ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಮಹಾಮಾರಿ ದಿನೇ ದಿನೇ ತನ್ನ ಪ್ರಖರತೆಯನ್ನ ಹೆಚ್ಚಿಸಿಕೊಳ್ಳುತ್ತಲೇ ಇದೆ. ಹೆಮ್ಮಾರಿಗೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ಸೋಂಕಿತರ ಸಂಖ್ಯೆಯಲ್ಲೂ ಬೆಂಗಳೂರು ಮುಂಚೂಣಿಯಲ್ಲಿದೆ. ಇತ್ತ ಸರ್ಕಾರವೂ ಕೊರೊನಾ ವಿರುದ್ಧದ ಹೋರಾಟಕ್ಕೆ ಹಲವು ತಂತ್ರಗಳನ್ನ ಹೂಡುತ್ತಿದ್ದು, ಇದೀಗ ಮತ್ತೆ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಲಾಕ್ ಡೌನ್ ಘೋಷಣೆ ಮಾಡಿದೆ.
ಈಗಾಗಲೇ ಕೊರೊನಾ ಮಹಾಮಾರಿಯಿಂದ ಬೇಸತ್ತು ಹೋಗಿರುವ ಜನರೆಲ್ಲ ಸಾಕಪ್ಪ ಸಾಕು ಬೆಂಗಳೂರು ಸಹವಾಸ ಅಂತ ಊರುಗಳಿಗೆ ತೆರಳುತ್ತಿರುವ ದೃಷ್ಯ ಸರ್ವೇ ಸಾಮಾನ್ಯವಾಗಿ ಕಮಡುಬಂದಿದೆ. ಹೀಗಾಗಿ ಪ್ರಮುಖ ಸ್ಥಳಗಳಾದ ಮೆಜೆಸ್ಟಿಕ್, ನೆಲಮಂಗಲ ಟೋಲ್ ಸೇರಿದಂತೆ ಹಲವೆಡೆ ಜನರು ಬಸ್ ಗಳಿಗಾಗಿ ಕಾಯುತ್ತಿದ್ದಾರೆ. ಇದರ ಪರಿಣಾಮಾಗಿ ನೆಲಮಂಗಲ ಟೋಲ್ ನಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು.