ಬೆಂಗಳೂರು : ಚನ್ನರಾಯಪಟ್ಟಣದ ಪಿಎಸ್ ಐ ಕಿರಣ್ ಕುಮಾರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಚನ್ನರಾಯಪಟ್ಟಣದ ಪಿಎಸ್ಐ ಕಿರಣ್ ಕುಮಾರ್ ಅಧಿಕಾರಿಗಳು ಕಿರುಕುಳ ನೀಡಿ, ಹೆದರಿಸಿದ್ದರಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಯಾರು ಕಾಲ್ ಮಾಡಿದ್ರು.? ಎಷ್ಟು ಹೊತ್ತಲ್ಲಿ ಕಾಲ್ ಮಾಡಿದ್ರು ಎಂಬ ಬಗ್ಗೆ ತಿಳಿಯ ಬೇಕಾದ್ರೆ.. ತನಿಖೆಯಾಗಬೇಕು. ಪಿಎಸ್ಐ ಕಿರಣ್ ಕುಮಾರ್ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.