Wednesday, March 22, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಲಂಕಾ ಪ್ರವಾಸಕ್ಕೆ ಟೀಮ್ ಇಂಡಿಯಾಗೆ ರಾಹುಲ್ ದ್ರಾವಿಡ್ ಮುಖ್ಯ ಗುರುಗಳು..!

admin by admin
June 11, 2021
in Newsbeat, Sports, ಕ್ರೀಡೆ
rahul dravid saakshatv team india
Share on FacebookShare on TwitterShare on WhatsappShare on Telegram

ಲಂಕಾ ಪ್ರವಾಸಕ್ಕೆ ಟೀಮ್ ಇಂಡಿಯಾಗೆ ರಾಹುಲ್ ದ್ರಾವಿಡ್ ಮುಖ್ಯ ಗುರುಗಳು..!

rahul dravid team india saakshatvರಾಹುಲ್ ದ್ರಾವಿಡ್… ಒಬ್ಬ ಆಟಗಾರನಾಗಿ ಟೀಮ್ ಇಂಡಿಯಾದ ಗೋಡೆಯಾಗಿದ್ದರು. ವಿಶ್ವ ಕ್ರಿಕೆಟ್ ನಲ್ಲಿ ದಿ ಗ್ರೇಟ್ ವಾಲ್ ಅಂತನೇ ಫೇಮಸ್ ಆಗಿದ್ದರು. ಅದು ಟೆಸ್ಟ್ ಪಂದ್ಯವೇ ಇರಲಿ, ಏಕದಿನ ಪಂದ್ಯವೇ ಇರಲಿ.. ರಾಹುಲ್ ದ್ರಾವಿಡ್ ಬ್ಯಾಟಿಂಗ್ ಮಾಡುತ್ತಿದ್ರೆ ಟೀಮ್ ಇಂಡಿಯಾದ ಡ್ರೆಸಿಂಗ್ ರೂಮ್ ನಿರಾಳವಾಗಿರುತ್ತಿತ್ತು. ಆದ್ರೆ ಎದುರಾಳಿ ತಂಡ ಸುಸ್ತಾಗುತ್ತಿದ್ದವು. ಈಗ ಅದೆಲ್ಲಾ ಇತಿಹಾಸದ ಪುಟಗಳಲ್ಲಿ ಸೇರಿಕೊಂಡಿದೆ.
ಇದೀಗ ರಾಹುಲ್ ದ್ರಾವಿಡ್ ಮಾಜಿ ಕ್ರಿಕೆಟಿಗ. ಹಾಗಂತ ಸುಮ್ಮನೆ ಕೂರಲಿಲ್ಲ. ಮನಸ್ಸು ಮಾಡಿದ್ರೆ ಎಸಿ ರೂಮ್ ನಲ್ಲಿ ಕುಳಿತುಕೊಂಡು ಆರಾಮವಾಗಿ ಕ್ರಿಕೆಟ್ ವೀಕ್ಷಣೆ ಮಾಡಿಕೊಂಡು ಇರಬಹುದಿತ್ತು. ಇಲ್ಲ ತನ್ನ ಕುಟುಂಬದ ಜೊತೆ ಹಾಯಾಗಿ ಕಾಲ ಕಳೆಯಬಹುದಿತ್ತು.

Related posts

Astrology

Ugadi : ಯುಗಾದಿ ಹಬ್ಬಕ್ಕೆ ಈ ಸಿಂಹ ರಾಶಿಯವರು ಜೀವನದಲ್ಲಿ ಸಿಂಹ ಗರ್ಜನೆಯತಂಹ ಅದೃಷ್ಟದ ದಿನಗಳು ಪಡೆಯಲಿದ್ದಾರೆ

March 22, 2023
Delhi Earthquake

Delhi Earthquake : ರಾಷ್ಟ್ರ ರಾಜಧಾನಿಯಲ್ಲಿ ಕಂಪಿಸಿದ ಭೂಮಿ ; ನಡುಗಿದ ಉತ್ತರ ಭಾರತ…   

March 22, 2023

ಆದ್ರೆ ರಾಹುಲ್ ದ್ರಾವಿಡ್ ಅವರ ಕ್ರಿಕೆಟ್ ಪ್ರೀತಿ ಮತ್ತು ಕ್ರಿಕೆಟ್ ಮೇಲಿನ ಬದ್ಧತೆ ಅವರನ್ನು ಸುಮ್ಮನೆ ಕೂರುವಂತೆ ಮಾಡಲಿಲಲ್ಲ. ಅದಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿರುವುದು ಕೋಚಿಂಗ್ ಹುದ್ದೆಯನ್ನು.
ಹಾಗೇ ನೋಡಿದ್ರೆ ರಾಹುಲ್ ದ್ರಾವಿಡ್ ಯಾವಾಗಲೋ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಬಹುದಿತ್ತು. ಹಿರಿಯ ಆಟಗಾರರಿಗೆ ಮಾರ್ಗದರ್ಶನ ನೀಡಿಕೊಂಡು ಇರಬಹುದಿತ್ತು. ಆದ್ರೆ ದ್ರಾವಿಡ್ ಅದನ್ನು ಮಾಡಲಿಲ್ಲ.
rahul dravid saakshatv team indiaಬದಲಾಗಿ ದ್ರಾವಿಡ್ ಕಿರಿಯರ ತಂಡಕ್ಕೆ ಕೋಚಿಂಗ್ ನೀಡಲು ಶುರು ಮಾಡಿದ್ರು. 19 ವಯೋಮಿತಿ, ಭಾರತ ಎ ತಂಡದ ಕೋಚ್ ಆಗಿ ಕೆಲಸ ಮಾಡಿದ್ದರು. ಯುವ ಕ್ರಿಕೆಟಿಗರ ಪ್ರತಿಭೆಯನ್ನು ಗುರುತಿಸಿ ಅವಕಾಶ ನೀಡಿದ್ರು. ಅವರ ತಪ್ಪುಗಳನ್ನು ಸರಿಪಡಿಸಿಕೊಂಡು ಮುನ್ನೆಡೆಸಿದ್ದರು.
ಅದರ ಫಲವೇ ಇವತ್ತಿನ ಬಲಿಷ್ಠ ಟೀಮ್ ಇಂಡಿಯಾ. ಅಷ್ಟೇ ಅಲ್ಲ ಏಕ ಕಾಲಕ್ಕೆ ಎರಡು ಬಲಿಷ್ಠ ತಂಡಗಳನ್ನು ಕಟ್ಟಲು ಬಿಸಿಸಿಐಗೆ ಸಾಧ್ಯವಾಯ್ತು. ಇದು ರಾಹುಲ್ ದ್ರಾವಿಡ್ ಹಿರಿಮೆ..
ಒಬ್ಬ ಕ್ರಿಕೆಟಿಗನಾಗಿ ತಾನು ಅನುಭವಿಸಿದ್ದ ಕಷ್ಟವನ್ನು ಈಗೀನ ಹುಡುಗರು ಪಡಬಾರದು ಅನ್ನೋ ದ್ರಾವಿಡ್ ಅವರ ಮನೋಭಾವನೆಯನ್ನು ಮೆಚ್ಚಲೇಬೇಕು. ತಾವು ಆಡುತ್ತಿರುವಾಗ ಆಧುನಿಕ ಸೌಲಭ್ಯಗಳು ಇರಲಿಲ್ಲ. ಫಿಟ್ ನೆಸ್ ಮಹತ್ವವೂ ಗೊತ್ತಿರಲಿಲ್ಲ. ಜಿಮ್ ನಲ್ಲಿ ಕಸರತ್ತು ನಡೆಸುತ್ತಿರಲಿಲ್ಲ. ಏನಿದ್ರೂ ನೆಟ್ಸ್ ನಲ್ಲಿ rahul dravid team india saakshatvಬೌಲಿಂಗ್ ಮಾಡಬೇಕು. ಬ್ಯಾಟಿಂಗ್ ತಾಲೀಮು ನಡೆಸಬೇಕು. ಮೈದಾನದಲ್ಲಿ ವ್ಯಾಯಮಕ್ಕಾಗಿ ಓಡಾಡಬೇಕಿತ್ತು. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಕ್ರಿಕೆಟಿಗರ ಫಿಟ್ ನೆಸ್ ಮತ್ತು ಅವರ ತಯಾರಿಯನ್ನು ನೋಡಿಕೊಂಡು ಅಸೂಯೆ ಪಡಬೇಕಾಗಿತ್ತು. ಆದ್ರೆ ದ್ರಾವಿಡ್ ತನ್ನ ಗರಡಿಯಲ್ಲಿ ಪಳಗಿದ ಹುಡುಗರನ್ನು ವಿಶ್ವದ ಶ್ರೇಷ್ಠ ಕ್ರಿಕೆಟಿಗರನ್ನಾಗಿ ರೂಪುಗೊಳ್ಳುವಂತೆ ಮಾಡಿದ್ದಾರೆ. ಇದೀಗ ವಿದೇಶಿಗರೇ ಟೀಮ್ ಇಂಡಿಯಾ ಆಟಗಾರರನ್ನು ನೋಡಿ ಅಸೂಯೆ ಪಡುವಂತಹ ಕೆಲಸವನ್ನು ಮಾಡಿದ್ದಾರೆ.
ಅಂದ ಹಾಗೇ ರಾಹುಲ್ ದ್ರಾವಿಡ್ ಅವರಲ್ಲಿ ಇನ್ನೊಂದು ವಿಶೇಷತೆ ಇದೆ. 19 ವಯೋಮಿತಿ ಅಥವಾ ಭಾರತ ಎ ತಂಡ ಪ್ರವಾಸ ಮಾಡುವಾಗ 15 ಆಟಗಾರರು ಇರುತ್ತಿದ್ದರು. ಆದ್ರೆ ಆ ಪ್ರವಾಸದಲ್ಲಿ ತಂಡದಲ್ಲಿರುವ ಎಲ್ಲಾ ಆಟಗಾರರು ಪಂದ್ಯವನ್ನು ಆಡುತ್ತಿದ್ದರು. ಅವರಿಗೆ ಅವಕಾಶವನ್ನು ನೀಡುತ್ತಿದ್ದರು.
ಯಾಕಂದ್ರೆ ರಾಹುಲ್ ದ್ರಾವಿಡ್ ಗೆ ತಾನು ಆಡುತ್ತಿರುವಾಗ ಈ ರೀತಿಯ ಅನುಭವಗಳು ಆಗಿವೆ. ಅದೇ ರೀತಿ ಬೇರೆ ಆಟಗಾರರಿಗೂ ಆಗಿದೆ. ಆಟಗಾರನೊಬ್ಬ ಸರಣಿಗೆ ಆಯ್ಕೆಯಾಗಬೇಕಾದ್ರೆ ಆತ ದೇಶಿ ಪಂದ್ಯಗಳಲ್ಲಿ 700-800 ರನ್ ಗಳನ್ನು ದಾಖಲಿಸಬೇಕಿತ್ತು. ಕಷ್ಟಪಟ್ಟು ರನ್ ಗಳಿಸಿ ತಂಡಕ್ಕೆ rahul dravid team india saakshatvಆಯ್ಕೆಯಾದಾಗ ಆತನಿಗೆ ಆಡುವ ಅವಕಾಶ ಸಿಗುತ್ತಿರಲಿಲ್ಲ. ಸರಣಿಯ ನಂತರ ಆತ ಮತ್ತೆ ದೇಶಿ ಪಂದ್ಯಗಳನ್ನು ಆಡಬೇಕು. ಆಗ ಆತನಿಗೆ ಅವಕಾಶ ಸಿಗೊತ್ತೋ ಇಲ್ಲವೋ ಗೊತ್ತಿಲ್ಲ. ಹೀಗಾಗಿ 15 ಆಟಗಾರರು ಬಲಿಷ್ಠವಾಗಿರುವಾಗ ಎಲ್ಲಾ ಆಟಗಾರರಿಗೂ ಅವಕಾಶ ನೀಡುವ ದ್ರಾವಿಡ್ ಅವರ ತಂತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕು.
ಇದೀಗ ರಾಹುಲ್ ದ್ರಾವಿಡ್ ಜುಲೈನಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಏಕದಿನ ಮತ್ತು ಟಿ-ಟ್ವೆಂಟಿ ಸರಣಿಗೆ ಗುರುವಾಗಿದ್ದಾರೆ. ಮೂರು ಏಕದಿನ ಮತ್ತು ಮೂರು ಟಿ-ಟ್ವೆಂಟಿ ಪಂದ್ಯಗಳ ಸರಣಿ ಜುಲೈ 13ರಿಂದ ಕೊಲಂಬೋದ ಪ್ರೇಮದಾಸ ಮೈದಾನದಲ್ಲಿ ನಡೆಯಲಿದೆ.
ತಂಡದಲ್ಲಿ ನಾಯಕ ಶಿಖರ್ ಧವನ್ ಬಿಟ್ಟು ಉಳಿದವರೆಲ್ಲಾ ಯುವ ಆಟಗಾರರೇ. ಹೆಚ್ಚಿನ ಆಟಗಾರರು ದ್ರಾವಿಡ್ ಗರಡಿಯಲ್ಲಿ ಪಳಗಿದವರೇ. ಹೀಗಾಗಿ ದ್ರಾವಿಡ್ ಅವರ ಮಾರ್ಗದರ್ಶನ ಟೀಮ್ ಇಂಡಿಯಾದ ಭವಿಷ್ಯದ ಆಟಗಾರರಿಗೆ ಮತ್ತೆ ಸಿಗಲಿದೆ.
ಒಟ್ಟಾರೆ, ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಗೋಡೆ ಮಾತ್ರವಲ್ಲ. ಇದೀಗ ಪೌಂಡೇಷನ್ ಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ. ಜೊತೆಗೆ ವಿಶ್ವ ಕ್ರಿಕೆಟ್ ನಲ್ಲಿ ಟೀಮ್ ಇಂಡಿಯಾದ ಯಶಸ್ಸಿನ ಗೋಪುರವನ್ನು ಕಟ್ಟುತ್ತಿದ್ದಾರೆ. ಅದಕ್ಕಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಯುವ ಕ್ರಿಕೆಟಿಗರನ್ನು ರೆಡಿ ಮಾಡುತ್ತಿದ್ದಾರೆ.

Tags: bccibengaluruCricketindiaindiranagarakarnatakanca head coachRahul DravidSportsteam indiaworld cricket
ShareTweetSendShare
Join us on:

Related Posts

Astrology

Ugadi : ಯುಗಾದಿ ಹಬ್ಬಕ್ಕೆ ಈ ಸಿಂಹ ರಾಶಿಯವರು ಜೀವನದಲ್ಲಿ ಸಿಂಹ ಗರ್ಜನೆಯತಂಹ ಅದೃಷ್ಟದ ದಿನಗಳು ಪಡೆಯಲಿದ್ದಾರೆ

by Namratha Rao
March 22, 2023
0

Ugadi : ಯುಗಾದಿ ಹಬ್ಬಕ್ಕೆ ಈ ಸಿಂಹ ರಾಶಿಯವರು ಜೀವನದಲ್ಲಿ ಸಿಂಹ ಗರ್ಜನೆಯತಂಹ ಅದೃಷ್ಟದ ದಿನಗಳು ಪಡೆಯಲಿದ್ದಾರೆ ಮಾರ್ಚ್ 22 ರಂದು ಯುಗಾದಿ. ಬಿಡಿಸಿ ಹೇಳಿದರೆ ಯುಗದ...

Delhi Earthquake

Delhi Earthquake : ರಾಷ್ಟ್ರ ರಾಜಧಾನಿಯಲ್ಲಿ ಕಂಪಿಸಿದ ಭೂಮಿ ; ನಡುಗಿದ ಉತ್ತರ ಭಾರತ…   

by Naveen Kumar B C
March 22, 2023
0

Delhi Earthquake :  ರಾಷ್ಟ್ರ ರಾಜಧಾನಿಯಲ್ಲಿ ಕಂಪಿಸಿದ ಭೂಮಿ ; ನಡುಗಿದ ಉತ್ತರ ಭಾರತ… ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೂಕಂಪ ಸಂಭವಿಸಿದ್ದು ಹಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದ...

