ಬೆಂಗಳೂರು : ವರನಟ ಡಾ. ರಾಜ್ ಕುಮಾರ್ ಅಭಿನಯದ ಬಬ್ರುವಾಹನ ಸಿನಿಮಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. ಈ ಸಿನಿಮಾದಲ್ಲಿ ಅಣ್ಣಾವ್ರ ಅಭಿನಯ, ಅವರ ಗಾನ ಮಾಧುರ್ಯ.. ಸಂಭಾಷಣೆ ಯಾರು ತಾನೇ ಮರೆಯೋಕೆ ಸಾಧ್ಯ. ಅಂದಿನ ಕಾಲಕ್ಕೆ ಈ ಸಿನಿಮಾ ಎಷ್ಟು ಖ್ಯಾತಿ ಪಡೆದಿತ್ತೋ ಅಷ್ಟೇ ಖ್ಯಾತಿಯನ್ನ ಅಂದಿನ ಕಾಲದಲ್ಲೇ ರಾಜ್ ಕುಮಾರ್ ಅವರನ್ನ ಡಬಲ್ ರೋಲ್ ನಲ್ಲಿ ಇಂದಿಗೂ ಲೇಟೆಸ್ಟ್ ಅನ್ನೋ ರೀತಿ ತೋರಿಸಿದ್ದ ರೀತಿ ಇಡೀ ದೇಶದ ಗಮನ ಸೆಳೆದಿತ್ತು. ಈ ಅದ್ಭುತ ದೃಶ್ಯವನ್ನು ಸೆರೆಹಿಡಿದಿದ್ದ ಟ್ರಿಕ್ಸ್ ಫೋಟೊಗ್ರಫಿ ಎಕ್ಸ್ ಪರ್ಟ್ ಎಂದೇ ಖ್ಯಾತಿ ಗಳಿಸಿದ್ದ ಶ್ರೀಕಾಂತ್ ನಿನ್ನೆ ನಿಧನರಾಗಿದ್ದಾರೆ.
ಮೂಲತಃ ಮದ್ದೂರಿನವರಾದ ಶ್ರೀಕಾಂತ್ ಬಿ.ಎಸ್ಸಿ ಪದವಿ ಪಡೆದಿದ್ದರು. ಚೆನ್ನೈನ ಗೋಲ್ಡನ್ ಸ್ಡುಡಿಯೋದಲ್ಲಿ ಕೆಲಸ ಮಾಡಿದ್ದ ಇವರು 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಮೂರು ಬಾರಿ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸಾಕ್ಷಾತ್ಕಾರ, ಗೆಜ್ಜೆಪೂಜೆ, ಬಬ್ರುವಾಹನ, ಉಪಾಸನೆ, ಜೀವನ ಚೈತ್ರ, ತ್ರಿಮೂರ್ತಿ ಸಿನಿಮಾಗಳಲ್ಲಿ ಕ್ಯಾಮೆರಾ ಕೈಚಳಕ ತೋರಿದ್ದ ಖ್ಯಾತಿ ಶ್ರೀಕಾಂತ್ ಅವರದ್ದಾಗಿದೆ. ಇನ್ನು ಶ್ರೀಕಾಂತ್ ಅವರ ನಿಧನಕ್ಕೆ ಚಿತ್ರರಂಗದ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.