ಮಂಡ್ಯ: ಹೆಮ್ಮಾರಿ ಕೊರೊನಾನಿಂದ ಯಾರೇ ಮೃತಪಟ್ಟರೂ ಅವರ ಅಂತ್ಯಕ್ರಿಯೆಯನ್ನು ಆಯಾ ಧರ್ಮದ ಅನುಸಾರವೇ ನೆರವೇರಿಸಲು ಮಂಡ್ಯದ ಕೆ.ಆರ್ ಪೇಟೆಯ ಪಿಎಫ್ಐ ಕಾರ್ಯಕರ್ತರು ನಿರ್ಧರಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಿಂದ ಬಂದಿದ್ದ ವ್ಯಕ್ತಿ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದರು. ಅವರ ಅಂತ್ಯಕ್ರಿಯೆ ನಡೆಸಲು ಕೆ.ಆರ್ ಪೇಟೆ ತಾಲೂಕು ಆಡಳಿತದ ಜೊತೆ ಪಿಎಫ್ಐ ಕಾರ್ಯಕರ್ತರು ಕೈಜೋಡಿಸಿದ್ದಾರೆ.
ಸೋಂಕಿತರ ಅಂತ್ಯಸಂಸ್ಕಾರಕ್ಕೆ ಹೆಗಲು ಕೊಟ್ಟ ಸಂಘಟನೆ ಕಾರ್ಯಕರ್ತರು ಶವಕ್ಕೆ ಸಿಗಬೇಕಾದ ಗೌರವಗಳನ್ನು ಸಲ್ಲಿಸಿ ಅಂತ್ಯಸಂಸ್ಕಾರ ನಡೆಸುತ್ತಿದ್ದಾರೆ.
ಪಿಪಿಇ ಕಿಟ್ ಧರಿಸಿ ಗೌರವಯುತ ಅಂತ್ಯಕ್ರಿಯೆ ನಡೆಸಲು ವೈದ್ಯರಿಂದ ಪಿಎಫ್ಐ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತಿದೆ.
ಯಾವುದೇ ಧರ್ಮದ ವ್ಯಕ್ತಿ ಕೊವಿಡ್ನಿಂದ ಮೃತಪಟ್ಟರೇ ಆ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಕಾರ್ಯಕರ್ತರು ನಿರ್ಧರಿಸಿದ ಹಿನ್ನೆಲೆಯಲ್ಲಿ ತರಬೇತಿ ನೀಡಲಾಗುತ್ತಿದೆ. ಕಾರ್ಯಕರ್ತರ ಈ ಸಾಮಾಜಿಕ ಕಾರ್ಯಕ್ಕೆ ತಾಲೂಕಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.