ಟಾಲಿವುಡ್ ನಲ್ಲಿಯೇ ನೆಲೆ ನಿಲ್ಲಲಿದ್ದಾರಾ ಪ್ರಶಾಂತ್ ನೀಲ್..?
ಪ್ರಶಾಂತ್ ನೀಲ್..! ಸದ್ಯ ಭಾರತೀಯ ಚಿತ್ರರಂಗದ ಟಾಕ್ ಆಫ್ ದಿ ಟೌನ್. ಕೇವಲ ಒಂದೇ ಒಂದು ಸಿನಿಮಾ ಮೂಲಕ ಇಂಡಿಯನ್ ಸಿನಿಮಾ ಇಂಡಸ್ಟ್ರೀಯನ್ನ ಶೇಕ್ ಮಾಡಿದ ರಣಬೇಟೆಗಾರ. ಉಗ್ರಂ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗಟ್ಟಿಯಾಗಿ ಘರ್ಜಿಸಿದ್ದ ಪ್ರಶಾಂತ್, ಕೆಜಿಎಫ್ ಸಿನಿಮಾ ಮೂಲಕ ಭಾರತೀಯ ಸಿನಿಮಾ ರಂಗವೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ್ರು.
ಅಲ್ಲದೆ ಪ್ರಶಾಂತ್ ನೀಲ್ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಹುಟ್ಟಿಕೊಂಡಿತ್ತು. ಕೇವಲ ಎರಡೇ ಸಿನಿಮಾ ಮೂಲಕ ಈ ಮಟ್ಟಿನ ನೇಮು.. ಫೇಮು ಗಳಿಸಿದ ಡೈರೆಕ್ಟರ್ ಯಾರಾದ್ರೂ ಇದ್ದರೇ ಅದು ಪ್ರಶಾಂತ್ ನೀಲ್ ಮಾತ್ರ. ಹೌದು..! ಪ್ರಶಾಂತ್ ನೀಲ್ ಕನ್ನಡಿಗರ ಹೆಮ್ಮೆ. ಕನ್ನಡ ಸಿನಿಮಾದ ತಾಕತ್ತನ್ನ ಇಡೀ ವಿಶ್ವಕ್ಕೆ ತೋರಿಸಿದ ಅವರ ಪ್ರತಿಭೆಗೆ ಕನ್ನಡಿಗರು ಎಂದೋ ಸಲಾಂ ಹಾಕಿದ್ದಾರೆ.
ಆದ್ರೆ ಪ್ರಶಾಂತ್ ನೀಲ್ ನ ಇತ್ತೀಚಿನ ನಡೆ ಕನ್ನಡಗರಿಗೆ ತುಸು ಬೇಸರವನ್ನುಂಟು ಮಾಡುತ್ತಿದೆ. ‘ಉಗ್ರಂ’, ‘ಕೆಜಿಎಫ್’ ಸಿನಿಮಾ ಮೂಲಕ ನಿರ್ದೇಶಕರಾಗಿ ದೊಡ್ಡ ಯಶಸ್ಸು ಗಳಿಸಿದ ಪ್ರಶಾಂತ್ ನೀಲ್, ಪ್ರಸ್ತುತ ಪ್ರಭಾಸ್ ನಟನೆಯ ‘ಸಲಾರ್’ ತೆಲುಗು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ರಾಮ್ ಚರಣ್ ತೇಜ ಸಿನಿಮಾ ನಿರ್ದೇಶಿಸುವುದು ಖಾತ್ರಿಯಾಗಿದೆ. ಇದಕ್ಕೆ ಮುನ್ನ ಜೂ ಎನ್ಟಿಆರ್ ನಟನೆಯ ಸಿನಿಮಾವನ್ನು ನಿರ್ದೇಶಿಸುವ ಮಾತಾಗಿದೆ. ಇದರ ನಡುವೆ ಮೈತ್ರಿ ಮೂವೀಸ್ಗಾಗಿ ಸಿನಿಮಾ ನಿರ್ದೇಶಿಸಿಕೊಡಲು ಒಪ್ಪಿಗೆ ನೀಡಿದ್ದಾರೆ.
ಪ್ರಶಾಂತ್ ನೀಲ್ ರ ಶೆಡ್ಯೂಲ್ ನೋಡಿದ್ರೆ ಪ್ರಶಾಂತ್ ನೀಲ್ ಸದ್ಯಕ್ಕೆ ಕನ್ನಡ ನಟರ ಜೊತೆ ಸಿನಿಮಾ ಮಾಡೋದು ದೂರ ಮಾತಾಗಿದೆ. ಸದ್ಯ ಅವರ ಶೆಡ್ಯೂಲ್ ಗಮನಿಸಿದ್ರೆ ಕನಿಷ್ಠ ಅಂದ್ರೂ ಐದಾರು ವರ್ಷ ಅವರು ತೆಲುಗಿನಲ್ಲೇ ಸಿನಿಮಾ ಮಾಡಲಿದ್ದಾರೆ. ಇದನ್ನ ನೋಡಿದ್ರೆ ಪ್ರಶಾಂತ್ ನೀಲ್ ಟಾಲಿವುಡ್ ನಲ್ಲಿಯೇ ಉಳಿಯಲಿದ್ದಾರಾ ಅನ್ನೋ ಪ್ರಶ್ನೆ ಕಾಡುತ್ತಿದೆ.