ನಮ್ಮನ್ನೆಲ್ಲಾ ಅಗಲಿದ ಕನ್ನಡದ “ರಾಜಕುಮಾರ್” ಪುನೀತ್ ರಾಜ್ ಕುಮಾರ್ ಅವರಿಗೆ ಗೌರವಾರ್ಥ ಇಂದು ಅರಮನೆ ಮೈದಾನದಲ್ಲಿ ನಮನ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ.. ಕಾರ್ಯಕ್ರಮದಲ್ಲಿ ಗಣ್ಯಾತಿ ಗಣ್ಯರು ಭಾಗಿಯಾಗಿದ್ದಾರೆ.
ಕುರುನಾಡಿನ ‘ಯುವರತ್ನ’ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ “ಕರ್ನಾಟಕ ರತ್ನ” ಪ್ರಶಸ್ತಿಯನ್ನು ಸಿಎಂ ಬಸವರಾಜಬೊಮ್ಮಯಿ ಅವರು ಈ ವೇಳೆ ಘೋಷಣೆ ಮಾಡಿದ್ರು..
ಇದೇ ವೇಳೆ ಮಾತನಾಡಿದ ಸಿಎಂ, ಸೂರ್ಯ ಚಂದ್ರ ಇರುವ ತನಕ ಪುನೀತ್ ರಾಜ್ ಕುಮಾರ್ ಕನ್ನಡದ ರತ್ನನಾಗಿರುತ್ತಾರೆ..
ನಾನು ಮುತ್ತಿಟ್ಟಿದ್ದನ್ನು ಅನೇಕರು ನಾನಾ ರೀತಿಯಲ್ಲಿ ಬಿಂಬಿಸಿದ್ರು.. ನಾನು ತಲೆ ಕೆಡಿಸಿಕೊಳ್ಳಲ್ಲ.. ಅದು ನನ್ನ ಹೃದಯದಿಂದ ಬಂದಿದ್ದು ಎಂದು ಭಾವುಕರಾಗಿ ನುಡಿದ್ರು..