R Ashok
ಬೆಂಗಳೂರು: ಯಡಿಯೂರಪ್ಪನವರು ಹೆಚ್ಚು ದಿನಗಳ ಕಾಲ ಅಧಿಕಾರದಲ್ಲಿರುವುದಿಲ್ಲ ಎಂಬ ಯತ್ನಾಳ್ ಹೇಳಿಕೆಗೆ ಕಂದಾಯ ಸಚಿವ ಆರ್ ಅಶೋಕ್ ಅವರು ತಿರುಗೇಟು ನೀಡಿದ್ದಾರೆ. ನಗರದಲ್ಲಿ ಮಾತನಾಡಿರುವ ಅವರು ‘ಮುಂದಿನ ಮೂರು ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಆದ್ದರಿಂದ ಖಾಲಿ ಇಲ್ಲದ ಕುರ್ಚಿಗೆ ಟವೆಲ್ಹಾಕಿ ವ್ಯರ್ಥ ಮಾಡುವುದು ಸರಿಯಲ್ಲ’ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ವಿಧಾನಸಭೆ ಚುನಾವಣೆಯನ್ನು ಯಡಿಯೂರಪ್ಪ ನೇತೃತ್ವದಲ್ಲೇ ಗೆದ್ದಿದ್ದೇವೆ. ಅವರ ನೇತೃತ್ವದಲ್ಲೇ ಮುಂದಿನ ಮೂರು ವರ್ಷ ಸರ್ಕಾರ ನಡೆಯುತ್ತದೆ. ಯತ್ನಾಳ ಅವರು ಖಾಲಿ ಇಲ್ಲದ ಸೀಟಿಗೆ ಟವಲ್ ಹಾಕಿ ಕಾಯುವುದು ಸರಿಯಲ್ಲ . ಇದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ಹೇಳಿದರು.
ಒಟ್ಟಾರೆ ಬಿಜೆಪಿ ನಾಯಕರ ವಿರುದ್ಧವೇ ಕಿಡಿಕಾರಿ ಆಗಾಗ ವಿವಾದಗಳನ್ನ ಮೈಮೇಲೆ ಎಳೆದುಕೊಳ್ಳುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಈ ಬಾರಿಯೂ ಅಂತಹದ್ದೇ ಹೇಳಿಕೆ ನೀಡಿ ಪಕ್ಷದವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಯಡಿಯೂರಪ್ಪನವರು ಹೆಚ್ಚು ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ. ಹೈPಮಾಂಡ್ ಗೂ ಅವರು ಸಾಕಾಗಿದ್ದಾರೆ. ಮುಂದೆ ಉತ್ತರ ಕರ್ನಾಟಕ ಭಾಗದವರೇ ಸಿಎಂ ಆಗಲಿದ್ದಾರೆ ಎಂದು ಹೇಳಿಕೆ ನೀಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಪ್ರತಿರೋಧ , ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದೆ.
ಪ್ರವಾಹ ಪೀಡಿತ ಕಲಬುರಗಿ, ವಿಜಯಪುರದಲ್ಲಿ ಸಿಎಂ ಬಿಎಸ್ವೈ ವೈಮಾನಿಕ ಸಮೀಕ್ಷೆ..!
ಆದರೂ ಯತ್ನಾಳ ಅವರು ತಮ್ಮ ಚಾಳಿಯನ್ನ ಮುಂದುವರೆಸಿದ್ದು, ಸಮಾಜಿಕ ಜಾಲತಾಣಗಳಲ್ಲಿ ಟೀಕಾಪ್ರಹಾರವನ್ನ ಮುಮದುವರೆಸಿದ್ದಾರೆ. ಇಂದು ತಮ್ಮ ಬೆಂಬಲಿಗರು ಹಾಕಿದ್ದ ಪೋಸ್ಟ್ ಶೇರ್ ಮನಾಡಿ ಮತ್ತಷ್ಟು ವಿವಾದಕ್ಕೆ ಗುರಿಯಾಗಿದ್ದಾರೆ. ಅಲ್ಲದೇ ನಾನು ಯಾರ ಕಯಕಾಲು ಹಿಡಿದು ಅಧಿಕಾರ ಹಿಡಿದವನಲ್ಲ ಎಂದು ಪರೋಕ್ಷವಾಗಿ ರೆಣುಕಾಚಾರ್ಯ ಹಾಗೂ ಆರ್ ಅಶೋಕ್ ಗೂ ಟಾಂಗ್ಕೊಟ್ಟಿದ್ದಾರೆ.
ವಿಧಾನ ಸೌಧ, ವಿಕಾಸ ಸೌಧ, ಎಂಎಸ್ ಕಟ್ಟಡ ಆವರಣ ಸ್ವಚ್ಛವಾಗಿಡುವಂತೆ ನೌಕರರಿಗೆ ಡಿಪಿಎಆರ್ ಸುತ್ತೋಲೆ
R Ashok
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel