ADVERTISEMENT
Thursday, July 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಪ್ರಭಾಸ್ ಮತ್ತು ನಾನು 3ಎಎಂ ಸ್ನೇಹಿತರು : ನಟಿ ಅನುಷ್ಕಾ ಶೆಟ್ಟಿ

admin by admin
March 17, 2020
in Cinema, International
Share on FacebookShare on TwitterShare on WhatsappShare on Telegram

2005 ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ, ತಮಿಳು- ತೆಲುಗು ಚಿತ್ರರಂಗದ ಬಹುಬೇಡಿಕೆಯ ನಟಿ, ಸ್ವೀಟಿ ಅನುಷ್ಕಾ ಶೆಟ್ಟಿ ಚಿತ್ರರಂಗದಲ್ಲಿ 15 ವರ್ಷಗಳನ್ನು ಪೂರೈಸಿದ್ದಾರೆ. ಇತ್ತೀಚೆಗೆ 15 ವರ್ಷದ ತನ್ನ ಸಿನಿ ಪಯಣದ ಸಂಭ್ರಮವನ್ನು #TeamASF (ಅನುಷ್ಕಾ ಶೆಟ್ಟಿ ಅಭಿಮಾನಿ ಬಳಗ) ಜೊತೆ ಅದ್ದೂರಿಯಾಗಿ ಆಚರಿಸಿಕೊಂಡ ಬಾಹುಬಲಿ ಬೆಡಗಿ ಖಾಸಗಿ ಸಂದರ್ಶನವೊಂದರಲ್ಲಿ ತಮ್ಮ ಸಿನಿ ಪಯಣದ ಮತ್ತು ವೈಯುಕ್ತಿಕ ಜೀವನದ ಬಗ್ಗೆ ಮಾತನಾಡಿದ್ದರು.
ನಟಿ ಅನುಷ್ಕಾ ಶೆಟ್ಟಿ ಮತ್ತು ನಟ ಪ್ರಭಾಸ್‌ ಮಧ್ಯೆ ಹುಟ್ಟಿಕೊಂಡ ಗಾಸಿಪ್‌ ಗಳಿಗೆ ಲೆಕ್ಕವಿಲ್ಲ. ಈ ಸಂದರ್ಭದಲ್ಲಿ ಪ್ರಭಾಸ್‌ ಬಗ್ಗೆಯೂ ಒಂದಷ್ಟು ವಿಚಾರಗಳನ್ನು ಅನುಷ್ಕಾ ಮನ ಬಿಚ್ಚಿ ಹಂಚಿಕೊಂಡಿದ್ದಾರೆ. ಕಳೆದ 15 ವರ್ಷಗಳಿಂದ ಪ್ರಭಾಸ್ ನನಗೆ ಗೊತ್ತು. ಅವರು ನನ್ನ 3 ಎಎಂ ಸ್ನೇಹಿತ. ನಮ್ಮಿಬ್ಬರ ಮಧ್ಯೆ ಅದ್ಭುತವಾದ ಗೆಳೆತನವಿದೆ. ನನ್ನ ಮತ್ತು ಪ್ರಭಾಸ್ ಕುರಿತಂತೆ ಸಾಕಷ್ಟು ಗಾಸಿಪ್‍ಗಳು ಹರಿದಾಡುತ್ತಿರುತ್ತದೆ.‌ ನಮ್ಮ ಆನ್‌ಸ್ಕ್ರೀನ್‌ ಕೆಮಿಸ್ಟ್ರೀ ತುಂಬ ಚೆನ್ನಾಗಿದೆ. ಅದಕ್ಕೆ ಹೀಗೆ ಕೆಲ ಗಾಸಿಪ್‍ಗಳು ಮಾಡಲಾಗುತ್ತದೆ. ನಾವಿಬ್ಬರು ಒಳ್ಳೆಯ ಸ್ನೇಹಿತರು. ಇಬ್ಬರೂ ಒಂದೇ ತರಹದ ವ್ಯಕ್ತಿತ್ವ ಹೊಂದಿದ್ದೇವೆ, ನಮ್ಮ ಭಾವನೆಗಳನ್ನು ನಾವು ಮುಚ್ಚಿಡುವುದಿಲ್ಲ ಎಂದಿದ್ದಾರೆ. 3ಎಎಂ ಫ್ರೆಂಡ್ಸ್ ಎಂದರೆ, ಮನಸ್ಸಿಗೆ ತುಂಬ ಹತ್ತಿರವಾದ ಸ್ನೇಹಿತರು, ಒಬ್ಬರಿಗೊಬ್ಬರು ಅವಲಂಬಿತರಾದವರು ಎಂದರ್ಥ. ಬೆಳಗಿನ ಜಾವ ಮೂರು ಗಂಟೆಗೆ ಫೋನ್‌ ಮಾಡಿದರೂ, ಯಾವುದೇ ಬೇಸರವಿಲ್ಲದೆ ಖುಷಿಯಿಂದ ಕರೆ ಸ್ವೀಕರಿಸುವವರು ಎಂದರ್ಥ. ಹಾಗಾಗಿ, ಅದೇ ತರಹದ ಗೆಳೆತನ ತನ್ನ ಮತ್ತು ಪ್ರಭಾಸ್ ಮಧ್ಯೆ ಇದೆ ಎಂದು ಅನುಷ್ಕಾ ಶೆಟ್ಟಿ ಹೇಳಿದ್ದಾರೆ.


ಅನುಷ್ಕಾಗೆ ಪ್ರಭಾಸ್ ಮಾತ್ರವಲ್ಲ ಟಾಲಿವುಡ್‌ನಲ್ಲಿ ಇನ್ನೂ ಅನೇಕರೊಂದಿಗೆ ಉತ್ತಮ ಗೆಳೆತನ ಇದೆ. ಅದರಲ್ಲಿ ಪ್ರಮುಖವಾಗಿ ರಾಜಮೌಳಿ ಕುಟುಂಬ, ರಾನಾ ದಗ್ಗುಬಾಟಿ, ಪ್ರಶಾಂತಿ, ಸುಪ್ರಿಯಾ, ಯುವಿ ಕ್ರಿಯೇಷನ್ಸ್‌ನ ವಂಶಿ, ಪ್ರಮೋದ್‌ ಅವರೊಂದಿಗೂ ಉತ್ತಮ ಸ್ನೇಹ ಸಂಬಂಧವನ್ನು ಅನುಷ್ಕಾ ಹೊಂದಿದ್ದಾರೆ.
ಈಗಲೂ ಸಿನಿಮಾ ರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಮುಂದುವರಿದಿರುವ ಅನುಷ್ಕಾ ಶೆಟ್ಟಿ, ಸದ್ಯ ‘ನಿಶಬ್ದಂ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹೇಮಂತ್ ಮಧುಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ನಿಶ್ಯಬ್ಧಂ ಚಿತ್ರ, ಈಗಾಗಲೇ ಟೀಸರ್ ಮತ್ತು ಪೋಸ್ಟರ್ ಗಳ ಮೂಲಕ ಬಹಳಷ್ಟು ನಿರೀಕ್ಷೆ ಹೆಚ್ಚಿಸಿದೆ. ಅಭಿಮಾನಿಗಳು ಈ ಹೊಸ ಚಿತ್ರದಲ್ಲಿ ಅನುಷ್ಕಾ ಹೇಗೆ ಮೋಡಿ ಮಾಡಲಿದ್ದಾರೆ ಎಂದು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

Related posts

ಪ್ರೇಮ್ ಆರಂಭಿಸಿದ್ದ ಪ್ರಶಸ್ತಿ ಅಭಿಯಾನಕ್ಕೆ ನಾದಬ್ರಹ್ಮ ಬ್ರೇಕ್: ಇದು ಮ್ಯಾಚ್ ಆಗದ ಫ್ಲಾಪ್ ಸಾಂಗ್ ಎಂದ ಹಂಸಲೇಖ

ಪ್ರೇಮ್ ಆರಂಭಿಸಿದ್ದ ಪ್ರಶಸ್ತಿ ಅಭಿಯಾನಕ್ಕೆ ನಾದಬ್ರಹ್ಮ ಬ್ರೇಕ್: ಇದು ಮ್ಯಾಚ್ ಆಗದ ಫ್ಲಾಪ್ ಸಾಂಗ್ ಎಂದ ಹಂಸಲೇಖ

July 22, 2026
ಸ್ಯಾಂಡಲ್ ವುಡ್ ಸುಲ್ತಾನ್ ಗೆ ಅಯೋಗ್ಯ ತಂಡದ ಸಾಥ್ ಡಿಬಾಸ್ ಬೇಗ ಬಿಡುಗಡೆಯಾಗಲಿ ಎಂದು ಹಾರೈಸಿದ ನೀನಾಸಂ ಸತೀಶ್

ಸ್ಯಾಂಡಲ್ ವುಡ್ ಸುಲ್ತಾನ್ ಗೆ ಅಯೋಗ್ಯ ತಂಡದ ಸಾಥ್ ಡಿಬಾಸ್ ಬೇಗ ಬಿಡುಗಡೆಯಾಗಲಿ ಎಂದು ಹಾರೈಸಿದ ನೀನಾಸಂ ಸತೀಶ್

July 21, 2026


ಸಿನಿಮಾ ರಂಗದಲ್ಲಿ 15 ವರ್ಷ ಪೂರೈಸಿದ ಸಂಭ್ರಮವನ್ನು ಅದ್ದೂರಿಯಾಗಿ ‌ಆಚರಿಸಿಕೊಂಡ ಅನುಷ್ಕಾ, ಸಾಮಾಜಿಕ ಜಾಲತಾಣದಲ್ಲಿ “15 ವರ್ಷದ ನನ್ನ ಸಿನಿ ಪಯಣವನ್ನು ಸಂಭ್ರಮ #TeamASF (ಅನುಷ್ಕಾ ಶೆಟ್ಟಿ ಅಭಿಮಾನಿ ಬಳಗ) ಜೊತೆ ಆಚರಣೆ, ನೀವು ತೋರಿದ ಪ್ರೀತಿ ಮತ್ತು ಬೆಂಬಲಕ್ಕೆ ತುಂಬಾ ಧನ್ಯವಾದಗಳು” ಎಂದು ಬರೆದುಕೊಂಡು, ಅಭಿಮಾನಿಗಳ ಜೊತೆ ತಾವು ಇರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಎಸ್.ಎಸ್ ರಾಜಮೌಳಿ, ಪುರಿ ಜಗನ್ನಾಥ್, ಸುರೇಶ್ ಬಾಬು, ನಟಿ ಮತ್ತು ನಿರ್ಮಾಪಕಿ ಚಾರ್ಮಿ ಕೌರ್ ಸೇರಿದಂತೆ ಸಾಕಷ್ಟು ಗಣ್ಯರು ಭಾಗಿಯಾಗಿ, ಅನುಷ್ಕಾಗೆ ಶುಭಕೋರಿದ್ದರು

Tags: Anushka shettyPrabhastamil movieTelugu movie
ShareTweetSendShare
Join us on:

Related Posts

ಪ್ರೇಮ್ ಆರಂಭಿಸಿದ್ದ ಪ್ರಶಸ್ತಿ ಅಭಿಯಾನಕ್ಕೆ ನಾದಬ್ರಹ್ಮ ಬ್ರೇಕ್: ಇದು ಮ್ಯಾಚ್ ಆಗದ ಫ್ಲಾಪ್ ಸಾಂಗ್ ಎಂದ ಹಂಸಲೇಖ

ಪ್ರೇಮ್ ಆರಂಭಿಸಿದ್ದ ಪ್ರಶಸ್ತಿ ಅಭಿಯಾನಕ್ಕೆ ನಾದಬ್ರಹ್ಮ ಬ್ರೇಕ್: ಇದು ಮ್ಯಾಚ್ ಆಗದ ಫ್ಲಾಪ್ ಸಾಂಗ್ ಎಂದ ಹಂಸಲೇಖ

by Shwetha
July 22, 2026
0

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಅವರಿಗೆ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ಪ್ರಶಸ್ತಿ ನೀಡಬೇಕು ಎಂದು ನಟ ನೆನಪಿರಲಿ ಪ್ರೇಮ್ ಆರಂಭಿಸಿದ್ದ ಅಭಿಯಾನಕ್ಕೆ...

ಸ್ಯಾಂಡಲ್ ವುಡ್ ಸುಲ್ತಾನ್ ಗೆ ಅಯೋಗ್ಯ ತಂಡದ ಸಾಥ್ ಡಿಬಾಸ್ ಬೇಗ ಬಿಡುಗಡೆಯಾಗಲಿ ಎಂದು ಹಾರೈಸಿದ ನೀನಾಸಂ ಸತೀಶ್

ಸ್ಯಾಂಡಲ್ ವುಡ್ ಸುಲ್ತಾನ್ ಗೆ ಅಯೋಗ್ಯ ತಂಡದ ಸಾಥ್ ಡಿಬಾಸ್ ಬೇಗ ಬಿಡುಗಡೆಯಾಗಲಿ ಎಂದು ಹಾರೈಸಿದ ನೀನಾಸಂ ಸತೀಶ್

by Shwetha
July 21, 2026
0

ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಅಯೋಗ್ಯ 2 ಚಿತ್ರದ ಪ್ರಚಾರ ಕಾರ್ಯ ಈಗ ಭರ್ಜರಿಯಾಗಿ ಸಾಗುತ್ತಿದೆ. ನಟ ಸತೀಶ್ ನೀನಾಸಂ ತಮ್ಮ ಚಿತ್ರತಂಡದೊಂದಿಗೆ ಹುಬ್ಬಳ್ಳಿಯಲ್ಲಿ ಅಬ್ಬರದ ಪ್ರಚಾರ...

ರಾಮಾಯಣ ದೃಶ್ಯಕಾವ್ಯದಲ್ಲಿ ಸೀತೆಯಾಗಲು ಆಲೋಚನೆಯಲ್ಲೂ ಪವಿತ್ರತೆಯನ್ನೇ ಕಾಯ್ದುಕೊಂಡಿದ್ದೆ: ದೆಹಲಿಯ ಭವ್ಯ ವೇದಿಕೆಯಲ್ಲಿ ಭಾವುಕರಾದ ಅಭಿನಯ ಶಾರದೆ ಸಾಯಿ ಪಲ್ಲವಿ!

ರಾಮಾಯಣ ದೃಶ್ಯಕಾವ್ಯದಲ್ಲಿ ಸೀತೆಯಾಗಲು ಆಲೋಚನೆಯಲ್ಲೂ ಪವಿತ್ರತೆಯನ್ನೇ ಕಾಯ್ದುಕೊಂಡಿದ್ದೆ: ದೆಹಲಿಯ ಭವ್ಯ ವೇದಿಕೆಯಲ್ಲಿ ಭಾವುಕರಾದ ಅಭಿನಯ ಶಾರದೆ ಸಾಯಿ ಪಲ್ಲವಿ!

by Shwetha
July 20, 2026
0

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಅಪರೂಪದ ಹಾಗೂ ಅದ್ಭುತ ದೃಶ್ಯಕಾವ್ಯ ಎಂದು ಕರೆಯಲ್ಪಡುತ್ತಿರುವ ನಿರ್ದೇಶಕ ನಿತೇಶ್ ತಿವಾರಿ ಅವರ ಬಹುಕೋಟಿ ವೆಚ್ಚದ ರಾಮಾಯಣ ಚಿತ್ರದ ಪ್ರಚಾರ ಕಾರ್ಯಕ್ಕೆ...

ರಾಮಾಯಣ ಮಹಾ ಸಂಗ್ರಾಮಕ್ಕೆ ಮುನ್ನುಡಿ: ದೆಹಲಿಯಲ್ಲಿ ‘ರಾವಣ’ ಯಶ್ ಆರ್ಭಟ, ಸೀತೆ ಸಾಯಿ ಪಲ್ಲವಿ ನಟನೆಗೆ ರಾಕಿ ಭಾಯ್ ಫಿದಾ!

ರಾಮಾಯಣ ಮಹಾ ಸಂಗ್ರಾಮಕ್ಕೆ ಮುನ್ನುಡಿ: ದೆಹಲಿಯಲ್ಲಿ ‘ರಾವಣ’ ಯಶ್ ಆರ್ಭಟ, ಸೀತೆ ಸಾಯಿ ಪಲ್ಲವಿ ನಟನೆಗೆ ರಾಕಿ ಭಾಯ್ ಫಿದಾ!

by Shwetha
July 20, 2026
0

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅತ್ಯಂತ ಅದ್ದೂರಿ, ಐತಿಹಾಸಿಕ ಹಾಗೂ ಮಹತ್ವಾಕಾಂಕ್ಷೆಯ ಸಿನಿಮಾ ಎನಿಸಿಕೊಂಡಿರುವ ರಾಮಾಯಣ ಈಗ ಇಡೀ ವಿಶ್ವದ ಸಿನಿಮಾ ಪ್ರೇಕ್ಷಕರ ನಿದ್ದೆಗೆಡಿಸಿದೆ. ದೆಹಲಿಯಲ್ಲಿ...

ಕರಾವಳಿ ವಿವಾದಕ್ಕೆ ಅಂತ್ಯ ಹಾಡಿದ ರಾಜ್ ಬಿ ಶೆಟ್ಟಿ: ವಿವಾದ ಮಾಡೋದು ನಮಗೂ ನೋವು ತರುತ್ತೆ ಎಂದು ಕ್ಷಮೆಯಾಚಿಸಿದ ನಟ -ಕಂಟೆಂಟ್ ಇಲ್ಲ ಅಂತ ಟೀಕಿಸಿದವರಿಗೆ ಪ್ರೀಮಿಯರ್ ಶೋ ಮೂಲಕವೇ ಉತ್ತರ

ಕರಾವಳಿ ವಿವಾದಕ್ಕೆ ಅಂತ್ಯ ಹಾಡಿದ ರಾಜ್ ಬಿ ಶೆಟ್ಟಿ: ವಿವಾದ ಮಾಡೋದು ನಮಗೂ ನೋವು ತರುತ್ತೆ ಎಂದು ಕ್ಷಮೆಯಾಚಿಸಿದ ನಟ -ಕಂಟೆಂಟ್ ಇಲ್ಲ ಅಂತ ಟೀಕಿಸಿದವರಿಗೆ ಪ್ರೀಮಿಯರ್ ಶೋ ಮೂಲಕವೇ ಉತ್ತರ

by Shwetha
July 19, 2026
0

ನಟ ಪ್ರಜ್ವಲ್ ದೇವರಾಜ್ ಮತ್ತು ನಿರ್ದೇಶಕ ಗುರುದತ್ ಗಾಣಿಗ ನಡುವಿನ ಸಂಭಾವನೆ ಹಾಗೂ ಡಬ್ಬಿಂಗ್ ವಿವಾದದಿಂದ ಸದ್ದು ಮಾಡುತ್ತಿದ್ದ ಕರಾವಳಿ ಚಿತ್ರದ ಕುರಿತು ನಟ ರಾಜ್ ಬಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram