ಭಾರತದ ಮೇಲೆ ದಾಳಿಗೆ 30,000 ಕೊಟ್ಟಿತ್ತು ಪಾಕ್ ಸೇನೆ.. ಬಾಯ್ಬಿಟ್ಟ ಉಗ್ರ..
ಭಾರತೀಯ ಸೇನೆ ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ಬಳಿ ಪಾಕಿಸ್ತಾನದ ಭಯೋತ್ಪಾದಕನನ್ನ ಬಂಧಿಸಿದೆ. ಭಾರತದ ಸೇನೆ ಮೇಲೇ ದಾಳಿ ಮಾಡಲು ಪಾಕಿಸ್ತಾನ ಗುಪ್ತಚರ ಇಲಾಖೆ30,000 ಪಾಕಿಸ್ತಾನ ರುಪಾಯಿ ನೀಡಿತ್ತು ಸೆರೆ ಸಿಕ್ಕಿರುವ ಉಗ್ರ ಬಾಯ್ಬಿಟ್ಟಿದ್ದಾನೆ.
ಆಗಸ್ಟ್ 21 ರಂದು, ಭಯೋತ್ಪಾದಕ ತಬಾರಕ್ ಹುಸೇನ್ ತನ್ನ 4-5 ಸಹಚರರೊಂದಿಗೆ ಎಲ್ಒಸಿ ಗಡಿಯ ಬಳಿ ತಂತಿಯನ್ನು ಕತ್ತರಿಸಿ ನುಸುಳುವಾಗ ಭಾರತೀಯ ಸೈನಿಕರ ಕಣ್ಣಿಗೆ ಸಿಕ್ಕಿಬಿದ್ದಿದ್ದ. ತಬ್ರಕ್ ಓಡಿಹೋಗಲು ಪ್ರಯತ್ನಿಸುತ್ತಿದ್ದಾಗ ಸೈನಿಕರು ಗುಂಡು ಹೊಡೆದು ಜೀವಂತ ಸೆರೆ ಹಿಡಿದಿದ್ದರು.
ಸೆರೆಸಿಕ್ಕ ವ್ಯಕ್ತಿ ಪಾಕಿಸ್ತಾನದ ಕೋಟ್ಲಿ ಜಿಲ್ಲೆಯ ನಿವಾಸಿ ಎಂದು ಹೇಳಲಾಗುತ್ತಿದೆ. ಉಳಿದ ನಾಲ್ಕೈದು ಸಹಚರರ ದಟ್ಟ ಕಾಡುಗಳ ಲಾಭ ಪಡೆದು ತಪ್ಪಿಸಿಕೊಂಡಿದ್ದಾರೆ. ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ತಬ್ರಕ್ ಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.
ತಬ್ರಕ್ ಹುಸೇನ್ ಭಯೋತ್ಪಾದನೆಯೊಂದಿಗೆ ದೀರ್ಘ ನಂಟು ಹೊಂದಿದ್ದು, ಪಾಕಿಸ್ತಾನ ಸೇನೆಯ ಮೇಜರ್ ಅವರಿಂದ ತರಬೇತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.