Siddaramaiah

PUC, ಪದವಿ ವಿದ್ಯಾರ್ಥಿಗಳಿಗೆ  ಉಚಿತ ಶಿಕ್ಷಣ ; ಪುನರುಚ್ಚರಿಸಿದ ಸಿ ಎಂ ಬೊಮ್ಮಾಯಿ… 

by Naveen Kumar B C
March 22, 2023
0

PUC, ಪದವಿ ವಿದ್ಯಾರ್ಥಿಗಳಿಗೆ  ಉಚಿತ ಶಿಕ್ಷಣ ; ಪುನರುಚ್ಚರಿಸಿದ ಸಿ ಎಂ ಬೊಮ್ಮಾಯಿ… ರಾಜ್ಯದಲ್ಲಿ ಈ ಸಾಲಿನಿಂದ ಪಿಯುಸಿಯಿಂದ ಪದವಿವರೆಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ, ದುಡಿಯುವ 30...

Lakshmi

Astrology : ಯುಗಾದಿ ಅಮಾವಾಸ್ಯೆಯಿಂದ ಈ ರಾಶಿಯವರಿಗೆ ನೆಮ್ಮದಿಯ ಉದ್ಯೋಗ, ಆರೋಗ್ಯ, ಶಿಕ್ಷಣ, ಧನ ಸಂಪತ್ತಿನ ಅಪಾರ ಯಶಸ್ಸಿನ ರಾಜಯೋಗ..

by Naveen Kumar B C
March 21, 2023
0

ಯುಗಾದಿ ಅಮಾವಾಸ್ಯೆಯಿಂದ ಈ ರಾಶಿಯವರಿಗೆ ನೆಮ್ಮದಿಯ ಉದ್ಯೋಗ, ಆರೋಗ್ಯ, ಶಿಕ್ಷಣ, ಧನ ಸಂಪತ್ತಿನ ಅಪಾರ ಯಶಸ್ಸಿನ ರಾಜಯೋಗ.. ಭಾರತ ರಾಷ್ಟ್ರ ಹಿಂದೂ ಧರ್ಮ, ಸಂಸ್ಕೃತಿ ಪುರಾತನ ಸನಾತನ...

D K Shiva Kumar

Karnataka Election 2023  : ಕಾಂಗ್ರೆಸ್ ನ 100ಕ್ಕೂ ಹೆಚ್ಚು ಅಭ್ಯರ್ಥಿಗಳ ಮೊದಲ ಪಟ್ಟಿ  ನಾಳೆ ಬಿಡುಗಡೆ – D K ಶಿವಕುಮಾರ್… 

by Naveen Kumar B C
March 21, 2023
0

Karnataka Election 2023  : ಕಾಂಗ್ರೆಸ್ ನ 100ಕ್ಕೂ ಹೆಚ್ಚು ಅಭ್ಯರ್ಥಿಗಳ ಮೊದಲ ಪಟ್ಟಿ  ನಾಳೆ ಬಿಡುಗಡೆ – D K ಶಿವಕುಮಾರ್… ಕರ್ನಾಟಕ ವಿಧಾನಸಭಾ ಚುನಾವಣೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Astrology

Ugadi : ಯುಗಾದಿ ಹಬ್ಬಕ್ಕೆ ಈ ಸಿಂಹ ರಾಶಿಯವರು ಜೀವನದಲ್ಲಿ ಸಿಂಹ ಗರ್ಜನೆಯತಂಹ ಅದೃಷ್ಟದ ದಿನಗಳು ಪಡೆಯಲಿದ್ದಾರೆ

March 22, 2023
Delhi Earthquake

Delhi Earthquake : ರಾಷ್ಟ್ರ ರಾಜಧಾನಿಯಲ್ಲಿ ಕಂಪಿಸಿದ ಭೂಮಿ ; ನಡುಗಿದ ಉತ್ತರ ಭಾರತ…   

March 22, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram