Sunday, April 2, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರಾಹುಲ್ ದ್ರಾವಿಡ್ ಅನ್ನೋ ಕ್ರಿಕೆಟ್ ಮಹಾಗ್ರಂಥದ ಒಂದು ಸವಿಯಾದ ಕಥೆ..!

admin by admin
June 12, 2021
in Newsbeat, Sports, ಕ್ರೀಡೆ
rahul dravid team india saakshatv
Share on FacebookShare on TwitterShare on WhatsappShare on Telegram

ರಾಹುಲ್ ದ್ರಾವಿಡ್ ಅನ್ನೋ ಕ್ರಿಕೆಟ್ ಮಹಾಗ್ರಂಥದ ಒಂದು ಸವಿಯಾದ ಕಥೆ..!

rahul dravid team india saakshatvರಾಹುಲ್ ದ್ರಾವಿಡ್. ವಿಶ್ವ ಕ್ರಿಕೆಟ್ ನ ಬುದ್ಧ. ನೂಲಿನಲ್ಲಿ ಗೆರೆ ಎಳೆದಂತೆ ಚೆಂಡನ್ನು ಮೈದಾನದ ಮೂಲೆ ಮೂಲೆಗೆ ಟಚ್ ಮಾಡುವ ಕಲಾತ್ಮಕ ಬ್ಯಾಟ್ಸ್ ಮೆನ್ . ಬೌಲರ್ ಗಳು ತಾಳ್ಮೆ ಕಳೆದುಕೊಳ್ಳುವಂತೆ ಕಾಡುವ ಹಾಗೂ ವಿಕೆಟ್ ಪಡೆಯಲು ಎದುರಾಳಿ ತಂಡ ಬೇಡುವಂತೆ ಮಾಡುವ ಜಾಯಮಾನ ನಮ್ಮ ಜ್ಯಾಮಿಯದ್ದು. ಇಂತಹ ಸ್ಟೈಲೀಸ್ ಪ್ಲೇಯರ್ ನ ಆಟ ಈಗ ನೆನಪು ಮಾತ್ರ. ಜಂಟಲ್ ಮೆನ್ ಗೇಮ್ ನ ಜಂಟಲ್ ಮೆನ್ ಆಟಗಾರನನ್ನು ಒಂದು ಕ್ಷಣ ನೆನಪಿಸಿಕೊಂಡಾಗ ನಮಗೆ ಗೊತ್ತಿಲ್ಲದೆ ನಮ್ಮ ಕಣ್ಣ ಮುಂದೆ ಅವರ ಬ್ಯಾಟಿಂಗ್ ವೈಯಾರಗಳು ಹಾದು ಹೋಗುತ್ತವೆ. ಅಂತಹ ಜೀನಿಯಸ್ ಕ್ರಿಕೆಟಿಗನ ಕ್ರಿಕೆಟ್ ಬದುಕೇ ಒಂದು ಮಹಾನ್ ಗ್ರಂಥ.
ಹೌದು, ರಾಹುಲ್ ದ್ರಾವಿಡ್ ಕ್ರಿಕೆಟ್ ಬದುಕಿನ ಮಹಾನ್ ಗ್ರಂಥದ ಒಂದೊಂದು ಸವಿ ಸವಿ ನೆನಪುಗಳ ಅಧ್ಯಾಯಗಳು ಅನಾವರಣಗೊಂಡಾಗ ಅಚ್ಚರಿಯಾಗುತ್ತೆ. ತಪಸ್ಸು ಮಾಡುವ ಮುನಿಯಂತೆ ರಾಹುಲ್ ದ್ರಾವಿಡ್ ಕ್ರಿಕೆಟ್ ಅಟವನ್ನು ಒಲಿಸಿಕೊಳ್ಳಲು ತಪಸ್ಸು ಮಾಡಿದ್ರು. ಊಟ, ನಿದ್ದೆ, ಕುಟುಂಬ ಹೀಗೆ ಎಲ್ಲವನ್ನೂ ಬಿಟ್ಟು ದ್ರಾವಿಡ್ ಕ್ರಿಕೆಟ್ ಗಾಗಿ ತನ್ನನ್ನು ತಾನು ಸಮರ್ಪಿಸಿಕೊಂಡಿದ್ರು. ಅದರ ಪರಿಣಾಮವೇ ರಾಹುಲ್ rahul dravid team india saakshatvದ್ರಾವಿಡ್ ವಿಶ್ವ ಕ್ರಿಕೆಟ್ ನಲ್ಲಿ ಎಂದೂ ಮರೆಯದ ಕ್ರಿಕೆಟಿಗನಾದ್ರು. ಹಾಗಿದ್ರೆ ದ್ರಾವಿಡ್ ಯಶಸ್ಸಿನ ಗುಟ್ಟು ಏನು ? ಈ ಪ್ರಶ್ನೆಗೆ ಉತ್ತರ ತುಂಬಾನೇ ಸರಳ. ಜವಾಬ್ದಾರಿ ಮತ್ತು ಕ್ರಿಕೆಟ್ ಮೇಲಿನ ಅಪಾರ ಪ್ರೀತಿ. ಈ ಎರಡು ಅಂಶಗಳು ದ್ರಾವಿಡ್ ಬದುಕಿನಲ್ಲಿ ಯಾವ ರೀತಿ ಪರಿಣಾಮ ಬೀರಿದ್ದವು ಎಂಬುದರ ಬಗ್ಗೆ ಒಂದು ರೋಚಕ ಹಾಗೂ ನೈಜ ಕಥೆಯೇ ಇದೆ.
ಇದು ಸುಮಾರು 28 -ವರ್ಷಗಳ ಹಿಂದೆ ನಡೆದ ಸತ್ಯ ಕಥೆ. ರಾಹುಲ್ ದ್ರಾವಿಡ್ ದಿನದ ಇಪ್ಪತ್ತಾನಾಲ್ಕು ಗಂಟೆಯೂ ಕ್ರಿಕೆಟ್ ನ ಬಗ್ಗೆಯೇ ಯೋಚನೆ ಮಾಡುತ್ತಿದ್ದರು. ಮನೆ, ಕಾಲೇಜ್ ಬಿಟ್ಟು ಹೆಚ್ಚಿನ ಸಮಯವನ್ನು ಬರೀ ಮೈದಾನದಲ್ಲೇ ಕಾಲ ಕಳೆಯುತ್ತಿದ್ದರು. ಹಾಗಂತ ಶಿಕ್ಷಣಕ್ಕೆ ಆದ್ಯತೆ ಕೊಡುತ್ತಿರಲಿಲ್ಲ ಅಂತ ಅಂದುಕೊಳ್ಳಬೇಡಿ. ಆದ್ರೆ ನಿರಂತರ ಅಭ್ಯಾಸ ಹಾಗೂ ಪಂದ್ಯಗಳು ಇರುವುದರಿಂದ ಕಾಲೇಜ್ ಗೆ ಚಕ್ಕರ್ ಹೊಡೆಯುತ್ತಿದ್ದರು. ಇನ್ನೇನು ಪರೀಕ್ಷೆ ಹತ್ತಿರÀ ಬಂದಾಗ ಮಾತ್ರ ದ್ರಾವಿಡ್ ಕಾಲೇಜ್ ನಲ್ಲಿರುತ್ತಿದ್ದರು.
rahul dravid team india saakshatvಹಾಗೇ ಒಂದು ದಿನ ಸೇಂಟ್ ಜೊಸೇಫ್ ಕಾಲೇಜ್ ಗೆ ರಾಹುಲ್ ದ್ರಾವಿಡ್ ಎಂಟ್ರಿಯಾದ್ರು. ಯಾರಲ್ಲೂ ಮಾತನಾಡದೇ ಸೀದಾ ಬಂದು ಕ್ಲಾಸ್ ನಲ್ಲಿ ಕುಳಿತುಕೊಂಡು ಗಂಭೀರವಾಗಿ ನೋಟ್ಸ್ ಗಳನ್ನು ಬರೆಯುತ್ತಿದ್ದರು. ದ್ರಾವಿಡ್ ಅವತಾರವನ್ನು ನೋಡಿದ ಕಾಲೇಜ್ ಹುಡುಗರು ಹಾಗೂ ಗೆಳೆಯರು ಜೋರಾಗಿ ನಗುತ್ತಿದ್ದರು. ಎಷ್ಟೇ ನಕ್ಕಿದ್ರೂ ಎಷ್ಟೇ ಕಮೆಂಟ್ ಮಾಡಿದ್ರೂ ದ್ರಾವಿಡ್ ಮಾತ್ರ ತಲೆನೇ ಕೆಡಿಸಿಕೊಂಡಿರಲಿಲ್ಲ. ಯಾಕಂದ್ರೆ ದ್ರಾವಿಡ್ ಮನದಲ್ಲಿದ್ದದ್ದು ಎರಡೇ ವಿಚಾರಗಳು. ಒಂದು ಜವಾಬ್ದಾರಿ. ಎರಡನೇಯದ್ದು ಕ್ರಿಕೆಟ್ ಮೇಲಿನ ಪ್ರೀತಿ. ಆದ್ರೂ ಗೆಳೆಯರಿಗೆ ಒಂದು ರೀತಿಯ ಕುತೂಹಲ. ಕ್ರಿಕೆಟ್ ಮೇಲಿನ ಅತೀಯಾದ ಪ್ರೀತಿಯಿಂದ ಇವನೇನು ಹುಚ್ಚಾನಾಗಿದ್ದಾನೋ ಎನ್ನುವ ಆತಂಕ. ಹಾಗಂತ ಕೇಳುವ ಧೈರ್ಯ ಹಾಗೂ ಮನಸ್ಸು ಯಾರು ಮಾಡಲಿಲ್ಲ. ಯಾಕಂದ್ರೆ ಸೌಮ್ಯ ಸ್ವಭಾವದ ಹುಡುಗ ಎಲ್ಲಿ ಬೇಜಾರು ಮಾಡ್ಕೊಳ್ಳುತ್ತಾನೋ ಅನ್ನೋ ಭಾವನೆ ದ್ರಾವಿಡ್ ಗೆಳೆಯರದ್ದು.
ಅಷ್ಟಕ್ಕೂ ದ್ರಾವಿಡ್ ಮೇಲೆ ಇಷ್ಟೆಲ್ಲಾ ಅನುಮಾನ ಮೂಡಲು ಕಾರಣ ಏನು ಗೊತ್ತಾ.. ಅದುವೇ ಒಂದು ಗ್ಲೌಸ್ನ್ ಕಥೆ. ರಾಹುಲ್ ದ್ರಾವಿಡ್ ನ ಗ್ಲೌಸ್ ನ ಕಥೆ. ಇದನ್ನು ಕೇಳಿದ್ರೆ ನೀವು ನಕ್ಕು ಬಿಡ್ತೀರಾ. ಕ್ಲಾಸ್ ನಲ್ಲಿ ಗಂಭೀರವಾಗಿ ನೋಟ್ಸ್ ಬರೆಯುತ್ತಿದ್ದ ರಾಹುಲ್ ದ್ರಾವಿಡ್ ಎರಡು ಕೈಗಳಿಗೆ ಗ್ಲೌಸ್ ಹಾಕೊಂಡಿದ್ದರು. ಅಷ್ಟೇನಾ ಅಂತ ಅಂದುಕೊಳ್ಳಬೇಡಿ. ಗ್ಲೌಸ್ ಹಾಕೊಂಡೇ ನೋಟ್ಸ್ ಬರೆಯುತ್ತಿದ್ದರು. ಇದನ್ನು ನೋಡಿದ್ದ ಕ್ಲಾಸ್ ಹುಡುಗರು ಬಿಡಿ ಯಾರು ಬೇಕಾದ್ರೂ ಒಂದು ಕ್ಷಣ ಜೋರಾಗಿ ನಗಬಹುದು.
rahul dravid team india saakshatvಆದ್ರೂ ದ್ರಾವಿಡ್ ಗೆಳೆಯರಿಗೆ ಏನೋ ಒಂಥರಾ ಕುತೂಹಲ. ಕೊನೆಗೂ ದ್ರಾವಿಡ್ ಬಳಿ ಗ್ಲ್ಯಾಸ್ ವಿಚಾರವಾಗಿ ಕೇಳಿಯೇ ಬಿಡ್ತಾರೆ. ಆದ್ರೆ ರಾಹುಲ್ ಮಾತ್ರ ಉತ್ತರ ನೀಡುವುದಿಲ್ಲ. ಆಗ ರಾಹುಲ್ ದ್ರಾವಿಡ್ ಅವರ ಆಪ್ತ ಸ್ನೇಹಿತ ಆದರ್ಶ್ ಬಂದು, ಏನೋ ಅನುಪಮಾಳನ್ನು ಇಂಪ್ರೇಸ್ ಮಾಡೋದಕ್ಕೆ ಈ ಪ್ಲ್ಯಾನ್ ಮಾಡ್ಕೊಂಡಿದ್ದೀಯಾ ಹೆಂಗೇ ಅಂತ ಅಣಕಿಸುತ್ತಾರೆ. (ಅನುಪಮಾ ದ್ರಾವಿಡ್ ಕ್ಲಾಸ್ ನಲ್ಲಿದ್ದ ಚೆಂದದ ಹುಡುಗಿ) ಅದಕ್ಕೂ ದ್ರಾವಿಡ್ ಗಂಭೀರವಾಗಿಯೇ ಉತ್ತರ ನೀಡುತ್ತಾರೆ. ಅವಳೇ ಇಂಪ್ರೇಸ್ ಆಗಿದ್ದಾಳೆ. ನನಗೆ ಇಂಪ್ರೇಸ್ ಮಾಡುವ ಅಗತ್ಯ ಇಲ್ಲ ಎಂದು ಕಡ್ಡಿ ಮುರಿದಂಗೆ ದ್ರಾವಿಡ್ ಹೇಳುತ್ತಾರೆ.
ಕೊನೆಗೆ ದ್ರಾವಿಡ್ ಬಂದು ಆದರ್ಶ್ ಬಳಿ ನಿನ್ನ ನೋಟ್ಸ್ ಪುಸ್ತಕ ಕೊಡ್ತಿಯಾ. ನಾನು ಝೆರಾಕ್ಸ್ ಮಾಡಿಕೊಳ್ಳುತ್ತೇನೆ ಅಂತ ಕೇಳ್ತಾರೆ. ಆಗ ಆದರ್ಶ್ ನೋಟ್ಸ್ ಕೊಡುತ್ತೇನೆ. ಆದ್ರೆ ಗ್ಲೌಸ್ ಹಾಕೊಂಡು ಯಾಕೆ ಬರೆಯುತ್ತಿದ್ದಿಯಾ ? ಲೆಕ್ಟರ್ ನೋಟ್ಸ್ ಡಿಕ್ಟೇಟ್ ಮಾಡುವಾಗಲೂ ಗ್ಲ್ಯಾಸ್ ಹಾಕೊಂಡೇ ಬರೆದಿದ್ದಿಯಾ ? ಏನು ನಿನ್ನ ಕಥೆ. ಮೊದಲು ಆ ವಿಚಾರವನ್ನು ಹೇಳು ಅಂತ ದ್ರಾವಿಡ್ ಗೆ ಮರು ಪ್ರಶ್ನೆ ಹಾಕ್ತಾರೆ ಆದರ್ಶ್.
rahul dravid team india saakshatvಕೊನೆಗೂ ರಾಹುಲ್ ದ್ರಾವಿಡ್ ಈ ಕುತೂಹಲಕಾರಿ ಕಥೆಯನ್ನು ಹೇಳಿಯೇ ಬಿಡ್ತಾರೆ. ಆದರ್ಶ್, ನಿನಗೆ ಗೊತ್ತಾ.. ನಾನು ಕಳೆದ ಎರಡು ರಣಜಿ ಪಂದ್ಯಗಳಲ್ಲಿ ಹಳೆಯ ಗ್ಲೌಸ್ಗಳನ್ನು ಹಾಕೊಂಡೇ ಬ್ಯಾಟಿಂಗ್ ಮಾಡಿದ್ದೆ. ಹಳೆಯ ಗ್ಲೌಸ್ ಸಡಿಲವಾಗಿದ್ದರಿಂದ ನಾನು ಎರಡು ಬಾರಿಯೂ ಔಟಾಗಿಬಿಟ್ಟೆ. ಚೆಂಡು ನನ್ನ ಬ್ಯಾಟ್ ಗೆ ಟಚ್ ಆಗದಿದ್ರೂ ವಿಕೆಟ್ ಕೀಪರ್ ಕ್ಯಾಚ್ ಹಿಡಿದಾಗ ಅಂಪೈರ್ ಔಟ್ ಕೊಟ್ಟುಬಿಟ್ರು. ಯಾಕಂದ್ರೆ ನನ್ನ ಗ್ಲೌಸ್ ಸಡಿಲವಾಗಿದ್ದರಿಂದ ಚೆಂಡು ಗ್ಲೌಸ್ ಗೆ ತಾಗುತ್ತಿತ್ತು. ಕೀಪರ್ ಕ್ಯಾಚ್ ಹಿಡಿದಾಗ ಸಹಜವಾಗಿ ಶಬ್ಧದ ಆಧಾರದಲ್ಲಿ ಅಂಪೈರ್ ಔಟ್ ಕೊಟ್ಟುಬಿಟ್ರು. ಆದ್ರೆ ಚೆಂಡು ನನ್ನ ಬ್ಯಾಟ್ ಗೆ ಟಚ್ ಆಗಿಲ್ಲ ಎಂಬ ವಿಚಾರ ನನಗೆ ಮಾತ್ರ ಗೊತ್ತಿದೆ.
ಈಗ ಹೊಸ ಗ್ಲೌಸ್ ತೆಗೆದುಕೊಂಡಿದ್ದೇನೆ. ಅದು ನನಗೆ ಎಡ್ಜೆಸ್ಟ್ ಆಗಬೇಕು. ಅದಕ್ಕಾಗಿ ನಾನು ಕೈಗೆ ಗ್ಲೌಸ್ ಹಾಕೊಂಡಿದ್ದೇನೆ. ಊಟ, ತಿಂಡಿ, ಕ್ಲಾಸ್ನಲ್ಲೂ ಅಷ್ಡೇ ಯಾಕೆ ನಿದ್ದೆ ಮಾಡುವಾಗಲೂ ನಾನು ಗ್ಲೌಸ್ ಹಾಕಿಕೊಳ್ಳುತ್ತೇನೆ.ಇನ್ನು 48 ಗಂಟೆಗಳ ಕಾಲ ನಾನು ಗ್ಲೌಸ್ ಹಾಕೊಂಡಿರುತ್ತೇನೆ. ಮುಂದಿನ ಎರಡು ದಿನಗಳಲ್ಲಿ ಮುಂದಿನ ಪಂದ್ಯಕ್ಕೆ ನಾನು ರೆಡಿಯಾಗಬೇಕು. ಪಂದ್ಯದಲ್ಲಿ ನಾನು ಉತ್ತಮ ಪ್ರದರ್ಶನ ನೀಡಬೇಕು. ಯಾವುದೇ ಅಡೆತಡೆ ಇಲ್ಲದೆ ನಾನು ಬ್ಯಾಟಿಂಗ್ ಮಾಡಬೇಕು ಅಂತ ದ್ರಾವಿಡ್ ತನ್ನ ಗ್ಲೌಸ್ನ ಕಥೆಯನ್ನು ಬಿಚ್ಚಿಟ್ಟರು.
rahul dravid team india saakshatvಹಾಗಂತ ಈ ಗ್ಲೌಸ್ ನ ಕಥೆ ಇಷ್ಟಕ್ಕೆ ಮುಗಿಯುವುದಿಲ್ಲ. ಸೌರಾಷ್ಟ್ರ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಹೊಸ ಗ್ಲೌಸ್ ಹಾಕೊಂಡು ಬ್ಯಾಟಿಂಗ್ ಮಾಡಿದ್ದ ರಾಹುಲ್ ದ್ರಾವಿಡ್ ಶತಕ ಸಿಡಿಸಿದ್ದರು. ಬಳಿಕ ದೆಹಲಿ ವಿರುದ್ಧದ ಫೈನಲ್ ಪಂದ್ಯದಲ್ಲೂ ಸೆಂಚೂರಿ ದಾಖಲಿಸಿದ್ದರು. ಈ ಎರಡು ಪಂದ್ಯಗಳ ಬ್ಯಾಟಿಂಗ್ ಪ್ರದರ್ಶನದಿಂದ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾಗೆ ಎಂಟ್ರಿಯಾದ್ರು. ಲಾಡ್ರ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಆಕರ್ಷಕ 95 ರನ್ ಸಿಡಿಸಿದ್ದರು. ಅದೇ ಪಂದ್ಯದಲ್ಲಿ ಸೌರವ್ ಗಂಗೂಲಿ ಚೊಚ್ಚಲ ಶತಕ ದಾಖಲಿಸಿದ್ದರು. ಅಚ್ಚರಿ ಅಂದ್ರೆ ಕಾಲೇಜ್ ನಲ್ಲಿ ನೋಟ್ಸ್ ಬರೆದಿದ್ದ ಗ್ಲೌಸ್ ನಲ್ಲಿಯೇ ಈ ಮೂರು ಪಂದ್ಯಗಳನ್ನು ಆಡಿದ್ದರು. ಇದು ರಾಹುಲ್ ದ್ರಾವಿಡ್ ಅವರ ಹೊಸ ಗ್ಲೌಸ್‍ನ ಕಥೆ. ಮುಂದಿನ ಕಥೆ ಏನು ಎಂಬುದು ಕ್ರಿಕೆಟ್ ಇತಿಹಾಸ ಹೇಳುತ್ತಾ ಹೋಗುತ್ತೆ.
ಅದೇನೇ ಇರಲಿ, ಈ ನೈಜ ಕಥೆಯ ನೀತಿಪಾಠ. ಬದುಕಿನಲ್ಲಿ ಜವಾಬ್ದಾರಿ ಇರಬೇಕು. ನಮ್ಮ ತಪ್ಪಿಗೆ rahul dravid team india saakshatvಬೇರೆಯವರನ್ನು ಹೊಣೆ ಮಾಡಬಾರದು. ದ್ರಾವಿಡ್ ಔಟ್ ಆಗಿಲ್ಲ ಎಂಬುದು ಅವರಿಗೆ ಗೊತ್ತಿದೆ. ಹಾಗಂತ ಔಟ್ ಅಲ್ಲ ಅಂತ ಅಂಪೈರ್ ಜೊತೆ ವಾದ ಮಾಡಲಿಲ್ಲ. ವಿಕೆಟ್ ಕೀಪರ್ ಕೂಡ ಅಷ್ಟೇ. ಬ್ಯಾಟ್ ಮತ್ತು ಚೆಂಡಿನ ನಡುವೆ ಅಂತರವಿದ್ರೂ ಶಬ್ದ ಬಂದಾಗ ಸಹಜವಾಗಿಯೇ ಅಪೀಲ್ ಮಾಡ್ತಾರೆ. ಅಂಪೈರ್ ಔಟ್ ಕೊಟ್ಟು ಬಿಡ್ತಾರೆ. ಆಗ ಈಗೀನ ರೀತಿಯಲ್ಲಿ ಥರ್ಡ್ ಅಂಪೈರ್ ಇರಲಿಲ್ಲ. ರಣಜಿ ಪಂದ್ಯಗಳಲ್ಲಿ ಅಂಪೈರ್ ತೀರ್ಮಾನವೇ ಅಂತಿಮ ತೀರ್ಮಾನ. ಅದ್ರಿಂದ ಅಲ್ಲಿ ರಾಹುಲ್ ದ್ರಾವಿಡ್ ತಪ್ಪು ತನ್ನದೇ ಅಂತ ಅನ್ನಿಸಿಬಿಟ್ಟಿದೆ. ಯಾಕಂದ್ರೆ ಸಡಿಲವಾಗಿರುವ ಗ್ಲೌಸ್ ಹಾಕೊಂಡು ಆಡಿರುವುದು ನನ್ನ ತಪ್ಪು ಅಂತ ಅನ್ನಿಸಬಿಟ್ಟಿದೆ.
ಆದ್ರೆ ದ್ರಾವಿಡ್ ತಪ್ಪನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ನಡೆಸಿದ್ದರು. ಗ್ಲೌಸ್ ಅನ್ನು 48 ಗಂಟೆಗಳ ಕಾಲ ಹಾಕೊಂಡು ಕ್ಲಾಸ್, ಮನೆ, ನೋಟ್ಸ್ ಬರೆಯುತ್ತಿದ್ದಾಗ ಎಲ್ಲರು ರೇಗಿಸಿದ್ದರು. ಆಗಲೂ ದ್ರಾವಿಡ್ ತಾಳ್ಮೆ ಕಳೆದುಕೊಳ್ಳಲಿಲ್ಲ. ದ್ರಾವಿಡ್ಗೆ ಗೊತ್ತಿತ್ತು. ತನ್ನ ಕ್ರಿಕೆಟ್ ಭವಿಷ್ಯವನ್ನು ಹೀಗೆಯೇ ರೂಪಿಸಿಕೊಳ್ಳಬೇಕು ಅಂತ. ಅದಕ್ಕಾಗಿ ಕ್ರಿಕೆಟ್ ಅನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸಿದ್ದರು. ಎಲ್ಲವನ್ನು ತ್ಯಾಗ ಮಾಡಿದ್ದರು. ಬದ್ಧತೆ, ಏಕಾಗ್ರತೆಯಿಂದ ತನ್ನ ಜವಾಬ್ದಾರಿಯನ್ನು ಅರಿತುಕೊಂಡು ಮುನ್ನೆಡೆದರು.
ವಿಶ್ವ ಕ್ರಿಕೆಟ್ನಲ್ಲಿ ಕ್ಲಾಸ್, ಕಮೀಟ್ಮೆಂಟ್, ಕನ್ಸಿಸ್ಟೇನ್ಸಿಯಿಂದಲೇ ಕ್ರಿಕೆಟ್ ಜಗತ್ತು ದ್ರಾವಿಡ್ ದ್ರಾವಿಡ್ಗೆ ಸಲಾಂ ಹೊಡೆಯುತ್ತಿದೆ. ಇದೊಂದು ನೈಜ ಕಥೆ ಅಷ್ಟೇ. ಏನೇ ಆಗ್ಲಿ ನಮ್ಮ ಬದುಕು ನಮ್ಮ ಕೈಯಲ್ಲಿದೆ. ಅದನ್ನು ರೂಪಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ ಅಷ್ಟೇ

