ಲಸಿಕೆ ಕೊರತೆಯಲ್ಲಿ ಲಸಿಕೆ ಉತ್ಸವ ಹೇಗೆ : ಪ್ರಿಯಾಂಕ್ ಖರ್ಗೆ
ಕಲಬುರಗಿ : ಲಸಿಕೆ ಕೊರತೆಯಿಟ್ಟುಕೊಂಡು ಸರ್ಕಾರ ಲಸಿಕೆ ಉತ್ಸವ ಮಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಆರು ಕೋಟಿ ಲಸಿಕೆಗಳನ್ನ ಕೇಂದ್ರ ಸರ್ಕಾರ ಬೇರೆ ದೇಶಗಳಿಗೆ ರಫ್ತು ಮಾಡಿದೆ
ಆರು ಕೋಟಿ ಲಸಿಕೆ ರಫ್ತು ಮಾಡ್ತಿದ್ದರು ಸಹ ದೇಶದಲ್ಲಿ ಲಸಿಕೆ ಯಾಕೆ ಕಡಿಮೆ ಬೀಳುತ್ತಿದೆ.
ಲಸಿಕೆ ಕೊರತೆ ಇಟ್ಟುಕೊಂಡು ಸರ್ಕಾರ ಲಸಿಕೆ ಉತ್ಸವ ಮಾಡುತ್ತಿದೆ ಎಂದು ಕಿಡಿಕಾರಿದರು.
ಇದೇ ವೇಳೆ ಕಳೆದೊಂದು ವರ್ಷದಲ್ಲಿ ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ಪ್ರಧಾನಿ ಮೋದಿ ನವಿಲುಗಳಿಗೆ ಕಾಳು ಹಾಕ್ತಾರೆ, ಅಮಿತ್ಶಾ ಶಾಸಕರನ್ನ ಖರೀಧಿ ಮಾಡ್ತಾರೆ, ಇತ್ತ ರಾಜ್ಯ ಸರ್ಕಾರ ಸಿಡಿ ಕೇಸ್ನಲ್ಲಿ ಬ್ಯುಸಿ ಆಗಿದೆ ಎಂದು ವ್ಯಂಗ್ಯವಾಡಿದರು.
ಇನ್ನು ಕಲಬುರಗಿಯಲ್ಲಿ ಸೋಂಕಿತರ ಡೇಟಾ ಮುಚ್ಚಿಡಲಾಗುತ್ತಿದೆ. ಕಳೆದ ವರ್ಷ ಮಾಡಿದ ತಪ್ಪುಗಳನ್ನೆ ಸರ್ಕಾರ ಮತ್ತೆ ಮಾಡ್ತಿದೆ. ನಮ್ಮ ಜಿಲ್ಲೆಯಲ್ಲಿ ರಾಮನದೊಂದು ಲೆಕ್ಕ, ಕೃಷ್ಣನದೊಂದು ಲೆಕ್ಕ ಎಂಬಂತಾಗಿದೆ ಎಂದು ಆರೋಪಿಸಿದರು.