ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಪೊಲೀಸ್ ಕಾನ್ಸ್ ಟೇಬಲ್
ಅತ್ಯಾಚಾರ ಸಂತ್ರಸ್ತೆಯಾಗಿದ್ದ ಅಪ್ರಾಪ್ತೆ ಮೇಲೆಯೇ ಪೊಲೀಸ್ ಕಾನ್ಸ್ ಟೇಬಲ್ ಓರ್ವ ಅತ್ಯಾಚಾರ ಎಸಗಿರುವ ಘಟನೆ ದಕ್ಷಿಣ ಕನ್ನಡದ ಕಡಬದಲ್ಲಿ ಬೆಳಕಿಗೆ ಬಂದಿದೆ.. ಕಡಬ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಶಿವರಾಜ್ ವಿರುದ್ಧ ಸಂತ್ರಸ್ತೆಯ ತಂದೆ ಅತ್ಯಾಚಾರದ ಕೇಸ್ ದಾಖಲು ಮಾಡಿದ್ದಾರೆ. ಮೂಲಗಳ ಪ್ರಕರಣ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಪೊಲೀಸ್ ಕಾನ್ಸ್ ಟೇಬಲ್ ಪರಾರಿಯಾಗಿರೋದಾಗಿ ತಿಳಿದುಬಂದಿದೆ. ಜೊತೆಗೆ ಸಂತ್ರಸ್ತೆ ಹಾಗೂ ಆಕೆಯ ತಾಯಿ ಕೂಡ ಸೆಪ್ಟೆಂಬರ್ 18ರಿಂದ ಕಾಣೆಯಾಗಿರೋದಾಗಿ ಸಂತ್ರಸ್ತೆಯ ತಂದೆ ದೂರು ದಾಖಲಿಸಿದ್ದಾರೆ.
ಬರ್ತ್ ಡೇ ಗೆ ಮಹಿಳಾ ಪೇದೆಯನ್ನ ಆಹ್ವಾನಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಕಾಮುಕರು
ಅಪ್ರಾಪ್ತ ಬಾಲಕಿ ಎರಡು ವರ್ಷಗಳ ಹಿಂದೆ ಕಡಬ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. ನಂತರ, ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವರಾಜ್ ಹುಡುಗಿಯೊಂದಿಗೆ ಸಂವಹನ ನಡೆಸುತ್ತಿದ್ದ. ಸಮನ್ಸ್ ನೀಡುವ ನೆಪದಲ್ಲಿ ಆತ ಆಗಾಗ ಆಕೆಯ ಮನೆಗೆ ಭೇಟಿ ನೀಡುತ್ತಾ , ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನೋಡಿಕೊಂಡು ಆಕೆಗೆ ಮದುವೆಯಾಗುವುದಾಗಿ ನಂಬಿಸಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎನ್ನಲಾಗಿದೆ. ಇದೇ ರೀತಿ ಆಗಾಗ ಆಕೆಯ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಇದ್ರಿಂದಾಗಿ ಆಕೆ ಗರ್ಭವತಿಯೂ ಆಗಿದ್ದಾಳೆ.. ಸಂತ್ರಸ್ತೆ ಗರ್ಭವತಿಯಾದ ನಂತರ ಪೋಷಕರು ವಿಚಾರಸಿದಾಗ ಆಕೆ ಸತ್ಯ ಬಾಯ್ಬಿಟ್ಟಿದ್ದಾಳೆ. ಅದಾದ ಬಳಿಕ ಪೊಲೀಸ್ ಕಾನ್ಸ್ ಟೇಬಲ್ ವಿರುದ್ಧ ಸಂತ್ರಸ್ತೆ ತಂದೆ ದೂರು ದಾಖಲು ಮಾಡಿದ್ದಾರೆ.
ಕಾರ್ ಗಳ ನಡುವೆ ಮುಖಾಮುಖಿ ಡಿಕ್ಕಿ – ಭೀಕರ ಅಪಘಾತದಲ್ಲಿ ಇಬ್ಬರ ಸಾವು
ದೂರು ದಾಖಲಿಸುವ ಮುನ್ನ ಬಾಲಕಿಯನ್ನು ಮದುವೆಯಾಗಲು ಪೋಷಕರು ಸೂಚಿಸಿದ್ದು, ಆರೋಪಿ ಪೊಲೀಸ್ ಕಾನ್ಸ್ ಟೇಬಲ್ ನಿರಾಕರಿಸಿದ್ದು, ಗರ್ಭಪಾತ ಮಾಡಿಸುವಂತೆ ತಿಳಿಸಿದ್ದಾನೆ ಎಂದೂ ಕೂಡ ಆರೋಪದಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲ ಸೆಪ್ಟೆಂಬರ್ 18ರಿಂದ ಸಂತ್ರಸ್ತೆ ಹಾಗೂ ತಾಯಿ ಕಾಣೆಯಾಗಿರೋದಾಗಿ ದೂರಲಾಗಿದೆ. ಅಲ್ಲದೇ ಸಂತ್ರಸ್ತೆ ಹಾಗೂ ತಾಯಿಯನ್ನ ಕಿಡ್ನಾಪ್ ಮಾಡಿ ಅಗ್ಞಾತ ಸ್ಥಳದಲ್ಲಿ ಇಟ್ಟಿರುವ ಶಂಕೆಯೂ ವ್ಯಕ್ತವಾಗಿದೆ. ಇನ್ನೂ ಆರೋಪಿಯು ಸಂತ್ರಸ್ತೆ ಕುಟುಂಬಕ್ಕೆ ಡಿಜಿಟಲ್ ಪೇ ಮೂಲಕ 35000 ಕಳುಹಿಸಿದ್ದು, ಗರ್ಭಪಾತವನ್ನೂ ಮಾಡಿಸಲಾಗಿದೆ ಎಂದು ತಿಳಿದುಬಂದಿದೆ. ಆರೋಪಿ ಪೊಲೀಸ್ ಪೇದೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ಆತನ ಮಗಳು ಮತ್ತು ಪತ್ನಿಯನ್ನು ಎಲ್ಲಿ ಇರಿಸಲಾಗಿದೆ ಎಂದು ಪತ್ತೆ ಹಚ್ಚುವಂತೆ ತಂದೆ ಪೊಲೀಸರನ್ನು ಕೇಳಿದ್ದಾರೆ. ಅಲ್ಲದೇ ಈ ಬಗ್ಗೆ ಸಿಎಂಗೂ ಕೂಡ ದೂರು ನೀಡಿದ್ದಾರೆ.