Related posts

Kane Williamson -

Kane Williamson -T20 ಇಂದ ಹೊರ ಬಿದ್ದ ವಿಲಿಯಮ್ಸನ್

April 1, 2023
IPL Tournament

IPL Tournament 2023 – ಧೋನಿ ಕಾಲು ಮುಟ್ಟಿ ನಮಸ್ಕರಿಸಿದ ಅರಿಜಿತ್ ಸಿಂಗ್

April 1, 2023
Tags: #saakshatvbccibengaluruCricketIndian cricketindiranagarakarnatakaKSCARahul DravidSportsSt. Joseph College bengaluruteam indiawolrd cricket
ShareTweetSendShare
Join us on:

Related Posts

Kane Williamson -

Kane Williamson -T20 ಇಂದ ಹೊರ ಬಿದ್ದ ವಿಲಿಯಮ್ಸನ್

by Ranjeeta MY
April 1, 2023
0

Kane Williamson -ಇಂಡಿಯನ್ ಪ್ರೀಮಿಯರ್ ಲೀಗ್​ನ ೧೬ ನೇ ಆವೃತ್ತಿ ಆರಂಭವಾಗಿದ್ದು ಗುಜರಾತ್ ಟೈಟಾನ್ಸ್ ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದೆ ​ಇದರ ಬೆನ್ನಲ್ಲೆ  ಇದೀಗ ದೊಡ್ಡ ಹೊಡೆತ...

IPL Tournament

IPL Tournament 2023 – ಧೋನಿ ಕಾಲು ಮುಟ್ಟಿ ನಮಸ್ಕರಿಸಿದ ಅರಿಜಿತ್ ಸಿಂಗ್

by Ranjeeta MY
April 1, 2023
0

IPL Tournament  2023 -ಬಹುನಿರೀಕ್ಷಿತ 2023ರ ಐಪಿಎಲ್‌ ಟೂರ್ನಿಗೆ ಶುಕ್ರವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ  ಚಾಲನೆ ನೀಡಲಾಯಿತು .ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ಗುಜರಾತ್...

ಮಾಟ, ಮಂತ್ರ, ವಶೀಕರಣ ಎಂದರೇನು ಗೊತ್ತಾ?

ಮಾಟ, ಮಂತ್ರ, ವಶೀಕರಣ ಎಂದರೇನು ಗೊತ್ತಾ?

by admin
April 1, 2023
0

ಮಾಟ, ಮಂತ್ರ, ವಶೀಕರಣ ಎಂದರೇನು ಗೊತ್ತಾ? ಈ ಸಮಸ್ಯೆಗಳಿಂದ ಹೊರಬರುವುದು ಹೇಗೆ? ಕೆಲವರು ಮಾಟ, ಮಂತ್ರ, ವಶೀಕರಣವನ್ನು ನಂಬೋದಿಲ್ಲ,ಇವತ್ತಿಗೂ ಪ್ರಪಂಚದ ಎಲ್ಲಾ ಭಾಗಗಳಲ್ಲಿ ವಾಮಾಚಾರದ ಬಗ್ಗೆ ಜನರಲ್ಲಿ...

Narendra Modi

Narendra Modi : ಮೋದಿ ಶೈಕ್ಷಣಿಕ ಅರ್ಹತೆ ವಿಚಾರ –  ಕೇಜ್ರಿವಾಲ್ ಗೆ 25 ಸಾವಿರ ದಂಡ ವಿಧಿಸಿದ ಹೈಕೋರ್ಟ್… 

by Naveen Kumar B C
March 31, 2023
0

Narendra Modi : ಮೋದಿ ಶೈಕ್ಷಣಿಕ ಅರ್ಹತೆ ವಿಚಾರ -  ಕೇಜ್ರಿವಾಲ್ ಗೆ 25 ಸಾವಿರ ದಂಡ ವಿಧಿಸಿದ ಹೈಕೋರ್ಟ್… ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ...

IPL 2023

IPL 2023 : ಯಾವ ತಂಡ ಯಾವ ತಂಡವನ್ನ, ಯಾವ ದಿನ, ಯಾವ ಸಮಯದಲ್ಲಿ ಎದುರಿಸಲಿದೆ ಎಂಬ ಟೈಂ ಟೇಬಲ್ ಇಲ್ಲಿದೆ….

by Naveen Kumar B C
March 31, 2023
0

IPL 2023 : ಯಾವ ತಂಡ ಯಾವ ತಂಡವನ್ನ, ಯಾವ ದಿನ, ಯಾವ ಸಮಯದಲ್ಲಿ ಎದುರಿಸಲಿದೆ ಎಂಬ ಟೈಂ ಟೇಬಲ್ ಇಲ್ಲಿದೆ….   ಇನ್ನೇನು  ಕೆಲವೇ ಗಂಟೆಗಳಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Astrology

Astrology- ಶನಿಯ ಸಂಚಾರದಿಂದ ಒದಗಿ ಬರಲಿದೆ ಈ 7 ರಾಶಿಯವರಿಗೆ ವಿಪರೀತ ರಾಜಯೋಗ; ಬಾರಿ ಅದೃಷ್ಟ ಶುರುವಾಗುತ್ತದೆ.

April 1, 2023
Fire disaster

Fire disaster ಅಗ್ನಿ ದುರಂತ: 7 ಕಾರ್ಮಿಕರ ಸಾವು

April 1, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram