ಜೀವಂತ ರೈತನಿಗೆ `ಡೆತ್ ಸರ್ಟಿಫಿಕೇಟ್ ಕಳುಹಿಸಿದ ಅಧಿಕಾರಿಗಳು Saaksha Tv
ಕೋಲಾರ : ಜೀವಂತವಿದ್ದ ರೈತನಿಗೆ ಅಧಿಕಾರಿಗಳು ಡೆತ್ ಸರ್ಟಿಫಿಕೆಟ್ ನೀಡಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಎಂ.ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ರೈತ ಶಿವರಾಜ್ (40) ಪಡಿತರ ಪಡೆಯಲು ಹೋಗಿದ್ದರು. ಈ ಸಂದರ್ಭದಲ್ಲಿ ಅವರ ಹೆಸರನ್ನು ಪಡಿತರ ಪಟ್ಟಿಯಿಂದ ತೆಗೆದು ಹಾಕಲಾಗಿತ್ತು. ವಿಚಾರಿಸಿ ನೋಡಿದಾಗ ಇವರ ಸಾವನ್ನಪ್ಪಿದ್ದಾರೆ ಎಂದು ದಾಖಲಿಸಲಾಗಿತ್ತು. ಈ ಕಾರಣದಿಂದ ಅಧಿಕಾರಿಗಳು ಡೆತ್ ಸರ್ಟಿಫಿಕೆಟ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಹಿಂದಿನ ತಹಸೀಲ್ದಾರ್ ಜಿ. ರಾಜಶೇಖರ ಸೇರಿದಂತೆ ನಾಲ್ವರು ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೀತಿ ದೋಷವಾಗಿದೆ. ಇದು ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಗಿದೆಯೋ ಅಥವಾ ಬೇಕು ಅಂತಲೇ ಅಧಿಕಾರಿಗಳು ಮಾಡಿದ್ದಾರೆಯೋ ತಿಳಿಯುತ್ತಿಲ್ಲ. ಆದರೆ, ಈ ಕುರಿತು ನಾಲ್ವರು ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಾಗಿದೆ.