ಕರಾವಳಿಯ ಬಾಳೆ ಕಾಯಿ ಪುಡಿಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ
ಕರಾವಳಿ ಹಾಗೂ ಮಲೆನಾಡಿನಲ್ಲಿ ಪ್ರದೇಶಗಳಲ್ಲಿ ಬಾಳೆ ಕಾಯಿ ಹುಡಿ (ಬಾಕಾಹು – ಹಸಿರು ಬಾಳೆಹಣ್ಣುಗಳ ಪುಡಿ) ಕ್ರಾಂತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ಸೂಚಿಸಿದ್ದಾರೆ. ಜುಲೈ 25 ರ ಭಾನುವಾರ ಪ್ರಸಾರವಾದ ತನ್ನ ಮನ್ ಕಿ ಬಾತ್ ನಲ್ಲಿ ಅವರು ಬಾಕಾಹು ಮತ್ತು ಈ ಕ್ರಾಂತಿಯನ್ನು ಬಳಸಿಕೊಳ್ಳುವ ಮೂಲಕ ಮಹಿಳೆಯರು ತಮ್ಮ ಆದಾಯವನ್ನು ಹೇಗೆ ಹೆಚ್ಚಿಸಿಕೊಂಡಿದ್ದಾರೆ ಎಂಬುದರ ಬಗ್ಗೆ ಪ್ರಸ್ತಾಪಿಸಿದ್ದಾರೆ.
ದೋಸೆ ಮತ್ತು ಗುಲಾಬ್ ಜಾಮೂನ್ ತಯಾರಿಸಲು ಬಾಕಾಹು ಬಳಸಲಾಗುತ್ತದೆ ಎಂಬ ಅಂಶವು ಶ್ಲಾಘನೀಯ ಎಂದು ಅವರು ಹೇಳಿದ್ದಾರೆ. ಕರಾವಳಿ ಹಾಗೂ ಮಲೆನಾಡಿನಲ್ಲಿ ಈ ಹುಡಿಯನ್ನು ಗೋಧಿ ಹಾಗೂ ಮೈದಾಗೆ ಬದಲಾಗಿಯೂ ಬಳಸಲಾಗುತ್ತಿದ್ದು, ಇದರಿಂದ ವೈವಿಧ್ಯ ಬಗೆಯ ಖಾದ್ಯಗಳನ್ನು ತಯಾರಿಸಬಹುದಾಗಿದೆ.
ಕೊರೋನಾ ಸೋಂಕಿನ ಅವಧಿಯಲ್ಲಿ ಈ ಬೆಳವಣಿಗೆ ನಡೆದಿದ್ದು, ಮಹಿಳೆಯರು ಬಾಕಾಹುದಿಂದ ದೋಸೆ ಮತ್ತು ಸಿಹಿತಿಂಡಿಗಳನ್ನು ತಯಾರಿಸಿದ್ದಲ್ಲದೆ, ಚಿತ್ರಗಳನ್ನು ಸಾಮಾಜಿಕ ವೆಬ್ಸೈಟ್ಗಳಲ್ಲಿ ಅಪ್ಲೋಡ್ ಮಾಡಿ ಹಂಚಿಕೊಂಡಿದ್ದಾರೆ. ಈ ಕಾರಣದಿಂದಾಗಿ, ಉತ್ಪನ್ನದ ಬೇಡಿಕೆ ಹೆಚ್ಚಾಗಿದೆ ಎಂದು ಮೋದಿ ಗಮನಿಸಿದ್ದು, ಮಹಿಳೆಯರು ಈ ಕ್ರಾಂತಿಯ ಮುಂಚೂಣಿಯಲ್ಲಿದ್ದಾರೆ ಮತ್ತು ಇತರರು ಇದೇ ರೀತಿಯ ಪ್ರಯೋಗಗಳನ್ನು ಮಾಡಲು ಅವರು ಸ್ಫೂರ್ತಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಟಿಸಿಎಸ್ – 200 ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳಲು ನಿರ್ಧಾರ#TCSHiring #News https://t.co/N40liGM5XZ
— Saaksha TV (@SaakshaTv) July 24, 2021
ತವಾ ಪಲಾವ್#Saakshatv #cookingrecipe #tavapulav https://t.co/MTv29AgXLe
— Saaksha TV (@SaakshaTv) July 24, 2021
ನೈಸರ್ಗಿಕ ವಿಧಾನಗಳಿಂದ ಮಧುಮೇಹ ಸಮಸ್ಯೆ ನಿಯಂತ್ರಣದಲ್ಲಿಡುವುದು ಹೇಗೆ?#Saakshatv #healthtips https://t.co/VX1HEEamRT
— Saaksha TV (@SaakshaTv) July 24, 2021
ಬಾಳೆಕಾಯಿ ಮಸಾಲಾ ಪರೋಟ#Saakshatvcookingrecipe https://t.co/qLse8WK2n1
— Saaksha TV (@SaakshaTv) July 13, 2021
#PrimeMinister #Bakahu