ತುಮಕೂರು : ತುಮಕೂರಿನ ಮಾಯಸಂದ್ರಕ್ಕೆ ಕಂದಾಯ ಸಚಿವ ಆರ್ ಅಶೋಕ್ ಅವರು ತೆರಳಿದ್ದರು.. ಅಶೋಕ್ ಅವರಿಗೆ ಜಿಲ್ಲಾಡಳಿತ ಭರ್ಜರಿ ಸ್ವಾಗತ ಕೋರಿದೆ..
ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್ ಆಶೋಕ್ ಭಾಗಿಯಾಗ್ತಿದ್ದಾರೆ.. ಎರಡು ದಿನ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರದಲ್ಲಿ ಆರ್ ಆಶೋಕ್ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ….
ಗ್ರಾಮದಲ್ಲೇ ಇದ್ದು ಗ್ರಾಮಸ್ಥರ ಸಮಸ್ಯೆಗಳನ್ನ ಆಲಿಸಲಿದ್ದಾರೆ.. ಆದಷ್ಟು ಸಮಸ್ಯೆಗಳನ್ನ ಸ್ಥಳದಲ್ಲೇ ಪರಿಹರಿಸುವ ಮೂಲಕ ಜನರ ಮನೆಬಾಗಿಲಿಗೆ ಕಂದಾಯ ಸೇವೆ ಒದಗಿಸಲಿರುವ ಕಾರ್ಯಕ್ರಮ ಇದಾಗಿದೆ.. ರಾಜ್ಯಸಭಾ ಸದಸ್ಯ ಜಗ್ಗೇಶ್,ತುರುವೇಕೆರೆ ಶಾಸಕ ಮಸಾಲ ಜಯರಾಂ ಸೇರಿ ಅನೇಕರು ಭಾಗಿಯಾಗಲಿದ್ದಾರೆ..