ ನೀರಿಗಾಗಿ ಇಲ್ಲಿನ ಜನ ಪರದಾಡುವಂತಾಗಿದೆ..
ಇನ್ನು ಈ ಗ್ರಾಮ ವಡಗೇರಾ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಬರಲಿದ್ದು, ಕೊಳವೆಬಾವಿಗೆ ರಸ್ತೆ ವ್ಯವಸ್ತೆಮಾಡಿ ಎಂದು ಗ್ರಾಮಸ್ಥರು ಅನೇಕ ಬಾರಿ ಸ್ಥಳೀಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.. ಆದ್ರೆ ಇವರ ಮನವಿಗೆ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲವೆಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೆ ಆದಷ್ಟು ಬೇಗ ಕೊಳವೆಬಾವಿಗೆ ರಸ್ತೆ ವ್ಯವಸ್ಥೆ ಮಾಡಿಕೊಡಿ ಎಂದು ಗ್ರಾಮಸ್ಥರು ಮನವಿ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.