ವಿನಯ್ ರಾಜಕುಮಾರ್ ನಟನೆಯ ಗ್ರಾಮಾಯಣ ಸಿನಿಮಾದ ನಿರ್ಮಾಪಕ NLN.ಮೂರ್ತಿ ಅವರು ಇಂದು ವಿಧಿವಶರಾಗಿದ್ದಾರೆ. ಇವರು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಬಿ ಜಿ ಎಸ್ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅವರು ಅಲ್ಲಿಯೇ ಕೊನೆ ಉಸಿರೆಳೆದಿದ್ದಾರೆ.
ಮೂರ್ತಿ ಅವರು ಶರಣ್ ಅವರ ಜೊತೆ ಸಿನಿಮಾ ಮಾಡುವ ಯೋಜನೆ ಇತ್ತು, ಎಸ್ ಭಗತ್ ರಾಜ್ ಚಿತ್ರ ಕಥೆ ಬರೆಸಿದ್ದರು, ಶರಣ್ ಅವರಿಗೆ ಕಥೆ ಹೇಳಿಯೂ ಆಗಿತ್ತು, ಸಿನಿಮಾ ಸೆಟ್ಟೇರುವ ಮುನ್ನವೇ ನಿಧನವಾಗಿದ್ದಾರೆ. ಗುರುವಾರವಷ್ಟೆ ಮೂರ್ತಿ ಅವರ ತಾಯಿ ನಿಧನವಾಗಿದ್ದರು.