ಪ್ರಯಾಣಿಕರೇ ಗಮನಿಸಿ : ನಾಳೆ ಬಸ್ bus ಸಂಚಾರ ಇರುತ್ತೆ..!
bengaluru ಬೆಂಗಳೂರು : ಕೊರೊನಾ ಹುಚ್ಚು ಕುದುರೆ ಓಟಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ವೀಕೆಂಡ್ ಕಫ್ರ್ಯೂ ವಿಧಿಸಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಿದೆ.
ವೀಕೆಂಡ್ ಲಾಕ್ ಡೌನ್ ಗೆ ಕೌಂಡ್ ಡೌನ್ ಶುರುವಾಗಿದ್ದು, ಬೆಂಗಳೂರಿನಲ್ಲಿ ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿವೆ.
ಇಂದು ರಾತ್ರಿ 9 ರಿಂದ 57 ಗಂಟೆಗಳ ಕಾಲ ಕರುನಾಡು ಬಂದ್ ಆಗಲಿದ್ದು, ಬಸ್ ಸಂಚಾರ ಇರುತ್ತಾ..? ಇಲ್ವಾ..? ಅನ್ನೋ ಅನುಮಾನಕ್ಕೆ ಇದೀಗ ಉತ್ತರ ಸಿಕ್ಕಿದ್ದು, ಬೆಂಗಳೂರಿನಲ್ಲಿ ಬಿಎಂಟಿಸಿ ಸಂಚಾರ ನಾಳೆ ಎಂದಿನಂತೆ ಇರಲಿದೆ.
ವೀಕೆಂಡ್ ಕಫ್ರ್ಯೂ ನಲ್ಲಿ ಜನಸಂಚಾರಕ್ಕೆ ನಿಬರ್ಂಧ ಹೇರಲಾಗಿದ್ದರೂ ಸಹ ಬಿಎಂಟಿಸಿ ಬಸ್ ಗಳು ಮಾತ್ರ ಎಂದಿನಂತೆ ಸಂಚರಿಸಲಿವೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.
ಆದ್ರೆ ದೂರ ಪ್ರಯಾಣದ ಬಸ್ ಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗುತ್ತಿದೆ. ದೂರ ಪ್ರಯಾಣದ ಬಸ್, ರೈಲುಗಳಿಗೆ ಅವಕಾಶ ಇದ್ದು, ನಿಲ್ದಾಣಗಳಿಗೆ ಹೋಗುವಾಗ ತಪಾಸಣೆ ವೇಳೆ ಟಿಕೆಟ್ ತೋರಿಸಬೇಕಾಗುತ್ತದೆ.