Pancharatha yathre : 50 ದಿನ ಪೂರೈಸಿದ ಪಂಚರತ್ನ ರಥಯಾತ್ರೆ…. ವಿಜಯಪುರದಲ್ಲಿ ಯಾತ್ರೆ ಮುಂದುವರಿಕೆ…
ಮಾಜಿ ಮಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಪಂಚ ರತ್ನ ರಥಯಾತ್ರೆ 50 ದಿನಕ್ಕೆ ಕಾಲಿಟ್ಟಿದೆ. ಇದೀಗ ಯಾತ್ರೆ ವಿಜಯಪುರಕ್ಕೆ ಕಾಲಿಟ್ಟಿದ್ದು, ನಿನ್ನೆ ಬಸವನ ಬಾಗೇವಾಡಿ ಮತ್ತು ಬಬಲೇಶ್ವರದಲ್ಲಿ ಸಂಚರಿಸಿದೆ.
ಪಂಚರತ್ನ ಯಾತ್ರೆ 50 ದಿನ ಪೂರೈಸಿದ ಸಂಭ್ರಮದಲ್ಲಿ ಕಾರ್ಯಕರ್ತರು ಹೆಚ್ ಡಿ ಕೆ ಸಮ್ಮುಖದಲ್ಲಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.
ನಂತರ ಕುಮಾರಸ್ವಾಮಿಯವರು ಬಸವನ ಬಾಗೇವಾಡಿ ಕ್ಷೇತ್ರದ ಮಣ್ಣೂರ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ದೇವರು ಹಾಗೂ ಗ್ರಾಮ ದೇವತೆಯ ದರ್ಶನ ಪಡೆದಿದ್ದಾರೆ.
ಸಿಂಧಗಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟಿಲ್ ನಿಧನ ನಂತರ ಒಂದು ದಿನದ ವಿರಾಮದ ಬಳಿಕ ಯಾತ್ರ ಮತ್ತೆ ಮುಂದುವರೆದಿದೆ.
50 ದಿನ ಪೂರೈಸಿದ ಪಂಚರತ್ನ ರಥಯಾತ್ರೆ
ವಿಜಯಪುರದಲ್ಲಿ ಸಾಗುತ್ತಿರುವ ಯಾತ್ರೆ
ಬಸವನಬಾಗೆವಾಡಿ ತಲುಪಿರುವ ಪಂಚ ರತ್ನ ರಥಯಾತ್ರೆ
50 ದಿನ ಪೂರೈಸಿದ ಸಂಭ್ರಮದಲ್ಲಿ ಕೇಕ್ ಕಟ್
ಪೂರ್ಣ ಕುಂಭ ಹೊತ್ತು ಸ್ವಾಗತ ಕೋರಿದ ಮಹಿಳೆಯರು
Pancharatha yathre : 50 days of Pancharatha Rath Yatra… Continuation of Yatra in Vijayapur…