ಉಡುಪಿ – ಕೋವಿಡ್ ಪ್ರೋಟೋಕಾಲ್ ಉಲ್ಲಂಘಿಸಿದವರ ವಿರುದ್ಧ ಜಿಲ್ಲಾಧಿಕಾರಿ ಕೈಗೊಂಡ ಕ್ರಮಕ್ಕೆ ಸಾರ್ವಜನಿಕರಿಂದ ವಿರೋಧ
ಏಪ್ರಿಲ್ 19 ರ ಸೋಮವಾರ ಕೋವಿಡ್ ಪ್ರೋಟೋಕಾಲ್ ಉಲ್ಲಂಘಿಸಿ ಹೆಚ್ಚಿನ ಜನರನ್ನು ಸಾಗಿಸುತ್ತಿದ್ದ ಬಸ್ ನಿಂದ ಪ್ರಯಾಣಿಕರನ್ನು ಕೆಳಗಿಳಿಸಿದ ಉಡುಪಿ ಜಿಲ್ಲಾಧಿಕಾರಿ ಡಿಸಿ ಜಿ ಜಗದೀಶ್ ಅವರ ಕ್ರಮದ ಬಗ್ಗೆ ಸಾರ್ವಜನಿಕರು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ.
ಸೋಮವಾರ ಮಾಸ್ಕ್ ಧರಿಸದವರ ವಿರುದ್ಧ ಡಿಸಿ ಹಠಾತ್ ಪರಿಶೀಲನೆ ಕೈಗೊಂಡರು. ಸಂತೇಕಟ್ಟೆಯಲ್ಲಿ ಬಸ್ಗಳನ್ನು ಪರಿಶೀಲಿಸುವಾಗ, ಬಸ್ಗಳಲ್ಲಿ ಪ್ರಯಾಣಿಕರು ಕೋವಿಡ್ ಪ್ರೋಟೋಕಾಲ್ನಲ್ಲಿ ನಿರ್ದಿಷ್ಟಪಡಿಸಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿರುವುದು ಕಂಡು ಬಂತು. ನಿಂತು ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಬಸ್ ನಿಂದ ಕೆಳಗಿಳಿಯುವಂತೆ ಡಿಸಿ ಸೂಚಿಸಿದರು. ಇದು ವಿದ್ಯಾರ್ಥಿಗಳು ಸೇರಿದಂತೆ ಪ್ರತಿದಿನ ಉಡುಪಿಗೆ ಪ್ರಯಾಣಿಸುವ ಅನೇಕ ಪ್ರಯಾಣಿಕರಿಗೆ ಅನಾನುಕೂಲತೆಯನ್ನುಂಟು ಮಾಡಿತು.
ಮಾಧ್ಯಮದೊಂದಿಗೆ ಮಾತನಾಡಿದ ವಿದ್ಯಾರ್ಥಿನಿಯೊಬ್ಬಳು, ನಾವು ಹಳ್ಳಿಯಿಂದ ಉಡುಪಿಗೆ ಬರುತ್ತೇವೆ. ಡಿಸಿ ನಮ್ಮನ್ನು ಬಸ್ಸಿನಿಂದ ಇಳಿಯುವಂತೆ ಮಾಡಿದರೆ, ಮನೆಗೆ ತಲುಪಲು ನಮಗೆ ಇತರ ಬಸ್ಸುಗಳಿಲ್ಲ. ನಾವು ಮನೆಗೆ ತಲುಪಲು ತಡವಾದರೆ, ನಮ್ಮ ಪೋಷಕರು ಆತಂಕ ಪಡುತ್ತಾರೆ ಎಂದು ಹೇಳಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಾರ್ವಜನಿಕರು ಡಿಸಿ ಯನ್ನು, ನೀವು ವಿಡಿಯೋ ಮಾಡಿ ಮನೆಗೆ ಹೋಗಿದ್ದೀರಿ. ಅರ್ಧ ದಾರಿಯಲ್ಲಿ ಉಳಿದಿರುವ ಹುಡುಗಿಯರನ್ನು ಮನೆಗೆ ತಲುಪಲು ಯಾರು ಪರ್ಯಾಯ ವ್ಯವಸ್ಥೆ ಮಾಡುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇಲ್ಲಿದೆ ಇಮ್ಯುನಿಟಿ ಬೂಸ್ಟರ್ ಡ್ರಿಂಕ್ಸ್#Saakshatv #healthtips #ImmunityBoosterDrinks https://t.co/T9iVoNZHuW
— Saaksha TV (@SaakshaTv) April 16, 2021
ಬೂದುಕುಂಬಳಕಾಯಿ ಮಜ್ಜಿಗೆ ಹುಳಿ#Saakshatv #cookingrecipe #Boodukumbalakayi #majjigehuli https://t.co/HGcFk6L8E7
— Saaksha TV (@SaakshaTv) April 16, 2021
ಮಹಾರಾಷ್ಟ್ರದಲ್ಲಿ ಕಟ್ಟುನಿಟ್ಟಿನ ಕರ್ಫ್ಯೂ ಜಾರಿ – ಮುಂಬೈ ತೊರೆದು ಬೆಂಗಳೂರಿಗೆ ಹಾರಿದ ದೀಪಿಕಾ – ರಣವೀರ್ ಜೋಡಿ#Maharashtracurfew #DeepikaPadukone https://t.co/kxvhIRddmi
— Saaksha TV (@SaakshaTv) April 16, 2021
ಆವತೀಯತೆ ಆರಂಭದ ಮುಂದುವರೆದ ಭಾಗ..#Saakshatv #aavathiyathe #ವಿಪ್ರಭಾ #ಆವತೀಯತೆ https://t.co/Sr9ri1vMtx
— Saaksha TV (@SaakshaTv) April 19, 2021
ಕರ್ನಾಟಕದಲ್ಲಿ ನಾಳೆಯಿಂದ ಹೊಸ ರೂಲ್ಸ್ – ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಸೇರಿದಂತೆ ಕಠಿಣ ಕ್ರಮ#Nightcurfew #weekendcurfew https://t.co/Ve8H4ciFe1
— Saaksha TV (@SaakshaTv) April 20, 2021
#Peoplecriticise #UdupiDC #Covidprotocol