ಅಶೋಕ್ ಅವರನ್ನು ಅದೇನೋ ಸಾಮ್ರಾಟ್ ಅಂತಾ ಕರೀತಾರಂತೆ : ಡಿ.ಕೆ.ಸುರೇಶ್ DK Suresh saaksha tv
ಬೆಂಗಳೂರು : ಅಶೋಕ್ ಅವರನ್ನು ಅದೇನೋ ಸಾಮ್ರಾಟ್ ಅಂತಾ ಕರೀತಾರಂತೆ, ನಾನು ಯಾವತ್ತೂ ಹಾಗೇ ಕರೆದಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಡಿ.ಕೆ.ಸುರೇಶ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಡಿ.ಕೆ.ಸುರೇಶ್, ಇಂದು ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಬಿಜೆಪಿಯ ಕಾರ್ಯಕರ್ತರಿಗೆ ಅಭಿನಂದಿಸುವೆ ಎಂದು ಟಾಂಗ್ ನೀಡಿದರು.
ನಿನ್ನೆಯ ಸಭೆಯಲ್ಲಿ ಸ್ವತಃ ಮುಖ್ಯಮಂತ್ರಿಗಳೇ ಅಶ್ವಥ್ ನಾರಾಯಣ ಅವರಿಗೆ ನೀವು ಮಾತನಾಡಿದ್ದು, ಸರಿಯಲ್ಲ ಅಂತಾ ಹೇಳಿದ್ದರು. ಆದ್ರೂ ರಾಜ್ಯದ ಯುವಕರನ್ನು ಅವಮಾನಿಸುವ ಕೆಲಸವನ್ನು ಸಚಿವರು ಮಾಡಿದ್ದಾರೆ.
ಗಂಡಸಾದ್ರೆ ಬನ್ನಿ ಅಂತಾ ನನಗೆ ಸವಾಲು ಹಾಕಿದರು. ಅದು ನನಗೆ ಹಾಕಿದ ಸವಾಲಲ್ಲ. ರಾಮನಗರದ ಜನರಿಗೆ ಹಾಕಿದ ಸವಾಲು.
ಕೆಂಪೇಗೌಡರು, ಅಂಬೇಡ್ಕರ್ಗೆ ಮಾಡಿದ ಅವಮಾನ. ಡಿ.ಕೆ. ಸುರೇಶ್ ಇಲ್ಲಿ ನೆಪ ಮಾತ್ರ, ರಾಮನಗರದ ಜನರ ಸ್ವಾಭಿಮಾನ ಕೆಣಕುವ ಕೆಲಸವನ್ನು ಅವರು ಮಾಡಿದ್ದಾರೆ ಎಂದು ಸುರೇಶ್ ಕಿಡಿಕಾರಿದರು.
ಇದೇ ವೇಳೆ ಗಂಡಸುತನದ ಮಾತು ಯಾಕೆ ಬರುತ್ತೆ ಎಂದು ಪ್ರಶ್ನಿಸಿದ ಡಿ.ಕೆ.ಸುರೇಶ್, ಬಿಜೆಪಿ ರಾಜ್ಯಾಧ್ಯಕ್ಷರೇ ಗಂಡಸುತನದ ಬಗ್ಗೆ ಮಾತನಾಡುವುದು ನಿಮ್ಮ ಸಂಸ್ಕೃತಿಯೇ? ಅಶ್ವತ್ಥ ನಾರಾಯಣ ಅವರ ಸ್ಟೈಲ್, ಧಿಮಾಕನ್ನ ಅಶೋಕ್ ಅವರಿಗೆ ತೋರಿಸಿ. ಅಶೋಕ್ ನೋಡಲಿ. ಅಶೋಕ್ ಅವರನ್ನು ಅದೇನೋ ಸಾಮ್ರಾಟ್ ಅಂತಾ ಕರೀತಾರಂತೆ. ನಾನು ಯಾವತ್ತೂ ಹಾಗೇ ಕರೆದಿಲ್ಲ ಎಂದು ಕುಟುಕಿದರು.