ರಾಜಕೀಯ ಮೇಲಾಟಕ್ಕಾಗಿ ಕಾಂಗ್ರೆಸ್ ಜನರ ಪ್ರಾಣದ ಜೊತೆ ಆಟ : ಪ್ರತಾಪ್ ಸಿಂಹ
ಮೈಸೂರು : ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ರಾಜಕೀಯ ಮೇಲಾಟಕ್ಕಾಗಿ ಜನರ ಪ್ರಾಣದ ಜೊತೆ ಆಟವಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ಕೆಪಿಸಿಸಿ ಅಧ್ಯಕ್ಷರಾದವರು ಸಿಎಂ ಆಗ್ತಾರೆ ಅನ್ನೊದು ಕಾಂಗ್ರೆಸ್ ಪ್ರತೀತಿ. ಈ ಬಾರಿ ಏನಾದ್ರೂ ಕಾಂಗ್ರೆಸ್ ಮೇಲುಗೈ ಸಾಧಿಸಿದ್ರೆ ಡಿ.ಕೆ.ಶಿವಕುಮಾರ್ ಸಿಎಂ ಅಂತಾರೆ. ಇದನ್ನ ತಪ್ಪಿಸೋಕೆ ಒಳಗೊಳಗೆ ಪಿತೂರಿ ನಡೆಯುತ್ತಿದೆ. ಕಳೆದ ಬಾರಿ ಇದೇ ರೀತಿ ಪಿತೂರಿ ಮಾಡಿ ಸಿದ್ದರಾಮಯ್ಯ ಪರಮೇಶ್ವರ್ ಅವರನ್ನ ಸೋಲಿಸಿದ್ರು. ಈಗ ಡಿ.ಕೆ.ಶಿವಕುಮಾರ್ ನಾನೆ ಮುಂದಿನ ಸಿಎಂ ಅಂತಾರೆ. ಸಿದ್ದರಾಮಯ್ಯ ಕೂಡಾ ನಾನೆ ಮುಖ್ಯಮಂತ್ರಿ ಅಂತಾರೆ. ಇವರಿಬ್ಬರ ಅಧಿಕಾರದ ಲಾಲಾಸಗೆ ಜನರ ಪ್ರಾಣದ ಜೊತೆ ಆಟ ಆಡ್ತಿದ್ದಾರೆ ಎಂದು ದೂರಿದರು.
ಇನ್ನು ರಾಜ್ಯದಲ್ಲಿ ಕೊರೊನಾ ಹಾಗೂ ಓಮಿಕ್ರಾನ್ ಅತಿ ವೇಗವಾಗಿ ಹರಡುತ್ತಿದೆ. ಮಕ್ಕಳಿಗೂ ಹೆಚ್ಚಾಗಿ ಸೋಂಕು ಹರಡುತ್ತಿದೆ. ರಾಜ್ಯ ಸರ್ಕಾರ ಎಚ್ಚರಿಕೆಯ ಕ್ರಮ ಕೈಗೊಂಡಿದೆ. ಶಾಲೆಗಳನ್ನ ಬಂದ್ ಮಾಡಿ ಆನ್ಲೈನ್ ಕ್ಲಾಸ್ ಆರಂಭಿಸಿದ್ದಾರೆ. ಇಷ್ಟಿದ್ರೂ ಕೂಡಾ ಕಾಂಗ್ರೆಸ್ ಬೇಜವಾಬ್ದಾರಿ ನಡೆ ತೋರುತ್ತಿದೆ. 2013 ರಿಂದ 2018 ರವರೆಗೂ ಕಾಂಗ್ರೆಸ್ ಸರ್ಕಾರ ಇದ್ದಾಗ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಏನ್ಮಾಡ್ತಿದ್ರು. ಡಿ.ಕೆ.ಶಿವಕುಮಾರ್ ಪವರ್ ಮಿನಿಸ್ಟರ್ ಆಗಿದ್ದಾಗ ಇದನ್ನ ಜಲವಿದ್ಯುತ್ ಯೋಜನೆ ಮಾಡಬಹುದಿತ್ತು. ಆಗ ಮಾತನಾಡದ ಇವರು ಈಗ ನಾಟಕ ಆಡ್ತಿದ್ದಾರೆ. ಅಧಿಕಾರಕ್ಕೋಸ್ಕರ ಈ ರೀತಿಯ ಮಾರ್ಗ ಹಿಡಿದಿದ್ದೀರಿ. ಇಷ್ಟು ವರ್ಷ ಅಲ್ಲೇ ಹುಟ್ಟಿಬೆಳಿದಿದ್ರೂ ನೆನಪಾಗದ ಮೇಕೆದಾಟು ಈ ನೆನಪಾಗಿದ್ಯಾ ಎಂದು ಪ್ರಶ್ನಿಸಿದರು.